Tuesday, May 3, 2011

ರತ್ನನ್ ಯೋಚ್ನೆ.


ಬಯಸಿದ ಸಾಮನ್ ಬೇಕಾದಂಗೆ
ಇರಲಿ ಇಲ್ದೇನ್ ಇರಲಿ-
ತಾಪತ್ರೇಯನಕ್ ತಪ್ಪಿದ್ದಲ್ಲ!
ಸುಳ್ಳಂತ್ ಅನ್ನೌನ್ ಬರಲಿ!

ಬುಂಡೇಲ್ ಒಂದ್ ತೊಟ್ ಇರೊಗಂಟ್ಲೂನೆ
ನಿದ್ದೆ ಗಿದ್ದೆ ಬರದು!
ಬುಂಡೇ ಕಾಲಿ ಆಗೋದ್ರನಕ
ನಿದ್ದೆ ಬರಲೇ ಬರದು!

ಈ ತಾಪತ್ರೇನ್ ತಳ್ಳಾಕಾಕೆ
ಏನ್ ಮಾಡ್ಬೇಕೊ ಕಾಣೆ!
ಯೋಚಿಸ್ದಸೂ ತಗಲ್ಕೋಂತೈತ್ ಆ
ಯೋಚ್ನೇಗ್ ಒಂದ್ ಒಸ್ ಸಾಣೆ!

ಬಯಸಿದ್ ಸಾಮಾನ್ ಬೇಕಾದಂಗೆ
ಇರಲಿ ಇಲ್ದೇನ್ ಇರಲಿ-
ತಾಪತ್ರೇಯನಕ್ ತಪ್ಪಿದ್ದಲ್ಲ!
ಸುಳ್ಳಂತ್ ಅನ್ನೌನ್ ಬರಲಿ.

No comments:

Post a Comment

"RSS ಮತ್ತು DSS - ಒಂದು ತೌಲನಿಕ ಅಧ್ಯಯನ"- ಪ್ರವೀಣಕುಮಾರ M

RSS (ರಾಷ್ಟ್ರೀಯ ಸ್ವಯಂಸೇವಕ ಸಂಘ) ತನ್ನ 100 ನೇ ವರ್ಷದ ಸಂಭ್ರಮವನ್ನು ದೇಶದಾದ್ಯಂತ ಆಚರಿಸುತ್ತಿದೆ. ಇದೇ ಸಂದರ್ಭದಲ್ಲಿ ಕಾಂಗ್ರೆಸ್ ಮತ್ತು ಆ ಪಕ್ಷವನ್ನು  ಬೆಂಬಲಿಸುವ ...