ಪೌರತ್ವ ತಿದ್ದುಪಡಿ ಕಾಯಿದೆಯ ವಿರೋಧದ ಸಂದರ್ಭದಲ್ಲಿ ಉತ್ತರ ಪ್ರದೇಶದ ಮುಸಲ್ಮಾನ
ಧುರೀಣರೊಬ್ಬರು ಭಾಷಣದಲ್ಲಿ ಘೋಷಿಸಿದ್ದು . .”ಜಗತ್ತಿನ ಎಲ್ಲ ಮುಸಲ್ಮಾನರೂ ನನ್ನ ಅಣ್ಣ
ತಮ್ಮಂದಿರು”. ಸತ್ಯವೇ ! ಬರೀ ಮುಸಲ್ಮಾನರೇಕೆ ? ಜಗತ್ತಿನ ಎಲ್ಲ ಮನುಷ್ಯರೂ ನನ್ನ
ಅಣ್ಣ ತಮ್ಮಂದಿರೇ. ವಸುಧೈವ ಕುಟುಂಬಕಂ ಎಂದು ನಂಬಿದವನು ನಾನು. ಸರಹದ್ದುಗಳ ಅವಶ್ಯಕತೆ
ಇರಲಿಲ್ಲ. ಗಡಿ ಕಾಯುವ ಸೈನಿಕ ಬೇಕಿರಲಿಲ್ಲ. ಪೌರತ್ವದ ಪ್ರಶ್ನೆಯೇ ಇರಲಿಲ್ಲ. ನನಗಂತೂ
ಏನೂ ಬೇಕೇ ಇರಲಿಲ್ಲ.
ತಪ್ಪೋ ಸರಿಯೋ ! ಮುಂಚೂಣಿಯಲ್ಲಿದ್ದ ವಿದ್ಯಾವಂತ
ಧುರೀಣರು ದೇಶದ ಸ್ವಾತಂತ್ರ್ಯದ ಸಮಯದಲ್ಲಿ, ಅವರ ವಿವೇಕದಲ್ಲಿ, ಧರ್ಮದ ಆಧಾರದಲ್ಲಿ
ದೇಶವನ್ನು ವಿಭಜಿಸಿದರು. ಧುರೀಣರಲ್ಲಿ ಮುಕ್ಕಾಲು ಮೂರು ವಾಸಿ ವಕೀಲರು... ಭಾವಕ್ಕಿಂತ
ತರ್ಕವೇ ಮುಖ್ಯವಾಯಿತೇನೋ ! ಮೇಜಿನ ಮೇಲಿನ ಭೂಪಟದಲ್ಲಿ ಗೆರೆಗಳನ್ನು ಎಳೆದು
ಸರಹದ್ದುಗಳನ್ನು ಗುರುತಿಸಿದಾಗ, ಅದೂ ಧರ್ಮದ ಆಧಾರದ ಮೇಲೆ ಗುರುತಿಸಿದಾಗ, ಇಲ್ಲಿರುವ ಆ
ಧರ್ಮದವ ಮತ್ತು ಅಲ್ಲಿರುವ ಈ ಧರ್ಮದವನ ಮನಃಸ್ಥಿತಿಯ ಅರಿವೇ ಇರಲಿಲ್ಲ.
ಮನುಷ್ಯ
ಯಂತ್ರವಲ್ಲ. ನೆನಪುಗಳ, ಭಾವಗಳ ಮುದ್ದೆ. ಇದು ನನ್ನ ನೆಲ. ನಾನು ನಡೆದಾಡಿದ ಹಾದಿ. ನನ್ನ
ಶಾಲೆ. ನಾನು ಈಜಿದ ನದಿ, ಕೆರೆ. ನನ್ನ ಅಪ್ಪ, ಅಮ್ಮ, ಅಜ್ಜಂದಿರ ಜಾಗ. ನನ್ನ ಪೂಜಾ
ಸ್ಥಳ. ಇದೆಲ್ಲದರ ಗುರುತು ಮತ್ತು ಹತ್ತು ತಲೆಮಾರುಗಳ ಪ್ರಜ್ಞೆಯಲ್ಲಿ ಅವನ ಅಸ್ತಿತ್ವ.
ಬದುಕು
ಅನ್ನುವುದು ಬರೀ ದೈಹಿಕ ತುರ್ತಲ್ಲ. ಅದೊಂದು ಭಾವನಾತ್ಮಕ ಇರುವು. ನೆಲ ಅಂದ ಮೇಲೆ ಬರೀ
ನೆಲ, ಇದೇನು ಅದೇನು, ಅನ್ನುವುದಾದರೆ, ಸುಖಕ್ಕೆ ಹೆಂಡತಿ, ಇವಳೇನು.. ಅವಳೇನು ..ಅಂದ
ಹಾಗೇನೇ. ಮಾನಸಿಕವಾಗಿ ನನ್ನ ನೆಲ ಅನ್ನುವುದೊಂದು ನೆಲೆ. ಬುಡ ಕಿತ್ತು ಹೊರಡುವುದು
ಸುಲಭವಲ್ಲ.
ನೆಲೆ ಇಲ್ಲದವರು ವಲಸೆ ಹೋದರು. ಇದ್ದವರು ಅಲ್ಲಲ್ಲೇ ಉಳಿದರು.
ಸಮಸ್ಯೆ ಶುರುವಾದದ್ದೇ ಅಲ್ಲಿ. ಮುಸಲ್ಮಾನ ಬಂಧುಗಳಿಗೆ ಅಂತ ಹೇಳಿ ಪೂರ್ವ ಪಶ್ಚಿಮ
ಪಾಕಿಸ್ತಾನವಾಯಿತು. ಆದರೆ ಸ್ಥಿತಿವಂತ ಹಿಂದೂಗಳು ಅಲ್ಲೇ ಉಳಿದರು. ಮನೆಯಲ್ಲಿ ಸ್ವಂತ
ತಮ್ಮ, ಹೆಂಡತಿ, ಮಕ್ಕಳು ಹಸಿವೆಯಲ್ಲಿ ನರಳ್ತಿದ್ದಾರೆ. ಪಕ್ಕದ ಹಿಂದೂವಿನ ನೆಲದಲ್ಲಿ
ಪೈರು ನಳನಳಿಸ್ತಿದೆ. ಅವನ ಗೋದಾಮಿನಲ್ಲಿ ಧಾನ್ಯ ತುಂಬಿದೆ. ಕೊಟ್ಟಿಗೆಯಲ್ಲಿ ಕೆಚ್ಚಲು
ತುಂಬಿದ ಹಸು ಮೆಲುಕು ಹಾಕುತ್ತಿದೆ. ಕರು ಅಂಗಳದಲ್ಲಿ ಕುಣೀತಿದೆ. “ನನ್ನ ಆಸ್ತಿಯನ್ನು
ಇವನು ಆಕ್ರಮಿಸಿಕೊಂಡಿದ್ದಾನೆ” ಅನ್ನೋದು ಸಹಜವಾಗಿ ಉದ್ಭವಿಸಿದ ಭಾವ. ಇಲ್ಲಿ ಮನೆಯಲ್ಲಿ
ಹಸುಗೂಸು ಹಸಿವಿನಲ್ಲಿ ಹಾಲಿಗೆ ಕಿರ್ ಅಂತಿದ್ದಾಗ, ಅಲ್ಲಿ ಅವನು ಅದೇ ಹಾಲನ್ನ
ಧಾರಾಳವಾಗಿ ಕಲ್ಲು ಮೂರ್ತಿಯ ಮೇಲೆ ಸುರೀತಿದ್ದರೆ ಕಣ್ಣು ಕೆಂಪಗಾಗತ್ತೆ.
ಹೊಡೆದೋಡಿಸಬೇಕು ಅನ್ನಿಸತ್ತೆ. ಈ ಮನಃಸ್ಥಿತಿಯಲ್ಲಿ, ಇಲ್ಲದವರು ಗುಂಪಾಗಿ, ಇದ್ದವರನ್ನು
ಎಬ್ಬಿಸುವ ಪ್ರಯತ್ನ ಸಹಜ. ಇದಕ್ಕೆ ಆಳುವವರು ಕುಮ್ಮಕ್ಕು ಕೊಟ್ಟು ಧರ್ಮದ ಅಫೀಮೂ
ಬೆರೆತರೆ, ಕ್ರೌರ್ಯ ಸ್ವಾಭಾವಿಕವಾಗೇ ಉದ್ಭವಿಸತ್ತೆ. ಈ ಕ್ರೌರ್ಯಕ್ಕೆ ಈಡಾಗಿ 1970
ರಲ್ಲಿ ಅಂದಿನ ಪಶ್ಚಿಮ ಪಾಕಿಸ್ತಾನ ಇಂದಿನ ಬಾಂಗ್ಲಾದೇಶದಿಂದ ಮನೆ ಮಾರು ಕಳಕೊಂಡು ಬಂದು
ಇಲ್ಲಿ ನಿರಾಶ್ರಿತರಾಗಿ ಸಿಂಧನೂರಿನಲ್ಲಿ ನೆಲೆ ಕಾಣುತ್ತಿರುವ ಜೀವಗಳ ನೆನಪುಗಳನ್ನು ಈ
ಪುಸ್ತಕದ ಬರಹಗಳು ದಾಖಲಿಸುತ್ತವೆ.
ಮನುಷ್ಯನ್ನ ಎಬ್ಬಿಸುವುದು ಬಹಳ ಸುಲಭ.
ಮೊದಲು ಬೆಳೆ ನಾಶ ಮಾಡಿ. ಅರ್ಧ ಕುಗ್ಗುತ್ತಾನೆ. ಅವನ ಗೋದಾಮುಗಳನ್ನು ಲೂಟಿ ಮಾಡಿ.
ಮತ್ತಷ್ಟು ಕರಗತಾನೆ. ದನ ಕರುಗಳನ್ನ ಸಾಗಿಸಿ, ನೆಲ ಕಚ್ತಾನೆ. ಪೂಜಾ ಸ್ಥಳಗಳನ್ನ
ಅಪವಿತ್ರ ಮಾಡಿ - -ಗುಡಿಗೋಪುರಗಳನ್ನ ಕೆಡವಿ, ಒಂಟಿಯಾಗ್ತಾನೆ. ಅಸ್ತಿತ್ವ ಸಾಯತ್ತೆ.
ಹೆಂಡತಿಯ ಸೆರಗೆಳಿ. ಪ್ರೀತಿಯ ಮಗಳನ್ನ ಅವನೆದುರಿಗೇ ಬೆತ್ತಲು ಮಾಡಿ ಸಾಮೂಹಿಕ
ಅತ್ಯಾಚಾರಕ್ಕೆ ಈಡು ಮಾಡಿ. ಹೆಂಡತಿ ಹೆಂಡತಿಯಾಗಿ ಉಳಿಯಲ್ಲ. ಮಗಳು ಮಗಳಾಗಿ ಉಳಿಯಲ್ಲ.
ಈಗ ಅವನು ಪೂರ್ಣ ನಿರಾಶ್ರಿತ ! ಅಲೆಮಾರಿ !
ಎಲ್ಲರೂ ಅಸಭ್ಯರೇನಲ್ಲ. ಆದರೆ ಇದರ
ಚೈತನ್ಯವಿರುವ ಅಸಭ್ಯರು ಇದ್ದಾರೆ ಎನ್ನುವುದು ಸತ್ಯ. ರಾಜಕಾರಣ ಧರ್ಮದ ಅನೈತಿಕ
ನೆಂಟಸ್ತಿಕೆಯಲ್ಲಿ ಹುಟ್ಟೋದು ಸೈತಾನ. ಅವನಿಗೆ ಇಂತಹದ್ದೇ ಅನ್ನುವ ಧರ್ಮವಿಲ್ಲ. ಎಲ್ಲ
ಧರ್ಮಗಳಲ್ಲೂ ಅಷ್ಟೇ. ಜೊತೆಗಿಷ್ಟು ವಿದ್ಯೆ ಬೆರೆಸಿ ವಿವೇಕ ಕಳೆದರೆ ವಿನಾಶದ ಯಂತ್ರ
ತಯಾರಾಗತ್ತೆ. ಈ ವಿನಾಶದ ಯಂತ್ರಕ್ಕೆ ಈಡಾಗಿ, ನೆಲೆ ಅಸ್ತಿತ್ವ ಕಳಕೊಂಡು ಐವತ್ತು ವರ್ಷದ
ನಂತರವೂ ಬೆಂಗಾಡು ಸಿಂಧನೂರಿನಲ್ಲಿ ಕೂತು ನೆಲೆ ತಡಕ್ತಿರೋರ ಬದುಕು ಬವಣೆಯ ಚಿತ್ರಣ
ಇಲ್ಲಿದೆ.
Courtesy : Ayodhya Books
ಕನ್ನಡ ನಾಡು - ನುಡಿಗೆ ದುಡಿದವರ ಬಗ್ಗೆ... ಮಾಹಿತಿ ಸಂಗ್ರಹಿಸುವ ಒಂದು ಪುಟ್ಟ ಪ್ರಯಾತ್ನವೆ.. ನಮ್ಮನು ಮತ್ತು ಬ್ಲಾಗಿನ ಓರೆ ಕೋರೆಯನು ತಿದ್ದಲು, ಬ್ಲಾಗಿಗೆನಲ್ಲಿ ಬರೆಯಲು.. ನಿಮ್ಮ ಸಂಗ್ರಹವನು ಪ್ರಕಟಿಸಲು ನಮ್ಮನ್ನು ತಲುಪಲು - ಇ ಮೇಲ್ ಕಳುಹಿಸಿ kannada.info@gmail.com
Friday, February 14, 2020
ಅಪೇಕ್ಷೆಯ ಒತ್ತಡದಲ್ಲಿ ಪ್ರೀತಿ
ಅಪೇಕ್ಷೆಯ ಒತ್ತಡದಲ್ಲಿ ಪ್ರೀತಿ..
ಮನುಷ್ಯ ಜೀವಿಗಳಿಗೆ ಪ್ರೀತಿ ಎಂಬುದು ಬೇಕೆ ಬೇಕು. ಪ್ರೀತಿ ಎಂಬುದು ಸ್ವಾಭಾವಿಕವಾಗಿಅಪೇಕ್ಷೆಯ ಒತ್ತಡದಲ್ಲಿ ಪ್ರೀತಿ..
ಇರಬೇಕು ವಿನಃ ಅದು ಒಬ್ಬರ ಅಪೇಕ್ಷೆ ಆಗಬಾರದು. ಅತಿಯಾದ ಅಪೇಕ್ಷೆಯಿಂದ ಪ್ರೀತಿಯೂ ಇತ್ತೀಚಿನ ದಿನಗಳಲ್ಲಿ ಅರ್ಥ ಕಳೆದು ಕೊಳ್ಳುತ್ತಿರುವುದನ್ನು ಗಮನಿಸಬಹುದಾಗಿದೆ. ಪ್ರತಿಯೊಂದು ಮಾನವ ಜೀವಿಗಳ ಸಂಬಂಧಗಳಲ್ಲಿ ಪರಸ್ಪರ ಪ್ರೀತಿ ಇದ್ದೇ ಇರುವುದು. ಪ್ರೀತಿ ಮತ್ತು ಅಪೇಕ್ಷೆ ಒಂದಕ್ಕೊಂದು ಅವಿನಾಭಾವ ಸಂಬಂಧವನ್ನು ಹೊಂದಿರುವುದು. ಆದರೇ ಬದಲಾಗುತ್ತಿರುವ ಸಮಾಜದಲ್ಲಿ ಅದಕ್ಕೆ ತಕ್ಕಂತೆ ಬದಲಾಗುತ್ತಿರುವ ಜೀವನ ಶೈಲಿಯಲ್ಲಿ ಪ್ರೀತಿ ಮತ್ತು ಅಪೇಕ್ಷೆಗಳ ನಡುವಿನ ಸಂಬಂಧ ಬಿಗಡಾಯಿಸುತ್ತಿದೆ. ಇದರ ಪರಿಣಾಮವಾಗಿ ಇಂದು ವೃದ್ಧಾಶ್ರಮಗಳು, ಚಿಕ್ಕ ಕುಟುಂಬಗಳು, ವಿವಾಹ ವಿಚ್ಛೇದನಗಳ ಸಂಖ್ಯೆ ದಿನೇ ದಿನೇ ಹೆಚ್ಚಾಗುತ್ತಿದೆ. ಅಣ್ಣ-ತಮ್ಮ ಅಕ್ಕ-ತಂಗಿಯ ಸಂಬಂಧಗಳು ದ್ವೇಷದ ಸಂಬಂಧಗಳಾಗಿ ಬದಲಾಗುತ್ತಿರುವುದು. ಅತಿಯಾದ ಅಪೇಕ್ಷೆ ಎಂಬುದು ಪ್ರೀತಿಯನ್ನು ಒತ್ತಡದಲ್ಲಿ ಸಿಲುಕಿಸುತ್ತಿರುವದನ್ನು ಕಾಣಬಹುದಾಗಿದೆ.
ಅಪ್ಪ ಅಮ್ಮನ ಅಪೇಕ್ಷೆಯಂತೆ ಮಗ-ಮಗಳು ಇಲ್ಲ ಅಥವಾ ನಡೆದುಕೊಳ್ಳಲಿಲ್ಲ ಎಂದಾಗ ಅಪ್ಪ-ಅಮ್ಮ ಹಾಗೂ ಮಕ್ಕಳು ಎಲ್ಲರೂ ದುಖ: ಪಡುವರು. ತನ್ನ ಮಗ-ಮಗಳು ತಾನು ಹೇಳಿದ ಹಾಗೇ ಕೇಳಬೇಕು, ಅವರು ಮಾಡುವ ಕೆಲಸ ಅವರ ಜೀವನ ಎಲ್ಲವು ತಾನು ಹೇಳಿದಂತೆ ಇರಬೇಕು ಎಂದು ಪಾಲಕರು ಬಯಸುವದು ಒಂದು ಕಡೆಯಾದರೇ, ಈಗೀನ ಬದಲಾಗುತ್ತಿರುವ ಜೀವನ ಶೈಲಿಯಲ್ಲಿ ವಿಭೀನ್ನವಾಗಿ ಬದುಕು ಸಾಗಿಸುತ್ತಿರುವ ಮಕ್ಕಳ ನಡುವೆ ಪರಸ್ಪರ ಹೊಂದಾಣಿಕೆ ವಿರಳವಾಗಿದೆ. ಇಂದು ಪಾಲಕರು ಮತ್ತು ಮಕ್ಕಳ ನಡುವಿನ ಪ್ರೀತಿ ಎಂಬುದು ಈ ಕಾರಣಕ್ಕಾಗಿ ಅರ್ಥ ಕಳೆದುಕೊಳ್ಳುತ್ತಿರುವುದು.
ಗಂಡ ಹೆಂಡತಿಯ ಪ್ರೀತಿಯು ಮದುವೆಯಾಗಿ ಒಂದು ವರ್ಷದಲ್ಲಿ ಅತಿಯಾಗಿ ಇರುವುದು. ಕಾಲ ಕಳೆದಂತೆ ಅಲ್ಲಿಯೂ ಪ್ರೀತಿಯ ಪ್ರಮಾಣ ಕಡಿಮೆಯಾಗುತ್ತಾ ಹೋಗುವುದು. ಆದರೂ ಗಂಡ ಹೆಂಡತಿ ನಡುವೆ ಪ್ರೀತಿಯ ಸಾಕ್ಷೀಯಾಗಿ ಹುಟ್ಟುವ ಮಕ್ಕಳು ಆ ನಂತರದ ದಿನಗಳಲ್ಲಿ ಗಂಡ ಹೆಂಡತಿಗೆ ಬದುಕುವ ಭರವಸೆ ನೀಡುವ ಕಿರಣವಾಗಿ ಕಾಣುವರು. ಬಹುತೇಕ ಹೆಚ್ಚಿನ ದಾಂಪತ್ಯ ಜೀವನ ಸಾಗುವುದು ಆ ಒಂದು ನಂಬಿಕೆಯಿಂದ ಮಾತ್ರ. ಇಂದಿನ ದಿನಗಳಲ್ಲಿ ವೈವಾಹಿಕ ಜೀವನವನ್ನು ಪರಸ್ಪರ ಅನ್ಯೋನ್ಯವಾಗಿ ಅನುಭವಿಸುವರಿಗಿಂತ ಅನಿವಾರ್ಯವಾಗಿ ಜೀವನ ಸಾಗಿಸುವವರೇ ಹೆಚ್ಚಾಗಿರುವರು. ಪರಸ್ಪರ ದಂಪತಿಗಳಲ್ಲಿ ಪ್ರೀತಿ ಇದ್ದೇ ಇರುವುದು ಆದರೇ ಪರಸ್ಪರರ ಆಕಾಂಕ್ಷೆಗಳು ಹೆಚ್ಚಾದಾಗ ಅವರ ನಡುವಿನ ಪ್ರೀತಿ ಒತ್ತಡದಿಂದಾಗಿ ಮನಸ್ಥಾಪದ ಸ್ಥಿತಿಗೆ ಕೊಂಡೊಯ್ಯುವುದು.
ಅಣ್ಣ ತಂಗಿ ನಡುವೆ ಉತ್ತಮವಾದ ಪ್ರೀತಿ ಒಂದು ಹಂತದ ವರೆಗೆ ಇರುವುದು. ಯಾವಾಗ ಸ್ವಂತಂತ್ರವಾಗಿ ಆಲೋಚನೆ ಮಾಡಿ ತಮಗೆ ಬೇಕಾದ ಗೆಳೆಯ ಗೆಳತಿಯನ್ನು ನೋಡುಕೊಳ್ಳಲು ಅವರವರು ನೋಡುವರೋ ಅಲ್ಲಿ ಅಭಿಪ್ರಾಯ ಭೇದ ಪ್ರಾರಂಭವಾಗುವುದು. ವಯಸ್ಸಿಗೆ ತಕ್ಕಂತ ಅಗತ್ಯಗಳು ಬದಲಾವಣೆ ಆಗುವುದು ಎಂಬುದನ್ನು ಎಲ್ಲರೂ ಅರ್ಥಮಾಡಿಕೊಂಡು ಸನ್ನೀವೇಶವನ್ನು ಹಾಗೇ ಸ್ವೀಕರಿಸಿದರೇ ಯಾವುದೇ ಸಮಸ್ಯೆ ಇರುವುದಿಲ್ಲ. ಅಣ್ಣ ತಂಗಿಯ ನಡುವೆ ತಂಗಿಯೂ ತನಗೆ ಇಷ್ಟವಾದವನನ್ನು ಪ್ರೀತಿಸುವುದು ಅಣ್ಣನಿಗೆ ಇಷ್ಟವಿರುವುದಿಲ್ಲ. ಬದಲಾಗಿ ಮನೆಯವರು ನೋಡಿದ ವ್ಯಕ್ತಿಯೊಂದಿಗೆ ಸಾಂಪ್ರದಾಯಿಕವಾಗಿ ತಂಗಿಯ ಮದುವೆ ಮಾಡುವುದು ಅಣ್ಣನ ಕನಸಾಗಿರುವುದು. ಅಣ್ಣನ ಈ ರೀತಿಯ ಕನಸೆ ತಂಗಿಯ ಸ್ವಾತಂತ್ರ್ಯವನ್ನು ಕಸಿದುಕೊಳ್ಳುವುದು. ಆದರೇ ಅಣ್ಣನಾದವನು ಯಾರನ್ನೇ ಇಷ್ಟ ಪಟ್ಟರು ಅವರಿಗೆ ತಂಗಿಯಾದವಳು ಕುಟುಂಬ ಮತ್ತು ಅಣ್ಣನ ನಡುವೆ ಕೊಂಡಿಯಂತೆ ಇರಬೇಕು ಅಂದು ಅಣ್ಣ ಬಯಸುವನು. ಈ ರೀತಿಯಾಗಿ ತಮ್ಮ ಅಗತ್ಯಕ್ಕೆ/ಅಪೇಕ್ಷೇಗೆ ತಕ್ಕಂತೆ ಸಂಬಂಧಗಳ ನಡುವೆ ಪ್ರೀತಿಯನ್ನು ಬಳಸಿಕೊಳ್ಳುವುದರಿಂದ ನೈಜ ಪ್ರೀತಿ ಅರ್ಥ ಕಳೆದುಕೊಳ್ಳುತ್ತಿರುವುದು.
ಹುಡುಗ ಹುಡುಗಿ ಪ್ರೀತಿ : ಯೌವನದಲ್ಲಿ ಪ್ರೀತಿ ಪ್ರೇಮ ಸಹಜವಾಗಿರುವುದು. ಪ್ರಾರಂಭದಲ್ಲಿ ಪ್ರೀತಿಯ ಅನುಭವ ಸಹಾ ಪರಸ್ಪರಿರಿಗೆ ಸಂತೋಷವನ್ನು ನೀಡುವುದು. ಪ್ರೀತಿ ಪ್ರಾರಂಭವಾದ ದಿನಗಳಲ್ಲಿ ಪರಸ್ಪರ ಯಾವ ತ್ಯಾಗಕ್ಕೂ ಸಿದ್ದರಾಗುವರು. ಕಾಲ ಕಳೆದಂತೆ ಪ್ರೀತಿಯ ನೈಜತೆ ಅರ್ಥವಾಗಲು ಪ್ರಾರಂಭವಾಗುವುದು ಪರಸ್ಪರರ ಅಪೇಕ್ಷೆಗಳು ಬದುಕುವ ಶೈಲಿ, ಸಮಾಜವನ್ನು ನೋಡುವ ರೀತಿ ಈ ಎಲ್ಲವೂ ಸಹಾ ಪ್ರೀತಿಯ ಮೇಲೆ ಪರಿಣಾಮ ಬೀರಲು ಪ್ರಾರಂಭಿಸುವುದು. ಪ್ರಾರಂಭದ ದಿನದಿಂದ ಕೊನೆತನಕ ಆಯಾ ಕಾಲಘಟ್ಟಕೆ ತಕ್ಕಂತೆ ಅಥರ್ೈಸುವಿಕೆ ಪ್ರೀತಿ ಇದ್ದರೇ ಅದೇ ನೈಜ ಪ್ರೀತಿಯಾಗಿರುವುದು. ಬದಲಾಗಿ ದೈಹಿಕ ಆಕ್ಷಾಂಕ್ಷೆ, ಆಸ್ತಿಯ ಆಸೆ, ನೌಕರಿಯ ಆಸೆ, ಸೌಂದರ್ಯ ಈ ಎಲ್ಲಾ ಅಪೇಕ್ಷೆಗಳೆ ಪ್ರೀತಿಸಲು ಮೂಲ ಕಾರಣಾವಾದರೆ ಆ ಪ್ರೀತಿ ಅರ್ಥ ಕಳೆದುಕೊಳ್ಳುವುದರಲ್ಲಿ ಯಾವ ಸಂದೇಹವೂ ಇಲ್ಲ.
ಒಟ್ಟಾರೆಯಾಗಿ ಅಪೇಕ್ಷೆ ಎಂಬುದು ಅತಿಯಾದಾಗ ಸಂಬಂಧಗಳ ನಡುವಿನ ಪ್ರೀತಿ ತಾನಾಗಿಯೇ ಅರ್ಥ ಕಳೆದುಕೊಳ್ಳುವುದನ್ನು ಕಾಣಬಹುದಾಗಿದೆ. ನಮ್ಮ ಅತಿಯಾದ ಅಪೇಕ್ಷೆಯ ಮೇಲೆ ಹಿಡಿತವನ್ನು ಸಾಧಿಸಿ ಎಲ್ಲ ರೀತಿಯ ಸಂಬಂಧಗಳನ್ನು ಪ್ರೀತಿಯಿಂದ ಉಳಿಸಿಕೊಳ್ಳುವ ಬಗ್ಗೆ ಈ ಸಂದರ್ಭದಲ್ಲಿ ಅವಲೋಕಿಸಿಕೊಂಡರೆ ಒಳ್ಳೆಯದಲ್ಲವೇ?
.ವಿವೇಕ ಬೆಟ್ಕುಳಿ
Tuesday, January 22, 2019
ಶ್ರೀ ಶ್ರೀ ಶ್ರೀ ನಮನ
ಉರಿವ ತೇಜಕೂ
ಬಡಿವುದೇ ಸಿಡಿಲು
ಉಸಿರ ದಾಟಿರೆ ಒಡಲು?
ಸಿದ್ಧಗಂಗೆಯ ಸಿದ್ಧ
ಬಡಿಸಿದ್ದನಮೃತವ
ಮೃಡಭಕ್ತ ಶ್ರೀಶಿವಕುಮಾರ,
ಇಳೆಯ ಪುಣ್ಯವದೆಲ್ಲ
ತೊಳಗುತಿದೆ ನಭವ, ಶ್ರೀ
ಇಷ್ಟಲಿಂಗವೆ ರವಿರೂಪವಿಂದು!
ರಘು ವಿ.
ಸಂಪಾದಕ, ವಿವೇಕಹಂಸ.
ಬಡಿವುದೇ ಸಿಡಿಲು
ಉಸಿರ ದಾಟಿರೆ ಒಡಲು?
ಸಿದ್ಧಗಂಗೆಯ ಸಿದ್ಧ
ಬಡಿಸಿದ್ದನಮೃತವ
ಮೃಡಭಕ್ತ ಶ್ರೀಶಿವಕುಮಾರ,
ಇಳೆಯ ಪುಣ್ಯವದೆಲ್ಲ
ತೊಳಗುತಿದೆ ನಭವ, ಶ್ರೀ
ಇಷ್ಟಲಿಂಗವೆ ರವಿರೂಪವಿಂದು!
ರಘು ವಿ.
ಸಂಪಾದಕ, ವಿವೇಕಹಂಸ.
Friday, October 12, 2018
ಸಂಗ್ರಹ
ಯಾರೋ ಪುಣ್ಯಾತ್ಮರು ಬಹಳ ಸುಂದರವಾಗಿ ಬರೆದಿದ್ದಾರೆ ತಪ್ಪದೇ ಓದಿ
ನಾನು ಜೀವನದಲ್ಲಿ ಗೆದ್ದೇ ಗೆಲ್ಲುವೇ ಎನ್ನುವವರು ದಯವಿಟ್ಟು ಓದಿ.
ಸಾಧಿಸುವ ಛಲ ಇದ್ದರೆ ಜಗತ್ತನ್ನೇ ಗೆಲ್ಲಬಹುದು.
ಒಂದು ಯುದ್ಧದಿಂದಾಗಿ ತಿಮ್ಮಪ್ಪ ನಾಯಕ ಕನಕದಾಸ ನಾಗಿ ಬದಲಾದ.
ನಾರದ ನ ಭೇಟಿಯಿಂದ ಕ್ರೂರನಾಗಿದ್ದ ವ್ಯಕ್ತಿ ವಾಲ್ಮೀಕಿ ಯಾದ.
ಎಂಟನೆಯ ವಯಸ್ಸಿಗೆ ಉಪನಯನವನ್ನು ತಿರಸ್ಕರಿಸಿ
ಬಸವಣ್ಣ ಜಗಜ್ಯೋತಿ ಯಾದ.
ಸತತ ಪ್ರಯತ್ನ ಪ್ರಾಮಾಣಿಕ ಪರಿಶ್ರಮದಿಂದ ಡಾ.ಬಿ.ಆರ್ ಅಂಬೇಡ್ಕರ್ ಸಂವಿಧಾನ ಶಿಲ್ಪಿ ಯಾದ.
ತನ್ನ ಅದ್ಬುತ ವಿಚಾರಧಾರೆಗಳಿಂದ ಜಗತ್ತನ್ನು ಗೆದ್ದ ನರೇಂದ್ರ ವಿವೇಕಾನಂದ ನಾದ.
ತನ್ನ ಮಗನಿಗೆ ಊಟ ಹಾಕಲಾಗದೆ ತನ್ನ ಮಗನನ್ನೇ ವಿಷ ಹಾಕಿ ಕೊಲ್ಲಲು ತಾಯಿ ನಿರ್ಧರಿಸಿದ್ದಳು.
ಅಂದು ಅಚಾನಕ್ ಬದುಕುಳಿದ ವ್ಯಕ್ತಿ ಇಂದು ಕನ್ನಡದ ಸೂಪರ್ ಸ್ಟಾರ್ ಉಪೇಂದ್ರ ನಾದ.
ತನ್ನ ಬಡತನ ಹಸಿವುಗಳನ್ನು ಮೆಟ್ಟಿ ನಿಂತು ಸತತ ಅಬ್ಯಾಸದಿಂದ ರವಿ ಡಿ ಚನ್ನಣ್ಣನವರ್ ಇಂದು ಐಪಿಎಸ್ ಅಧಿಕಾರಿಯಾದ.
ಅಧಿಕಾರದ ವ್ಯಾಮೋಹಕ್ಕೆ ಬಲಿಯಾಗದೆ ಎಸ್.ಆರ್.ಕಂಠಿ ಯವರು ಮುಖ್ಯಮಂತ್ರಿಯ ಸ್ಥಾನ ಬಿಟ್ಟು ಕೊಟ್ಟು ರಾಜಕೀಯದ "ಭರತ" ನಾದ.
ಇಳಿವಯಸ್ಸಿನಲ್ಲಿಯೂ ಸರ್ಕಾರದ ತಪ್ಪು ನಿರ್ಧಾರ, ಭ್ರಷ್ಟಾಚಾರದ ವಿರುದ್ಧ ಚಾಟಿ ಬೀಸಿ ಸತ್ಯಾಗ್ರಹ ನಡೆಸಿದ ಅಣ್ಣಾ ಹಜಾರೆ ಆಧುನಿಕ ಗಾಂಧಿ ಯಾದರು.
ಬೀದಿ ದೀಪದಲ್ಲಿ ಓದಿದ ವಿಶ್ವೇಶ್ವರಯ್ಯ ಭಾರತ ರತ್ನ ನಾದ.
ಎಂಟನೇ ತರಗತಿ ಫೇಲ್ ಆದ ಸಚಿನ್ ಇಂದು ಕ್ರಿಕೆಟ್ ಲೋಕದ ದೇವರಾದ.
ಪೆಟ್ರೋಲ್ ಹಾಕುತ್ತಿದ್ದ ಅಂಬಾನಿ ಇಂದು ಭಾರತದ ನಂಬರ್ ಒನ್ ಶ್ರೀಮಂತನಾದ.
ಗೋಪಾಲ್ ಕೃಷ್ಣ ರೋಲಂಕಿ ಎಂಬ ಆಂಧ್ರದ ಯುವಕ ಇಂಗ್ಲಿಷ್ ಮತ್ತು
ಹಿಂದಿ ಬರದಿದ್ದರೂ ಐಎಎಸ್ ಪರೀಕ್ಷೆಯಲ್ಲಿ ಮೂರನೇ Rank ಬಂದ.
ಚಪ್ಪಲಿ ಹೋಲಿಯುತ್ತಿದ್ದ ಕುಟುಂಬದಿಂದ ಬಂದ ಅಬ್ರಹಾಂ ಲಿಂಕನ್ ಸತತ ಸೋಲು ಕಂಡರು ಕೊನೆಗೆ ಅಮೆರಿಕದ ಅಧ್ಯಕ್ಷ ನಾದ.
ಎನ್. ಅಂಬಿಕಾ ಎಂಬ ಕಾನ್ಸ್ಟೇಬಲ್ ನ ಹೆಂಡತಿ ತನ್ನ ಗಂಡ ಐಪಿಎಸ್ ಅಧಿಕಾರಿಗೆ ಕೊಡುವ ಗೌರವವನ್ನು ಕಂಡು ತಾನು ಹಾಗೆಯೇ ಅಧಿಕಾರಿಯಾಗಬೇಕೆಂದು ಛಲಬಿಡದೆ ಗೆದ್ದ ಮಹಿಳೆ (ಈಕೆಯ ಬದುಕು ತುಂಬಾ ರೋಚಕವಾಗಿದೆ ಮಿಸ್ ಮಾಡದೆ ತಿಳಿದುಕೊಳ್ಳಿ).
ನಮ್ಮ ಜಿಲ್ಲೆಯವನೊಬ್ಬ
ಐಎಎಸ್ ಅಧಿಕಾರಿಯಾದ.
ನಮ್ಮ ತಾಲೂಕಿನವನೊಬ್ಬ
ಕೆ.ಎ.ಎಸ್ ಅಧಿಕಾರಿಯಾದ.
ನಮ್ಮ ಊರಿನವನೊಬ್ಬ
ಪಿ.ಎಸ್.ಐ. ಆದ.
ನಮ್ಮ ಓಣಿಯವನೊಬ್ಬ
ಎಫ್.ಡಿ.ಎ. ಆದ.
ನಮ್ಮ ಮನೆಯ ಪಕ್ಕದವನೊಬ್ಬ
ಎಸ್.ಡಿ.ಎ ಆದ.
ಇದೆಲ್ಲವನ್ನು ನೋಡಿದರೂ ನಾವು ಏನು ಆಗಲಿಲ್ಲ...? ಏಕೆಂದರೆ ನಮ್ಮಲ್ಲಿ ಸಾಧಿಸುವ ಛಲವೇ ಸತ್ತು ಹೋಗಿರಬಹುದೇನೋ ಅನ್ನಿಸುತ್ತಿದೆ ಮತ್ತೆ ಇನ್ನು ಮುಂದಾದರು ನಾವು ಓದಬೇಕೆನ್ನಿಸುತ್ತದೆ.
ಕಷ್ಟ ಯಾರಿಗಿಲ್ಲಾ...?
ಅವಮಾನ ಯಾರಿಗಾಗಿಲ್ಲ...??
ಸೋಲನ್ನ ಯಾರು ನೋಡಿಲ್ಲ...??
ಕಷ್ಟ ಗಳನ್ನ ಮನುಷ್ಯ ಮೌನ ವಾಗಿ ದಾಟಬೇಕು.
ಪರಿಶ್ರಮ ಸದ್ದಿಲ್ಲದೆ ಸಾಗುತ್ತಿರಬೇಕು.
ಆಗ ಸಿಗುವ ಯಶಸ್ಸಿನ ಫಲ ಜಗತ್ತಿಗೆ ಕೇಳಿಸುವಷ್ಟು ಜೊರಾಗಿರುತ್ತದೆ.
ಜಗತ್ತಿನಲ್ಲಿ ಯಾವುದು ಬೇಕಾದರು ಮೋಸ ಮಾಡಬಹುದು.
ಆದರೆ ಪುಸ್ತಕ ಎಂದಿಗೂ ಮಾಡಲಾರದು.
ಎದೆಗೆ ಬಿದ್ದ ಅಕ್ಷರ..
ಭೂಮಿಗೆ ಬಿದ್ದ ಬೀಜ.. ಮುಂದೊಂದು ದಿನ ಫಲ ಕೊಡುವುದು ಎಂಬುವುದುಂಟು.
ಪುಸ್ತಕ ಗಳನ್ನ ಪ್ರೀತಿಸುವವನಿಗೆ ಸ್ನೇಹಿತರ ಅಗತ್ಯವಿಲ್ಲ.
ಕಠಿಣ ಪರಿಶ್ರಮ,ದೃಢ ಸಂಕಲ್ಪ,ತಾಳ್ಮೆ ಯೊಂದಿದ್ದರೆ ಏನನ್ನಾದರೂ ಸಾದಿಸಬಹುದು.
ಇಂತಹ ಸಂದೇಶಗಳು ಹಲವರಿಗೆ ಸ್ಫೂರ್ತಿ ಯಾಗಬಹುದು.
ಕೆಲವರಿಗೆ ಅಸಡ್ಡೆಯಾಗಿ ಕಾಣಬಹುದು..!!
ಆದರೆ.
ಸಾಧನೆ ಮಾಡುವವನಿಗೆ ಸಾಧಿಸುವ ಛಲ ಬೇಕು ಅಷ್ಟೇ.
ಭವಿಷ್ಯದ ಬಗ್ಗೆ ಚಿಂತಿಸದ್ದರೆ ನಿಮಗೆ ಭವಿಷ್ಯವೇ ಇರುವುದಿಲ್ಲ ಎಂದು ಗಾರ್ಲ ವರ್ದಿ ರವರು ಹೇಳುತ್ತಾರೆ.
ಯೋಚಿಸಿ ನಿರ್ಧರಿಸಿ.
ಯಾಕಂದ್ರೆ ಕಳೆದು ಹೋದ ಸಮಯ ಮತ್ತೆ ಬರುವುದಿಲ್ಲ
ನಾನು ಜೀವನದಲ್ಲಿ ಗೆದ್ದೇ ಗೆಲ್ಲುವೇ ಎನ್ನುವವರು ದಯವಿಟ್ಟು ಓದಿ.
ಸಾಧಿಸುವ ಛಲ ಇದ್ದರೆ ಜಗತ್ತನ್ನೇ ಗೆಲ್ಲಬಹುದು.
ಒಂದು ಯುದ್ಧದಿಂದಾಗಿ ತಿಮ್ಮಪ್ಪ ನಾಯಕ ಕನಕದಾಸ ನಾಗಿ ಬದಲಾದ.
ನಾರದ ನ ಭೇಟಿಯಿಂದ ಕ್ರೂರನಾಗಿದ್ದ ವ್ಯಕ್ತಿ ವಾಲ್ಮೀಕಿ ಯಾದ.
ಎಂಟನೆಯ ವಯಸ್ಸಿಗೆ ಉಪನಯನವನ್ನು ತಿರಸ್ಕರಿಸಿ
ಬಸವಣ್ಣ ಜಗಜ್ಯೋತಿ ಯಾದ.
ಸತತ ಪ್ರಯತ್ನ ಪ್ರಾಮಾಣಿಕ ಪರಿಶ್ರಮದಿಂದ ಡಾ.ಬಿ.ಆರ್ ಅಂಬೇಡ್ಕರ್ ಸಂವಿಧಾನ ಶಿಲ್ಪಿ ಯಾದ.
ತನ್ನ ಅದ್ಬುತ ವಿಚಾರಧಾರೆಗಳಿಂದ ಜಗತ್ತನ್ನು ಗೆದ್ದ ನರೇಂದ್ರ ವಿವೇಕಾನಂದ ನಾದ.
ತನ್ನ ಮಗನಿಗೆ ಊಟ ಹಾಕಲಾಗದೆ ತನ್ನ ಮಗನನ್ನೇ ವಿಷ ಹಾಕಿ ಕೊಲ್ಲಲು ತಾಯಿ ನಿರ್ಧರಿಸಿದ್ದಳು.
ಅಂದು ಅಚಾನಕ್ ಬದುಕುಳಿದ ವ್ಯಕ್ತಿ ಇಂದು ಕನ್ನಡದ ಸೂಪರ್ ಸ್ಟಾರ್ ಉಪೇಂದ್ರ ನಾದ.
ತನ್ನ ಬಡತನ ಹಸಿವುಗಳನ್ನು ಮೆಟ್ಟಿ ನಿಂತು ಸತತ ಅಬ್ಯಾಸದಿಂದ ರವಿ ಡಿ ಚನ್ನಣ್ಣನವರ್ ಇಂದು ಐಪಿಎಸ್ ಅಧಿಕಾರಿಯಾದ.
ಅಧಿಕಾರದ ವ್ಯಾಮೋಹಕ್ಕೆ ಬಲಿಯಾಗದೆ ಎಸ್.ಆರ್.ಕಂಠಿ ಯವರು ಮುಖ್ಯಮಂತ್ರಿಯ ಸ್ಥಾನ ಬಿಟ್ಟು ಕೊಟ್ಟು ರಾಜಕೀಯದ "ಭರತ" ನಾದ.
ಇಳಿವಯಸ್ಸಿನಲ್ಲಿಯೂ ಸರ್ಕಾರದ ತಪ್ಪು ನಿರ್ಧಾರ, ಭ್ರಷ್ಟಾಚಾರದ ವಿರುದ್ಧ ಚಾಟಿ ಬೀಸಿ ಸತ್ಯಾಗ್ರಹ ನಡೆಸಿದ ಅಣ್ಣಾ ಹಜಾರೆ ಆಧುನಿಕ ಗಾಂಧಿ ಯಾದರು.
ಬೀದಿ ದೀಪದಲ್ಲಿ ಓದಿದ ವಿಶ್ವೇಶ್ವರಯ್ಯ ಭಾರತ ರತ್ನ ನಾದ.
ಎಂಟನೇ ತರಗತಿ ಫೇಲ್ ಆದ ಸಚಿನ್ ಇಂದು ಕ್ರಿಕೆಟ್ ಲೋಕದ ದೇವರಾದ.
ಪೆಟ್ರೋಲ್ ಹಾಕುತ್ತಿದ್ದ ಅಂಬಾನಿ ಇಂದು ಭಾರತದ ನಂಬರ್ ಒನ್ ಶ್ರೀಮಂತನಾದ.
ಗೋಪಾಲ್ ಕೃಷ್ಣ ರೋಲಂಕಿ ಎಂಬ ಆಂಧ್ರದ ಯುವಕ ಇಂಗ್ಲಿಷ್ ಮತ್ತು
ಹಿಂದಿ ಬರದಿದ್ದರೂ ಐಎಎಸ್ ಪರೀಕ್ಷೆಯಲ್ಲಿ ಮೂರನೇ Rank ಬಂದ.
ಚಪ್ಪಲಿ ಹೋಲಿಯುತ್ತಿದ್ದ ಕುಟುಂಬದಿಂದ ಬಂದ ಅಬ್ರಹಾಂ ಲಿಂಕನ್ ಸತತ ಸೋಲು ಕಂಡರು ಕೊನೆಗೆ ಅಮೆರಿಕದ ಅಧ್ಯಕ್ಷ ನಾದ.
ಎನ್. ಅಂಬಿಕಾ ಎಂಬ ಕಾನ್ಸ್ಟೇಬಲ್ ನ ಹೆಂಡತಿ ತನ್ನ ಗಂಡ ಐಪಿಎಸ್ ಅಧಿಕಾರಿಗೆ ಕೊಡುವ ಗೌರವವನ್ನು ಕಂಡು ತಾನು ಹಾಗೆಯೇ ಅಧಿಕಾರಿಯಾಗಬೇಕೆಂದು ಛಲಬಿಡದೆ ಗೆದ್ದ ಮಹಿಳೆ (ಈಕೆಯ ಬದುಕು ತುಂಬಾ ರೋಚಕವಾಗಿದೆ ಮಿಸ್ ಮಾಡದೆ ತಿಳಿದುಕೊಳ್ಳಿ).
ನಮ್ಮ ಜಿಲ್ಲೆಯವನೊಬ್ಬ
ಐಎಎಸ್ ಅಧಿಕಾರಿಯಾದ.
ನಮ್ಮ ತಾಲೂಕಿನವನೊಬ್ಬ
ಕೆ.ಎ.ಎಸ್ ಅಧಿಕಾರಿಯಾದ.
ನಮ್ಮ ಊರಿನವನೊಬ್ಬ
ಪಿ.ಎಸ್.ಐ. ಆದ.
ನಮ್ಮ ಓಣಿಯವನೊಬ್ಬ
ಎಫ್.ಡಿ.ಎ. ಆದ.
ನಮ್ಮ ಮನೆಯ ಪಕ್ಕದವನೊಬ್ಬ
ಎಸ್.ಡಿ.ಎ ಆದ.
ಇದೆಲ್ಲವನ್ನು ನೋಡಿದರೂ ನಾವು ಏನು ಆಗಲಿಲ್ಲ...? ಏಕೆಂದರೆ ನಮ್ಮಲ್ಲಿ ಸಾಧಿಸುವ ಛಲವೇ ಸತ್ತು ಹೋಗಿರಬಹುದೇನೋ ಅನ್ನಿಸುತ್ತಿದೆ ಮತ್ತೆ ಇನ್ನು ಮುಂದಾದರು ನಾವು ಓದಬೇಕೆನ್ನಿಸುತ್ತದೆ.
ಕಷ್ಟ ಯಾರಿಗಿಲ್ಲಾ...?
ಅವಮಾನ ಯಾರಿಗಾಗಿಲ್ಲ...??
ಸೋಲನ್ನ ಯಾರು ನೋಡಿಲ್ಲ...??
ಕಷ್ಟ ಗಳನ್ನ ಮನುಷ್ಯ ಮೌನ ವಾಗಿ ದಾಟಬೇಕು.
ಪರಿಶ್ರಮ ಸದ್ದಿಲ್ಲದೆ ಸಾಗುತ್ತಿರಬೇಕು.
ಆಗ ಸಿಗುವ ಯಶಸ್ಸಿನ ಫಲ ಜಗತ್ತಿಗೆ ಕೇಳಿಸುವಷ್ಟು ಜೊರಾಗಿರುತ್ತದೆ.
ಜಗತ್ತಿನಲ್ಲಿ ಯಾವುದು ಬೇಕಾದರು ಮೋಸ ಮಾಡಬಹುದು.
ಆದರೆ ಪುಸ್ತಕ ಎಂದಿಗೂ ಮಾಡಲಾರದು.
ಎದೆಗೆ ಬಿದ್ದ ಅಕ್ಷರ..
ಭೂಮಿಗೆ ಬಿದ್ದ ಬೀಜ.. ಮುಂದೊಂದು ದಿನ ಫಲ ಕೊಡುವುದು ಎಂಬುವುದುಂಟು.
ಪುಸ್ತಕ ಗಳನ್ನ ಪ್ರೀತಿಸುವವನಿಗೆ ಸ್ನೇಹಿತರ ಅಗತ್ಯವಿಲ್ಲ.
ಕಠಿಣ ಪರಿಶ್ರಮ,ದೃಢ ಸಂಕಲ್ಪ,ತಾಳ್ಮೆ ಯೊಂದಿದ್ದರೆ ಏನನ್ನಾದರೂ ಸಾದಿಸಬಹುದು.
ಇಂತಹ ಸಂದೇಶಗಳು ಹಲವರಿಗೆ ಸ್ಫೂರ್ತಿ ಯಾಗಬಹುದು.
ಕೆಲವರಿಗೆ ಅಸಡ್ಡೆಯಾಗಿ ಕಾಣಬಹುದು..!!
ಆದರೆ.
ಸಾಧನೆ ಮಾಡುವವನಿಗೆ ಸಾಧಿಸುವ ಛಲ ಬೇಕು ಅಷ್ಟೇ.
ಭವಿಷ್ಯದ ಬಗ್ಗೆ ಚಿಂತಿಸದ್ದರೆ ನಿಮಗೆ ಭವಿಷ್ಯವೇ ಇರುವುದಿಲ್ಲ ಎಂದು ಗಾರ್ಲ ವರ್ದಿ ರವರು ಹೇಳುತ್ತಾರೆ.
ಯೋಚಿಸಿ ನಿರ್ಧರಿಸಿ.
ಯಾಕಂದ್ರೆ ಕಳೆದು ಹೋದ ಸಮಯ ಮತ್ತೆ ಬರುವುದಿಲ್ಲ
Sunday, August 19, 2018
ಸಂಗ್ರಹಾನುವಾದ: ಕೆ.ಪಿ.ನಾಭ ಐಲ್
*_ಇಂದು ಮಳೆ ನುಡಿಯಿತು.._*
*_ಅಂದು ನಾನು ಹಲವು ಬಾರಿ ಹೇಳಿದ್ದೆ, ಬೇಡ-ಬೇಡ ಅಂತ... ನೀವು ನನ್ನ ದಾರಿ ಅಡ್ಡಗಟ್ಟಿ ದಿರಿ.._*
*ಹೊಳೆಯೂ ಹೇಳಿತು.*
_ಅಂದು ನಾನು ತುಂಬಾ ಉಕ್ಕಿ ಹರಿದಿದ್ದೆ..._ _ಆದರೆ ನೀವು ನನ್ನ ಹೃದಯ ಹಿಸುಕಿ, ನನ್ನ ದಡವನ್ನು ಆಕ್ರಮಿಸಿದಿರಿ._
*ಭೂಮಿಯೂ ಹೇಳಿತು.*
_ಅಂದು ನಾನು ಸಾಕಷ್ಟು ಜಲ ಹೀರಿದ್ದೆ.. ಇಂದು ನೀವು ನನ್ನ ಬಾಯಿಗೆ ಕಾಂಕ್ರೀಟ್ ತುಂಬಿದಿರಿ..._
_ನಾನು ನೀರು ಸಂಗ್ರಹಿಸುತ್ತಿದ್ದ ಹೊಲ-ಜಲಾಶಯಕ್ಕೆ ನೀವು ಮಣ್ಣು ತುಂಬಿದಿರಿ...._
*ಬೆಟ್ಟಗಳೂ ನುಡಿಯಿತು...*
_ಅಂದು ನಾನು ಭೀಕರ ಗಾಳಿ-ಮಳೆಗೆ ಅಲುಗಾಡದೆ ಗಟ್ಟಿ ನಿಂತಿದ್ದೆ.. ಆದರೆ ನೀವು ನನ್ನ ಕಾಲು ತುಂಡರಿಸಿದಿರಿ..._
_ನನಗೆ ಕಾಲು ಗಟ್ಟಿ ಊರಲಾಗದೆ ಭೂಕುಸಿದು ಬೀಳುತ್ತಿದೆ._
*ಈಗ ಮಳೆ ಕೇಳುತ್ತಿದೆ..*
_ನೀವು ಮಣ್ಣು ತುಂಬಿದ ನದಿ-ತೋಡುಗಳನ್ನು ನನಗೆ ತೆರೆದು ಬಿಡುತ್ತೀರಾ? ನಾನು ನನ್ನ ಪಾಡಿಗೆ ಹೋಗುವೆ...._
*ಹೊಳೆ ಕೇಳುತ್ತಿದೆ...*
_ನನ್ನಿಂದ ನೀವು ಆಕ್ರಮಿಸಿದ ದಡವನ್ನು ವಾಪಸ್ಸು ಕೊಡುವಿರಾ?ನಾನು ನನ್ನ ದಾರಿಯಲ್ಲೇ ಹೋಗುವೆ..._
*ಭೂಮಿ ಕೇಳುತ್ತಿದೆ*
_ನಾನು ನೀರು ಸಂಗ್ರಹಿಸುತ್ತಿದ್ದ ಹೊಲ-ಜಲಾಶಯ ವಾಪಸ್ಸು ಕೊಡುವಿರಾ? ನಾನು ಅಲ್ಲೇ ಹಾಯಾಗಿರುವೆ...._
*ಬೆಟ್ಟಗಳು ಕೇಳುತ್ತಿವೆ*
_ಇನ್ನಾದರೂ ನನ್ನ ಕಾಲು-ಕಡಿಯುವುದನ್ನು ನಿಲ್ಲಿಸುವಿರಾ? ನಾನು ಒಂಟಿ ಕಾಲಲ್ಲಾದರೂ ಗಟ್ಟಿ ಕಾಲೂರಲು ಪ್ರಯತ್ನಿಸುವೆ...._
*ನೆನಪಿರಲಿ*
_ನಾವು ಮನುಷ್ಯರು ಪ್ರಕೃತಿಯ ಕಾವಲುಗಾರರು ಮಾತ್ರ ಒಡೆಯರಲ್ಲ...._
*ಮರೆತರೆ*
_ಪ್ರಕೃತಿಯೇ... ಅದು ಏನೆಂಬುದನ್ನು ನಮಗೆ ಕಲಿಸಿಕೊಡುತ್ತದೆ...._
_*ಈ ಮಳೆಗಾಲ ಅದಕ್ಕೊಂದು ಉದಾಹರಣೆ ಮಾತ್ರ.*_ (ಸಂಗ್ರಹಾನುವಾದ: ಕೆ.ಪಿ.ನಾಭ ಐಲ್)
*_ಅಂದು ನಾನು ಹಲವು ಬಾರಿ ಹೇಳಿದ್ದೆ, ಬೇಡ-ಬೇಡ ಅಂತ... ನೀವು ನನ್ನ ದಾರಿ ಅಡ್ಡಗಟ್ಟಿ ದಿರಿ.._*
*ಹೊಳೆಯೂ ಹೇಳಿತು.*
_ಅಂದು ನಾನು ತುಂಬಾ ಉಕ್ಕಿ ಹರಿದಿದ್ದೆ..._ _ಆದರೆ ನೀವು ನನ್ನ ಹೃದಯ ಹಿಸುಕಿ, ನನ್ನ ದಡವನ್ನು ಆಕ್ರಮಿಸಿದಿರಿ._
*ಭೂಮಿಯೂ ಹೇಳಿತು.*
_ಅಂದು ನಾನು ಸಾಕಷ್ಟು ಜಲ ಹೀರಿದ್ದೆ.. ಇಂದು ನೀವು ನನ್ನ ಬಾಯಿಗೆ ಕಾಂಕ್ರೀಟ್ ತುಂಬಿದಿರಿ..._
_ನಾನು ನೀರು ಸಂಗ್ರಹಿಸುತ್ತಿದ್ದ ಹೊಲ-ಜಲಾಶಯಕ್ಕೆ ನೀವು ಮಣ್ಣು ತುಂಬಿದಿರಿ...._
*ಬೆಟ್ಟಗಳೂ ನುಡಿಯಿತು...*
_ಅಂದು ನಾನು ಭೀಕರ ಗಾಳಿ-ಮಳೆಗೆ ಅಲುಗಾಡದೆ ಗಟ್ಟಿ ನಿಂತಿದ್ದೆ.. ಆದರೆ ನೀವು ನನ್ನ ಕಾಲು ತುಂಡರಿಸಿದಿರಿ..._
_ನನಗೆ ಕಾಲು ಗಟ್ಟಿ ಊರಲಾಗದೆ ಭೂಕುಸಿದು ಬೀಳುತ್ತಿದೆ._
*ಈಗ ಮಳೆ ಕೇಳುತ್ತಿದೆ..*
_ನೀವು ಮಣ್ಣು ತುಂಬಿದ ನದಿ-ತೋಡುಗಳನ್ನು ನನಗೆ ತೆರೆದು ಬಿಡುತ್ತೀರಾ? ನಾನು ನನ್ನ ಪಾಡಿಗೆ ಹೋಗುವೆ...._
*ಹೊಳೆ ಕೇಳುತ್ತಿದೆ...*
_ನನ್ನಿಂದ ನೀವು ಆಕ್ರಮಿಸಿದ ದಡವನ್ನು ವಾಪಸ್ಸು ಕೊಡುವಿರಾ?ನಾನು ನನ್ನ ದಾರಿಯಲ್ಲೇ ಹೋಗುವೆ..._
*ಭೂಮಿ ಕೇಳುತ್ತಿದೆ*
_ನಾನು ನೀರು ಸಂಗ್ರಹಿಸುತ್ತಿದ್ದ ಹೊಲ-ಜಲಾಶಯ ವಾಪಸ್ಸು ಕೊಡುವಿರಾ? ನಾನು ಅಲ್ಲೇ ಹಾಯಾಗಿರುವೆ...._
*ಬೆಟ್ಟಗಳು ಕೇಳುತ್ತಿವೆ*
_ಇನ್ನಾದರೂ ನನ್ನ ಕಾಲು-ಕಡಿಯುವುದನ್ನು ನಿಲ್ಲಿಸುವಿರಾ? ನಾನು ಒಂಟಿ ಕಾಲಲ್ಲಾದರೂ ಗಟ್ಟಿ ಕಾಲೂರಲು ಪ್ರಯತ್ನಿಸುವೆ...._
*ನೆನಪಿರಲಿ*
_ನಾವು ಮನುಷ್ಯರು ಪ್ರಕೃತಿಯ ಕಾವಲುಗಾರರು ಮಾತ್ರ ಒಡೆಯರಲ್ಲ...._
*ಮರೆತರೆ*
_ಪ್ರಕೃತಿಯೇ... ಅದು ಏನೆಂಬುದನ್ನು ನಮಗೆ ಕಲಿಸಿಕೊಡುತ್ತದೆ...._
_*ಈ ಮಳೆಗಾಲ ಅದಕ್ಕೊಂದು ಉದಾಹರಣೆ ಮಾತ್ರ.*_ (ಸಂಗ್ರಹಾನುವಾದ: ಕೆ.ಪಿ.ನಾಭ ಐಲ್)
Wednesday, March 21, 2018
ಡಾ. ಹೆಚ್. ಶಾಂತಾರಾಮ್ ಸಾಹಿತ್ಯ ಪ್ರಶಸ್ತಿಗೆ ಪುಸ್ತಕ ಆಹ್ವಾನ
ಕುಂದಾಪುರ: ಮಣಿಪಾಲ ಅಕಾಡೆಮಿ
ಆಡಳಿತಾಧಿಕಾರಿಯಾದ ಡಾ.ಹೆಚ್. ಶಾಂತಾರಾಮ್ ಅವರ
ಹೆಸರಿನಲ್ಲಿ ಕುಂದಾಪುರದ ಭಂಡಾರ್ಕಾರ್ಸ್ ಕಾಲೇಜು
ದತ್ತಿನಿಧಿ ಸ್ಥಾಪಿಸಿ 2010 ರಿಂದ ಕನ್ನಡದ ಅತ್ಯುತ್ತಮ
ಸೃಜನಶೀಲ ಕೃತಿಗೆ ಪ್ರಶಸ್ತಿ ನೀಡುತ್ತಾ ಬಂದಿದೆ. ಈ ವರ್ಷ
ಕಾದಂಬರಿಯನ್ನು ಮಾತ್ರ ಪರಿಗಣಿಸಲಿದ್ದು, ಜನವರಿ
2016 ರಿಂದ ಡಿಸೆಂಬರ್ 2017ರ ನಡುವೆ (ಎರಡು ವರ್ಷಗಳ
ಅವಧಿಯಲ್ಲಿ) ಮೊದಲ ಆವೃತ್ತಿಯಾಗಿ ಪ್ರಕಟಗೊಂಡ
ಕೃತಿಗಳನ್ನು ಆಹ್ವಾನಿಸಲಾಗಿದೆ. ಕಾದಂಬರಿಗಳ ನಾಲ್ಕು
ಪ್ರತಿಗಳನ್ನು 30 ಎಪ್ರಿಲ್ 2018 ರೊಳಗೆ ಡಾ.ಹೆಚ್.
ಶಾಂತಾರಾಮ್ ಸಾಹಿತ್ಯ ಪ್ರಶಸ್ತಿ ಸಮಿತಿ, ಭಂಡಾರ್ಕಾರ್ಸ್
ಕಾಲೇಜು ಆವರಣ, ಕುಂದಾಪುರ 576201 ಈ ವಿಳಾಸಕ್ಕೆ
ಕಳುಹಿಸಿಕೊಡುವಂತೆ ಕೋರಲಾಗಿದೆ. ಹೆಚ್ಚಿನ ಮಾಹಿತಿಗಾಗಿ
ದೂರವಾಣಿ ಸಂಖ್ಯೆ 08254 – 230369 ಇದನ್ನು ಸಂಪರ್ಕಿಸಬೇಕಾಗಿ ಕೋರಲಾಗಿದೆ.
ಪ್ರಶಸ್ತಿ ಪ್ರದಾನ ಸಮಾರಂಭ ಆಗಸ್ಟ್ ತಿಂಗಳಿನಲ್ಲಿ
ನಡೆಯಲ್ಲಿದ್ದು, ಹದಿನೈದು ಸಾವಿರ
ರೂಪಾಯಿಯೊಂದಿಗೆ ಬೆಳ್ಳಿ ಫಲಕ ನೀಡಲಾಗುವುದು
ಎಂದು ಡಾ. ಹೆಚ್. ಶಾಂತಾರಾಮ್ ಸಾಹಿತ್ಯ ಪ್ರಶಸ್ತಿ ಸಮಿತಿ
ಪ್ರಕಟಣೆಯಲ್ಲಿ ತಿಳಿಸಲಾಗಿದೆ.
-ಪ್ರಕಟಣೆಯ ಕೃಪೆಗಾಗಿ-
ಈ ಪತ್ರಿಕಾ ಪ್ರಕಟಣೆಯನ್ನು ರಾಜ್ಯಮಟ್ಟದ ವ್ಯಾಪ್ತಿಯಲ್ಲಿ ಪ್ರಕಟಿಸಬೇಕಾಗಿ ವಿನಂತಿ.
ಅಲ್ಲದೇ ತಮ್ಮ ಪ್ರತಿಷ್ಠಿತ ಪತ್ರಿಕೆಯಿಂದ ರಾಜ್ಯಾದ್ಯಂತ ಮಾಹಿತಿ
ದೊರೆತಂತಾಗುತ್ತದೆ ಎಂಬುದು ಕಳಕಳಿಯ ವಿನಂತಿ.
Thursday, March 8, 2018
ಮಹಿಳಾ ಸಮಾನತೆ ಎಂಬ ಉತ್ತಮ ಚಚಾ೯ ವಿಷಯ.
ಮಾರ್ಚ 8 ರಂದು ವಿಶ್ವ ಮಹಿಳಾ ದಿನಾಚರಣೆಯನ್ನು ನಮ್ಮ ದೇಶದಲ್ಲಿಯೂ ಆಚರಿಸಲಾಗುವುದು. ಈ ದಿನದಂದು ಮಹಿಳೆಯರ ಬಗ್ಗೆ ಅವರ ಸಾಧನೆ ಬಗ್ಗೆ ಒಳ್ಳೆಯ ಮಾತುಗಳು ಕೇಳಿಬರುವುದು. ಜೊತೆಗೆ ವಿವಿಧ ಕ್ಷೇತ್ರದಲ್ಲಿ ಸಾಧನೆ ಮಾಡಿದವರ ಸನ್ಮಾನವನ್ನು ಮಾಡಲಾಗುವುದು. ವರ್ಷದಿಂದ ವರ್ಷಕ್ಕೆ ಈ ಕಾರ್ಯಕ್ರಮ ಹೆಚ್ಚಾಗುತ್ತಾ ಇರುವುದು.. ಸ್ವತಂತ್ರ ಭಾರತದ ನಂತರದ ಏಳ್ಗೆಯಲ್ಲಿ ಮಹಿಳೆಯರ ಕೊಡುಗೆ ಬಹು ಅತ್ಯಮೂಲ್ಯವಾದದ್ದು ಆಗಿರುವುದು.
ಆಳುವ ಸಕರ್ಾರಗಳು ಕಾಲ ಕಾಲಕ್ಕೆ ಹಲವಾರು ಯೋಜನೆಯನ್ನು ಜಾರಿಗೊಳಿಸಿ ಮಹಿಳೆಯರ ಸಬಲೀಕರಣಕ್ಕೆ ಪ್ರಯತ್ನವನ್ನು ಮಾಡಿರುವುದು. ಅದರ ಪರಿಣಾಮವೇ ಇಂದು ವಿವಿಧ ಕ್ಷೇತ್ರದಲ್ಲಿ ಎಲ್ಲಾ ಹಂತದಲ್ಲಿ ಮಹಿಳಾ ಉದ್ಯೋಗಿಗಳು ಸಿಗುವರು. ಇವೆಲ್ಲವು ಸಹಾ ಮಹಿಳಾ ಸಬಲೀಕರಣದ ಪ್ರಮುಖ ಮೈಲಿಗಲ್ಲೆಂದು ಗುರುತಿಸಬಹುದಾಗಿದೆ.
ಇಂದಿಗೂ ಮನೆಯಲ್ಲಿ ಅಡುಗೆ ಕಾರ್ಯ ಮಹಿಳೆಯರ ತಲೆ ಮೇಲೆ ಇರುವುದು. ಗಂಡ, ಅತ್ತೆ, ಮಾವ, ಮಕ್ಕಳು ಈ ಭಾವನಾತ್ಮಕ ಸಂಬಂಧದ ಸುಳಿಯಲ್ಲಿ ಸಿಕ್ಕಿ ಅದರಿಂದ ಹೊರಗು ಬರಲಾಗದೇ ತಮ್ಮಜೀವನದ ಅತಿ ಹೆಚ್ಚು ಸಮಯವನ್ನು ಅಡುಗೆ ಮನೆಯಲ್ಲಿ, ಮನೆಗೆಲಸದಲ್ಲಿ ಕಳೆಯುವವರ ಸಂಖ್ಯೆ ಕಡಿಮೆಯಾಗಿಲ್ಲ.
ಅಡುಗೆಯ ಜೊತೆಗೆ ಮನೆಯ ಎಲ್ಲರ ಬಟ್ಟೆಯನ್ನು ಸ್ವಚ್ಛಗೊಳಿಸುವುದು, ಮನೆಯನ್ನು ಸ್ವಚ್ಛಮಾಡುವುದು, ಈ ಎಲ್ಲಾ ಕಾರ್ಯಗಳು ಮಹಿಳೆಯರದ್ದೇ ಆಗಿದೆ. ಇವೆಲ್ಲ ಅವರ ಮೂಲಭೂತ ಕಾರ್ಯಗಳು ಎಂಬಂತೆ ಗಂಡಸರು ವತರ್ಿಸುವುದು ಇರುವುದು. ಬಹುತೇಕ ಎಲ್ಲಾ ಗ್ರಾಮೀಣ ಪ್ರದೇಶದಲ್ಲಿ ಇಂದಿಗೂ ಮೊದಲು ಗಂಡಸರ ಊಟ ನಂತರದಲ್ಲಿ ಹೆಂಗಸರು ಊಟ ಮಾಡುವುದು ಸಾಮಾನ್ಯವಾಗಿದೆ. ಗಂಡಿನಷ್ಠೆ ಸಂಪಾದನೆ ಮಾಡುವ ಹೆಂಗಸರು ಸಹಾ ಮನೆಗೆ ಬಂದು ತನ್ನ ಮಹಿಳಾ ಕಾರ್ಯವನ್ನು ಮಾಡಲೆಬೇಕಾದ ಅನಿವಾರ್ಯತೆ ಇರುವುದು.
ಮಹಿಳೆಯ ಮೇಲೆ ಈ ರೀತಿಯ ದೌರ್ಜನ ನಡೆಸುವವರಲ್ಲಿ ಅಕ್ಷರಸ್ಥ ಪುರುಷರು, ಅದರಲ್ಲಿಯೂ ಸಮಾಜವನ್ನು ಬದಲಿಸುವ ಕಾರ್ಯನಿರ್ವಹಿಸುತ್ತಿರುವ ಶಿಕ್ಷಕರು, ಸಮಾಜ ಸೇವಿಗಳು, ರಾಜಕಾರಣಗಳು ಎಲ್ಲರೂ ಮಹಿಳಾ ಸಬಲೀಕರಣದ ಬಗ್ಗೆ ಮಾತನಾಡುತ್ತಾರೆ ಆದರೇ ಅವರವರ ಮನೆಯಲ್ಲಿ ನಡೆದುಕೊಂಡು ಬಂದ ಯಾವದೇ ಸಂಪ್ರದಾಯವನ್ನು ಬದಲಿಸಲು ಧೈರ್ಯ ತೋರಿಸುವುದಿಲ್ಲ. ಒಟ್ಟಾರೆ ಉತ್ತಮ ಭಾಷಣಕಾರರಾಗಿ, ವಿಚಾರವಾದಿಗಳಾಗಿ ವೇದಿಕೆಯಲ್ಲಿ ಮಾತನಾಡುವರು.
ನನ್ನ ಮನೆ ಮತ್ತು ಸುತ್ತಮುತ್ತಲಿನ ಸಮಾಜವನ್ನು ಗಮನಿಸಿದರೆ ಇಂದಿಗೂ ಮಹಿಳೆಗೆ ಸಮಾನ ಅವಕಾಶಗಳು ಸಿಗುತ್ತಾ ಇಲ್ಲ. ಕೆಲವೊಂದು ಕಾರ್ಯಕ್ಕೆ ಮಾತ್ರ ಮಹಿಳೆ ಸೀಮಿತವಾಗಿರುವಳು. ಬದಲಾವಣೆ ಬಯಸುವ ವ್ಯಕ್ತಿಗಳು, ಅದಕ್ಕೆ ಬದಲಾಗಲು ತಯಾರಾಗುವ ಮಹಿಳೆಯರು ತಾವಾಗಿಯೇ ತಮ್ಮ ತಮ್ಮ ಸ್ವತಂತ್ಯ, ಸಮಾನತೆ ಬಗ್ಗೆ ಧ್ವನಿ ಎತ್ತ ಬೇಕಾಗಿದೆ. ಇಲ್ಲವಾದರೇ ನಾವೆಲ್ಲ ಯೋಚಿಸುವ ಮಹಿಳಾ ಸಬಲೀಕರಣ ಕೇವಲ ಕನಸು ಮಾತ್ರ ಆಗಿರುವುದು.
ಪುರಾಣದ ಕಾಲದಿಂದ ಇಂದಿನ ಕಾಲಘಟ್ಟದ ವರೆಗೆ ಮಹಿಳೆ ನಡೆದ ದಾರಿಯನ್ನು ಅವಲೋಕಿಸುತ್ತಾ, ಇಂದಿಗೂ ಕೆಟ್ಟ ಸಂಪ್ರದಾಯವನ್ನು ಪಾಲಿಸುವ ಪ್ರಮುಖ ಸಂಘಟನೆಗಳ, ರಾಜಕೀಯ ವಿಚಾರಧಾರೆಗಳ ಬಗ್ಗೆ ಎಚ್ಚರಿಕೆಯಿಂದ ಇದ್ದು, ಅವಶ್ಯ ಇರುವಡೆ ಪ್ರತಿರೋಧವನ್ನು ಮಾಡುತ್ತಾ ಮಹಿಳೆಯರು ಮುಂದೆ ಬರಬೇಕಾಗಿದೆ. ಅದಕ್ಕೆ ತಕ್ಕದಾದ ವಾತಾವರಣವನ್ನು ಸೃಷ್ಠಿಸುವ ಜವಬ್ದಾರಿ ಪ್ರತಿಯೊಬ್ಬರದ್ದು ಆಗಿರುವುದು.
ವಿವೇಕ ಬೆಟ್ಕುಳಿ
vivekpy@gmail.com
8722954123
Subscribe to:
Posts (Atom)
ಡಾ ಎಚ್ ಎಸ್ ವೆಂಕಟೇಶ ಮೂರ್ತಿ (೨೩.೦೬.೧೯೪೪-೩೦.೦೫.೨೦೨೫) - ಒಂದು ನೆನಪು - ಸಿ ಬಿ ಶೈಲಾ ಜಯಕುಮಾರ್. ಚಿತ್ರದುರ್ಗ.
"ಪ್ರೀತಿ ಕೊಟ್ಟ ರಾಧೆಗೆ...ಮಾತು ಕೊಟ್ಟ ಮಾಧವ..." "ಅಮ್ಮ ನಾನು ದೇವರಾಣೆ ಬೆಣ್ಣೆ ಕದ್ದಿಲ್ಲಮ್ಮ..." "ಲೋಕದ ಕಣ್ಣಿಗೆ ರಾಧೆಯೂ ಕೂಡ ......

-
ನಿಮ್ಮ ಮೆಚ್ಚಿನ FB ಪೋಸ್ಟುಗಳು... ==================== ಈ ವಾರದ ಕೋರಿಕೆ ತುಸು ವಿಭಿನ್ನ, ವಿಶಿಷ್ಟ. ಎರಡು ಕಾರಣಗಳಿಂದ. ಒಂದನೆಯದಾಗಿ, ಇದುವರೆಗಿನ ಕೋರಿಕೆಗಳೆಲ್...
-
ನಿಮ್ಮ ಮೆಚ್ಚಿನ FB ಪೋಸ್ಟುಗಳು... ==================== ಈ ವಾರ, ಕೋರಿಕೆಗೆ ಕೋರಿಕೆ! ಅಂದರೆ, ಈಶ್ವರ ಸಣಕಲ್ಲ ಅವರ ಪ್ರಖ್ಯಾತ ಕವಿತೆ "ಕೋರಿಕೆ" ಪ್ರಕ...
-
ಮೂಡುವನು ರವಿ ಮೂಡುವನು ಕತ್ತಲೊಡನೆ ಜಗಳಾಡುವನು ಪಂಜೆ ಮಂಗೇಶ ರಾಯರು ಮೂಡಣ ರಂಗಸ್ಥಳದಲಿ ನೆತ್ತರ ಮಾಡುವನು ಕುಣಿದಾಡುವನು ಬೆಳಕಿನ ಕಣ್ಣುಗಳಿ೦ದಾ ಸೂರ್ಯನು ನೋಡ...