Friday, October 17, 2025

ತಪ್ಪುಗಳು

 ತಪ್ಪುಗಳು


----------

ಭಾಷೆಯೇ ಇಲ್ಲದ

ದೇವರನು

ಭಾಷೆಯಲಿ

ಬಂಧಿಸಿದೆ.

ಸೀಮಾತೀತನ

ತೀರ್ಥಕ್ಷೇತ್ರದಲಿ

ಸಂಧಿಸಿದೆ.

ಗುರುತಿಗಾಗಿ

ಇಟ್ಟುಕೊಂಡ

ಹೆಸರುಗಳಿಂದಲೇ

ಅವನನ್ನೂ

ಕರೆದುಕೊಂಡೆ.

ಇಷ್ಟವಾದ

ರೂಪದಲ್ಲೇ

ಪ್ರತಿಮೆಯನ್ನು

ಮಾಡಿಕೊಂಡೆ.

ಕಟ್ಟಕಡೆಗೆ

ಎಲ್ಲದರ

ಒಳಮರ್ಮದ

ಅರಿವಾದಾಗ

ನನ್ನನೇ ನಾ

ಜರಿದುಕೊಂಡೆ

ಕ್ಷಮಿಸು ಎಂದು

ಬೇಡಿಕೊಂಡೆ.

( ಶಂಕರಾಚಾರ್ಯರ ಶ್ಲೋಕದಿಂದ ಪ್ರೇರಿತ) 

        ...ಎಂ.ಎ.ಎಸ್  

ಎಂ ಎ  ಸಾದಿಕ್ ಉಲ್ಲಾ , ಶಿಕ್ಷಕರು , ಸ ಪ ಪೂ ಕಾ

ಯಳಗೋಡು,  ಚಿತ್ರದುರ್ಗ ತಾ & ಜಿ 

No comments:

Post a Comment

ಹೀಗೂ ಇದ್ದರು ನಮ್ಮ ಹೆಮ್ಮೆಯ ಕನ್ನಡ ಸಾಹಿತಿಗಳು - ಸಂಗ್ರಹ

ಗಳಗನಾಥರು ಗಳಗನಾಥರು ಕನ್ನಡದ ಪುಸ್ತಕಗಳನ್ನು ತಲೆಯಲ್ಲಿ ಹೊತ್ತುಕೊಂಡು ಮಾರಾಟ ಮಾಡುತ್ತಿದ್ದ ಪುಣ್ಯಾತ್ಮರು ಇವರು.  ನಿಮ್ಮ ಮನೆಯಲ್ಲಿ ಲಕ್ಷ್ಮಿ ಇದ್ದರೆ ಸಾಲದು, ನಾನು ಸರ...