ತಪ್ಪುಗಳು
----------
ಭಾಷೆಯೇ ಇಲ್ಲದ
ದೇವರನು
ಭಾಷೆಯಲಿ
ಬಂಧಿಸಿದೆ.
ಸೀಮಾತೀತನ
ತೀರ್ಥಕ್ಷೇತ್ರದಲಿ
ಸಂಧಿಸಿದೆ.
ಗುರುತಿಗಾಗಿ
ಇಟ್ಟುಕೊಂಡ
ಹೆಸರುಗಳಿಂದಲೇ
ಅವನನ್ನೂ
ಕರೆದುಕೊಂಡೆ.
ಇಷ್ಟವಾದ
ರೂಪದಲ್ಲೇ
ಪ್ರತಿಮೆಯನ್ನು
ಮಾಡಿಕೊಂಡೆ.
ಕಟ್ಟಕಡೆಗೆ
ಎಲ್ಲದರ
ಒಳಮರ್ಮದ
ಅರಿವಾದಾಗ
ನನ್ನನೇ ನಾ
ಜರಿದುಕೊಂಡೆ
ಕ್ಷಮಿಸು ಎಂದು
ಬೇಡಿಕೊಂಡೆ.
( ಶಂಕರಾಚಾರ್ಯರ ಶ್ಲೋಕದಿಂದ ಪ್ರೇರಿತ)
...ಎಂ.ಎ.ಎಸ್
ಎಂ ಎ ಸಾದಿಕ್ ಉಲ್ಲಾ , ಶಿಕ್ಷಕರು , ಸ ಪ ಪೂ ಕಾ
ಯಳಗೋಡು, ಚಿತ್ರದುರ್ಗ ತಾ & ಜಿ
No comments:
Post a Comment