ನಮ್ಮನು ಮತ್ತು ಬ್ಲಾಗಿನ ಓರೆ ಕೋರೆಯನು ತಿದ್ದಲು, ಬ್ಲಾಗಿಗೆನಲ್ಲಿ ಬರೆಯಲು.. ನಿಮ್ಮ ಸಂಗ್ರಹವನು ಪ್ರಕಟಿಸಲು ನಮ್ಮನ್ನು ತಲುಪಲು - ಇ ಮೇಲ್ ಕಳುಹಿಸಿ - kannada.info@gmail.com |.

Saturday, March 29, 2014

ಕವಿತೆ

ರಾಜಶೇಖರ ಬಂಡೆ
ಹಸಿದಿಹ ಒಡಲು ಹರಿಯದ ಕಡಲು
ನಿಶ್ಚಲ ಮೌನದ ಬೇಗೆಯಿದು
ಹರಿದಿಹ ಉಡುಪು ಬಡವನ ಕುರುಹು
ನಿತ್ಯವು ಇರಿಯುವ ನೋವು ಇದು

ಬಿಗಿವುದು ಕಂಠ ಗುನುಗುವ ಹೊತ್ತಿಗೆ
ಬಡವನ ಎದೆಗದೆ ಶಾಶ್ವತವು
ಹಾಡುವ ಕಂಗಳ ಅಂಚಲಿ ಮೂಡುವ
ಹನಿಗಳಿಗೂನು ಇದೆ ಹರಿವು

ದಿನದಿನದಲ್ಲೂ ಹುಟ್ಟುವ ಪೈರಿಗೆ
ಎರೆದುದು ರಕುತದ ಕೆಂಗಣವು
ಮೊಳೆಯುವ ಮೊದಲೇ ಚಿವುಟುವ ದೈವವೆ
ನಿನಗಿದೊ ಬಡವನ ಬಿಸಿಕಾವು

ಮನೆಮನೆಯಲ್ಲೂ ಬೆಳಗುವ ದೀಪ
ನೆತ್ತರನುಂಡೇ ಹೊಳೆಯುವುದು
ಯಾರನು ಕೇಳದೆ ಕವಿಯುವ ಇರುಳು
ಇವನೆದೆಗಾಸರೆಯಾಗುವುದು

ಭೋರ್ಗರೆಯುವ ಬಿಸಿ ರಕ್ತದ ಕಣಗಳು
ಜೊಯ್ಯನೆ ನರದೊಳಗಿಳಿಯುವವು
ಧಿಮಿಧಿಮಿ ಎನ್ನುವ ಹೆಜ್ಜೆಯ ಸದ್ದಿಗೆ
ಸಕಲವು ಗಡಗಡ ನಡುಗುವುವು.

ರಾಶೇಕ್ರ

1 comment:

  1. Tumba chennagide nimma kavithe.


    Hege mathondastu bareyiri

    ReplyDelete