ನಮ್ಮನು ಮತ್ತು ಬ್ಲಾಗಿನ ಓರೆ ಕೋರೆಯನು ತಿದ್ದಲು, ಬ್ಲಾಗಿಗೆನಲ್ಲಿ ಬರೆಯಲು.. ನಿಮ್ಮ ಸಂಗ್ರಹವನು ಪ್ರಕಟಿಸಲು ನಮ್ಮನ್ನು ತಲುಪಲು - ಇ ಮೇಲ್ ಕಳುಹಿಸಿ - kannada.info@gmail.com |.

Saturday, March 29, 2014

ಋಗ್ವೇದ ಮಂಡಲ -೧, ಸೂಕ್ತ - ೧೬೧ರಲ್ಲಿ ಉಚಥ್ಯ ಋಷಿವರೇಣ್ಯರು ತಮ್ಮ ಸಂಶೋಧನಾ ಅನುಭವವನ್ನು ಗಣಕೀಕರಿಸಿ ಇಂತೆಂದಿದ್ದಾರೆ:

       

             "ಆಹುಸ್ತೇ ತ್ರೀಣಿ ಬಂಧನಾನಿ ತ್ರೀಣಿತ ಆಹುರ್ದಿವಿ ಬಂಧನಾನಿ ತ್ರೀಣ್ಯಪ್ಸು ತ್ರೀಣ್ಯಂತಃ ಸಮುದ್ರೇ "||

ಎಂಬುದು ಉಚಥ್ಯರ ಅಭಿಮತ. ಅದರ ಸೂತ್ರದ ಒಟ್ಟು ಸರಳ ಅರ್ಥ ಹೀಗಿದೆ- ಪ್ರಪಂಚದ ಎಲ್ಲಾ ಆಗುಹೋಗುಗಳಿಗೂ ಮುಖ್ಯವಾಗಿ ೩ ಕಾರಣವಿರುತ್ತದೆ. ಆ ಕಾರಣವೆಂಬುದೇ ಈ ಜೀವನಬಂಧನ. ಅಂದರೆ ಕರ್ಮ + ಋಣ + ಯೋಗ ಎಂಬ ಮೂರರಿಂದಾಗಿ ಜೀವ ಜಗತ್ತು ನಿರಂತರವಾಗಿರುತ್ತದೆ. ಆ ಬಂಧನ ಬಿಡಿಸಿಕೊಳ್ಳುವ ಜಾಣ್ಮೆಯನ್ನು ಜೀವಿಗಳು ತಪ್ಪಿಯೂ ಮಾಡಲಾರವು. ಹಾಗಾಗಿಯೇ ಜೀವ = ನೀರು, ಕಾಲ = ಮಧ್ಯ, ಆದಿ, ಅಂತ್ಯ. ಮಾರ್ಗ ಸಮಯೋಜಿತವಾದ ಜೀವನ ಸಾಗರ ಅಥವಾ ಸಮುದ್ರ. ಅದರ ಸಂಖ್ಯಾ ಮೊತ್ತವೇ ಕರ್ಮ. ಅದರ ಶೇಷವೇ ಯೋಗ. ಗುಣಿತವೇ ಋಣಗಳಾಗಿ ವ್ಯವಹರಿಸುತ್ತದೆ. ಗುಣಿತ ಮೂಲವ್ಯಾವುದು? ಮೊತ್ತವ್ಯಾವುದು? ಅರಿವಿಲ್ಲ ಜೀವಿಗಳಿಗೆ! ಹಾಗಾಗಿ ಅಸಂಖ್ಯಾತವೆಂದಿದೆ. ಅದಕ್ಕೊಂದು ಸೂತ್ರ ಅಳವಡಿಸಲ್ಪಟ್ಟಿದೆ. ಆ ಸಮೀಕರಣ ಅರ್ಥ ಮಾಡಿಕೊಂಡಲ್ಲಿ ಮಾನವ ಜೀವನ ಸಾರ್ಥಕ. ಆತನು ದೇವತ್ವಕ್ಕೇರುವುದ ಖಂಡಿತ. ಆದರೆ ಅರ್ಥ ಮಾಡಿಕೊಳ್ಳಲು, ಅಧ್ಯಯನ ಮಾಡಲು ನಿಮಗೆ ಪುರುಸೊತ್ತು ಇದೆಯೇ? ಇಲ್ಲ. ಕಾರಣ ನಮ್ಮ ಈಗಿನ ಸ್ಥಿತಿ. ನಾವೇ ವಿಧಿಸಿಕೊಂಡ ಜೀವನ ವಿಧಾನ. ನಮ್ಮ ಶಿಕ್ಷಣ ಪದ್ಧತಿ, ನಮ್ಮ ಧನದಾಹ, ನಮ್ಮ ಅತೀ ದುರಾಸೆ, ನಮ್ಮ ಮೂರ್ಖತನ, ನಮ್ಮ ಹುಚ್ಚು ಕಲ್ಪನೆ. ಇದಕ್ಕೆಲ್ಲಾ ಕಾರಣ ಬ್ರಿಟಿಷರು ನಮಗೆ ಮಾಡಿದ ಮೋಸ. ಬುದ್ಧಿಜೀವಿಗಳೆಂಬ ಸೋಗಲಾಡಿ ಲದ್ದಿಗಳಿಗೆ ಇದು ಅರ್ಥವಾಗಲಾರದು. ಅದಕ್ಕಾಗಿ ನಮ್ಮ ಹಿಂದಿನ ಜೀವನ ಪದ್ಧತಿಯ ಬಗ್ಗೆ ಸ್ವಲ್ಪ ಬರೆದು ನಂತರ ಸಮೀಕರಣದ ಬಗ್ಗೆ ಬರೆಯುತ್ತೇನೆ. ಏಕೆಂದರೆ ಆಗಲಾದರೂ ಸಮೀಕರಣ ನಮಗೆ ಸುಲಭವಾದೀತು.

        ಹದಿನೆಂಟನೆಯ ಶತಮಾನದ ಪೂರ್ವದಲ್ಲಿ ನಮಗೆ ಸಂಪೂರ್ಣ ಸ್ವಾತಂತ್ರ್ಯವಿತ್ತು. ನಮ್ಮನ್ನು ನಾವೇ ಆಳಿಕೊಳ್ಳುತ್ತಿದ್ದೆವು. ಏಕೆಂದರೆ ಆಗ ನಮಗೆ ತೃಪ್ತಿಯಿತ್ತು, ಜೀವನದರಿವಿತ್ತು, ದುರಾಸೆ ಇರಲಿಲ್ಲ, ಮಹತ್ವಾಕಾಂಕ್ಷೆ ಇರಲಿಲ್ಲ, ಉತ್ತಮ ವಿಧ್ಯೆಯಿತ್ತು. ಅದರ ಕೆಲ ಮುಖ್ಯ ಧ್ಯೇಯ ಗಮನಿಸಿ -
·        ಮಾತೃದೇವೋ ಭವ
·        ಪಿತೃ ದೇವೋ ಭವ
·        ಆಚಾರ್ಯ ದೇವೋ ಭವ
·        ಅತಿಥಿ ದೇವೋ ಭವ
·        ಸಹನಾವವತು | ಸಹನೌಭುನಕ್ತು | ಸಹ ವೀರ್ಯಂ ಕರವಾವಹೈ | 
ತೇಜಸ್ವಿನಾವಧೀತಮಸ್ತು | ಮಾದ್ವಿಷಾವಹೈ ||
·        ಸಂಗ  ಚ್ಛಧ್ವಂ ಸಂ ವದಧ್ವಂ ಸಂ ವೋ ಮನಾಂಸಿ ಜಾನತಾಂ | 
ದೇವಾ ಭಾಗಂ ಯಥಾ ಪೂರ್ವೇ ಸಂಜಾನಾನಾ ಉಪಾಸತೇ ||
·        ಸಮಾನೋ ಮಂತ್ರಃ ಸಮಿತಿಃ ಸಮಾನೀ ಸಮಾನಂ ಮನಃ ಸಹ ಚಿತ್ತಮೇಷಾಮ್ | 
ಸಮಾನಂ ಮಂತ್ರಮಭಿಮಂತ್ರಯೇ ವಃ ಸಮಾನೇನ ವೋ ಹವಿಷಾ ಜುಹೋಮಿ ||
·        ಸಮಾನೀ ವ ಆಕೂತಿಃ ಸಮಾನಾ ಹೃದಯಾನಿ ವಃ | 
ಸಮಾನಮಸ್ತು ವೋ ಮನೋ ಯಥಾ ವಃ ಸುಸಹಾಸತಿ ||
·        ಕೃಣ್ವಂತೋ ವಿಶ್ವಮಾರ್ಯಂ ||
·        ಆ ನೋ ಭದ್ರಾಃ ಕ್ರತವೋ ಯಂತು ವಿಶ್ವತಃ
·        ಗಾವೋ ವಿಶ್ವಸ್ಯ ಮಾತರಃ
· ಸ್ವಸ್ತಿ ಪ್ರಜಾಭ್ಯಃ ಪರಿಪಾಲಯಂತಾಂ ನ್ಯಾಯೇನ ಮಾರ್ಗೇಣ ಮಹೀಂ ಮಹೀಶಾಃ | ಗೋಬ್ರಾಹ್ಮಣೇಭ್ಯೋ ಶುಭಮಸ್ತು ನಿತ್ಯಂ ಲೋಕಾಃ ಸಮಸ್ತಾಃ ಸುಖಿನೋ ಭವಂತು ||

       ಹೀಗೆ ಉದಾಹರಿಸುತ್ತಾ ಹೋದರೆ ನಾವೆಷ್ಟು ವಿಶಾಲ ಹೃದಯಿಗಳು ಎಂಬುದು ಅರ್ಥವಾಗುತ್ತದೆ. ಆಗ ಇದ್ದುದ್ದು ಕೂಡು ಕುಟುಂಬ. ಒಬ್ಬ ಯಜಮಾನ, ಅವನೇ ಇಡೀ ಕುಟುಂಬದ ಪಾಲನೆ, ಪೋಷಣೆಗೆ ಜವಾಬ್ದಾರ. ಆಗಲೂ ದುಡಿಮೆ ಇತ್ತು. ಕುಟುಂಬ ಪೋಷಣೆ ಇತ್ತು. ಜನ ತೃಪ್ತರಾಗಿ ಬದುಕುತ್ತಿದ್ದರು. ನಿಧಾನವಾಗಿ ಬ್ರಿಟಿಷರು ಬಿತ್ತಿದ ವಿಷಬೀಜವು ನಮ್ಮ ಕುಟುಂಬ ವ್ಯವಸ್ಥೆಯನ್ನೇ ಒಡೆಯಿತು. ಯಜಮಾನಿಕೆ ಪದ್ಧತಿಯು ದಾಸ್ಯವೆಂದು ಬಿಂಬಿಸಿದರು. ಈಗ ಗಂಡ, ಹೆಂಡತಿ, ಮಕ್ಕಳು, ಎಲ್ಲರೂ ದುಡಿಮೆಯ ಯಂತ್ರಗಳಾಗುತ್ತಿದ್ದಾರೆ. ದುಡಿದು ದುಡಿದು ಸಾಯುತ್ತಿದ್ದಾರೆ. ಹಾಗಾಗಿ ಪುರುಸೊತ್ತಿಲ್ಲ. ಈಗ ಬಾಂಧವ್ಯಕ್ಕೆ ಬೆಲೆಯಿಲ್ಲ, ಗೌರವವಿಲ್ಲ. ಹಣ ಮಾತ್ರ ಲೋಕದ ಎಲ್ಲವೂ ಆಗಿದೆ. ಆದರೆ ತೃಪ್ತಿ ಇಲ್ಲ. ಹಿಂದೆ ತೃಪ್ತಿಯಿತ್ತು, ಪೂರ್ಣ ಸ್ವಾತಂತ್ರ್ಯವಿತ್ತು. ನೀವು ದುಡಿದ ಸಂಪತ್ತು ನಿಮ್ಮದಾಗಿತ್ತು. ಆದರೆ ಈಗ ನೀವು ದುಡಿದ ಹಣ ನಿಮ್ಮದಲ್ಲ. ನಿಮ್ಮದು ಎಂಬ ಭ್ರಾಂತಿಯಲ್ಲಿ ಇದ್ದೀರಷ್ಟೆ. ಈಗ ನಿಮ್ಮನ್ನು ನೀವು ಆಳಿಕೊಳ್ಳುತ್ತಿಲ್ಲ. ಇದು ಒಂದು ರೀತಿಯ "ಭಯಂಕರ ದಾಸ್ಯ". ಆದರೆ ಭ್ರಾಂತಿ, ಹುಚ್ಚಿನ ಅತಿರೇಕದಲ್ಲಿರುವ ನಿಮಗೆ ಅರ್ಥವಾಗುತ್ತಿಲ್ಲವಷ್ಟೆ.
     
ಹಿಂದೆ "ನಮ್ಮ ಹಿರಿಯರಿಗೆ ಸಾವಿರಾರು ಎಕರೆ ಜಮೀನಿತ್ತು". ಈ ವಾಕ್ಯ ದೇಶದ ೭೦% ಜನ ಹೇಳುತ್ತಾರೆ. ಈಗ ಅವರು ಸತ್ತರೆ ಹುಗಿಯಲು 3x6 ಅಡಿ ಜಾಗವಿಲ್ಲದವರ ಸಂಖ್ಯೆ ೨೦ ಕೋಟಿ. ಇವರಿಗೆ ಒಂದಿಂಚು ಭೂಮಿಯೂ ಇಲ್ಲ. ಇನ್ನು ೪೫ ಕೋಟಿ ಜನರಿಗೆ ಅಡಿಲೆಕ್ಕದಲ್ಲಿ ಎಲ್ಲೋ ಸ್ವಲ್ಪ ಜಮೀನಿರಬಹುದು. ಆದರೆ ಅದರ ಪೂರ್ಣ ಸ್ವಾತಂತ್ರ್ಯವಿಲ್ಲ. ಪ್ರತಿ ವರ್ಷ ನೀವು ನಿಮ್ಮ ಪಂಚಾಯಿತಿಗೆ ಅಥವಾ ನಗರಸಭೆಗೆ ಸ್ಥಳ ಬಾಡಿಗೆ ಅರ್ಥಾತ್ ಕಂದಾಯ ಕಟ್ಟಿದರೆ ಮಾತ್ರ ನಿಮ್ಮದದು. ಇಲ್ಲವಾದರೆ ನಿಮ್ಮದಲ್ಲ. ಬ್ಯಾಂಕಿನಲ್ಲಿ ಹಣ ಇಟ್ಟರೆ ಅದು ಲೆಕ್ಕಬದ್ಧವಾಗಿದ್ದರೆ ಮೊತ್ತ ಮಾತ್ರ ನಿಮ್ಮದು. ಬಡ್ಡಿ ಬಂದಾಗ ಅದಕ್ಕೂ ತೆರಿಗೆ ಕಟ್ಟಲೇಬೇಕು. ಉಳಿಕೆ ಮೊತ್ತ ನಿಮ್ಮದು. ಅದೂ ಬ್ಯಾಂಕ್ ದಿವಾಳಿಯಾಗುವವರೆಗೆ. ಬರೇ ಲೆಕ್ಕದ ರೂಪದ ಹಣ. ಅದಕ್ಕೆ ಬೆಲೆ ಇದೆಯೆಂದು ತಿಳಿದಿರಾ?

೧೯೪೫ನೇ ಇಸವಿಯಲ್ಲಿ ನೀವು ಬ್ಯಾಂಕಿನಲ್ಲಿ ಒಂದು ಲಕ್ಷ ಇಟ್ಟಿದ್ದರೆ ಅದು ಈಗ ಕೇವಲ ೧,೧೪೦ ರೂಪಾಯಯಾಗಿ ಪರಿವರ್ತನೆಯಾಗಿದೆ. ಹಣದ ಹಿಂಜರಿತ ಅಥವಾ ಮೌಲ್ಯಕ್ಷಯವೆಂದು ಹೇಳುತ್ತಾರೆ. ಹಾಗಾದರೆ ನಿಮ್ಮ ಹಣವೆಲ್ಲಿ ಹೋಯ್ತು? ಚಿಂತಿಸಿ. ಕೇವಲ ೨% ಅಂದರೆ "ಜೀವಚ್ಛವ" ಎನ್ನುತ್ತಾರೆ ಅರ್ಥವಾಯ್ತೇ? ಈಗ ಮಾನವ ಬರೇ ಜೀವಚ್ಛವ. ಆದರೆ ಅರ್ಥ ಮಾಡಿಕೊಳ್ಳಲಾರ. ಅಸಹಾಯಕ, ಗುಲಾಮ, ಮೂರ್ಖನಾಗಿಯೇ ಬದುಕುತ್ತಿದ್ದಾನೆ. ಅದರಂತೆ ಮುಂದಿನ ಒಗಟು ಸಾಲನ್ನು ಅರ್ಥಮಾಡಿಕೊಂಡರೆ ಉಚಥ್ಯರ ಅಭಿಪ್ರಾಯ ನಿಮಗಾಗುವುದು. ಅದನ್ನು ಸಂಖಲೀಕರಣ ಎಂಬ ಸೂತ್ರದಡಿಯಲ್ಲಿ ಬರೆದಿರುತ್ತೇನೆ.

ಮೂರರೊಳಗೇಳು ಇನ್ನೆರಡು ಲೋಕದ ಸೂತ್ರವಿದೆ
ತೋರಮುತ್ತಿನ ಬಣ್ಣ ಬಿಳಿಯಹುದೇ ನಿಜವಲ್ಲ
ಜಾರು ತರ ಮೂರು ಮೂರೆಂದು ಬಣ್ಣವಿದೆ ಅದರಲಿ
ತೋರುವುದು ಬಿಳಿಯಾಗಿ ಅದರೊಳಗಡಕವಿದೆ ಸಂಖ್ಯೆ, ಪ್ರಮಾಣ, ಘನ, ಶಕ್ತಿ, ವೀರ್ಯಗಳೂ || ೧ ||

ಮೊದಲೇರಡು ಇನ್ನು ಮೇಲೇಳು ಗುಣಕದಲಿ ಉದ್ಧತವು ಸಮುದ್ರ
ಚದುರಂಗದಾ ಲೆಕ್ಕದಲಿ ಕವಡೆ, ಪಕ್ಷಿಯು, ಹರಿಣ, ಮತ್ಸ್ಯವು ಕೂಡ
ಎದುರಲಿ ಕಾಂಬ ಲೆಕ್ಕದ ಮೊತ್ತವೇ ಮಹಿಯೊಳಗೆ ಹುಟ್ಟಿದಾ ಜೀವಿಯಾ ಲೆಕ್ಕ
ವಿದು ಅವಕನ್ನ, ಕಾಲ, ಬಟ್ಟೆಯ ಮೊತ್ತವೇ ಮಿತ್ತಿಹುದು ನೀನದರ ಗುಣಕ ದಂಕವು ಕೇಳು ಮನುಜಾ || ೨ ||

ಲೋಕವಿದೆ ಮೇಲೇಳು ಅದರೊಳು ಗಂಧರ್ವವನು ಕಳೆ
ದೇಕದಲಿ ಭಾಜಿಸಿರೆ ಅಶನವು ಅಶನಿಶಕ್ತಿಯ ಬಲ ವಜ್ರ
ದಂಕೆಯಲಿ ಅಶ್ವಬಲವಿದೆ ಮೂರನೆಯ ಲೋಕದಾಡಂಬರದಿ
ಶಾಖ ಸಖನ ಸಖನಂಕೆಯನು ಗುಣಿಸಿ ಯಮನೊಳು ಕಳೆಯೆ ಕಾಲಗಂಧರ್ವಾ || ೩ ||

ಕಿರಣಪಾತವು ನೈಮಿಷದ ಮೊದಲೆರಡು ಮತ್ತೊಂಬತ್ತು ಇನ್ನೆರಡು
ಕಾರಣವಿದೆ ಜನುಮ ಜನುಮಕೆ ಕರ್ಮವಿದೆ ಭೋಗ್ಯಕೆ ಯಮನದಕೆ
ವರಣವಿತ್ತಿಹ ಜೀವಿ ಕೇಳ್ ವರುಣಪಾಶದ ಬಂಧದಲಿ ಸಿಲುಕಿಹೆ ನೀನು
ಚರಣ ಸಂಖ್ಯೆಯ ಋಣದ ಕಾರಣ ಅಶನ ಭದ್ರತೆ ದೇವನೀವನು ಜನಿಜನಿತಜಾನಿತ್ರವೆಲ್ಲಾ || ೪ ||

ಓಡಿ ಬದುಕುವೆನೆಂಬಾಸೆ ಬಿಡು ಉಣು ನೀ ನಿನ್ನಯ ಕರ್ಮ
ಕೂಡಿ ಕಳೆವನು ಚಿತ್ರಕಾರನು ದಿವಿಯ ಬಂಧನ ಉಂಡಾ
ದೊಡೆ ಕೊನೆಯ ಲೆಕ್ಕವ ಪೇಳ್ವೆ ಜಿಗೀಷದೊಳು ಆಮಿಷದ
ಪಡೆದೇಳು ಆರರ ಮೂರರಲಿ ಅನುಭೋಗ ಓಷಧೀ ಇಳಾಗ್ರಸಿಷ್ಠವದೂ || ೫ ||

ಅದಕೆ ಹೊಂದಿ ಬಂದಿಹೆ ಈ ಶರೀರ ನಿನ್ನದಲ್ಲವು ಮಾತಾಪಿತರು
ಇದಕೆ ಋಣವಿದೆ ದ್ವಿಗುಣ ಮಾತ್ರವದು ಹೊಂದಿದೆ ಜ್ಞಾನ ನಿನ್ನದಲ್ಲಾ
ಅದಕೆ ಋಣ ಸಲ್ಲವು ಮುಂದಿನ ಋಣದ ಮೊತ್ತದ ಏಳು ಭಾಗವು ಈ
ಗದಕೆ ಕೂಡಿಸಿದೆ ನಿನ್ನಯ ಜೀವನ ಯಾವದಾ ಯೋಜನೆದಳತೆ ಬದುಕು ಅಲ್ಲಿಯವರೆಗೆಂಬೇ || ೬ ||


        ಈ ನಾಲ್ಕು ಸಾಲಿನ ಪದ್ಯಗಳು ಕನ್ನಡದಲ್ಲಿದ್ದರೂ ಗೂಡಾರ್ಥದಲ್ಲಿ ಅಡಕವಾಗಿದೆ. ಅದನ್ನು ಸಂಖಲೀಕರಣ ಸೂತ್ರವೆಂಬ ಗಣಿತ ಸೂತ್ರದಂತೆ ಶಬ್ದಗಳಿಗೆ ಅಕ್ಷರ ಸಂಜ್ಞೆಯನ್ನು ಕೊಟ್ಟು ಅಂಕಾದಿ ರೂಪು ಕೊಡುವುದು ಇದರ ರಹಸ್ಯ. ಒಂದು ಜೀವಿಯು ಭೂಮಿಯಲ್ಲಿ ಹುಟ್ಟಿ ಏನೇನು ಏನಕ್ಕೇನು ಮಾಡಬಹುದು ಎಂಬುವುದು ಈ ಆರು ಸೂತ್ರಗಳಲ್ಲಿ ನಿಖರವಾಗಿ ಕಂಡುಹಿಡಿಯಬಹುದು. ಇದು ಋಗ್ವೇದದ ೧ನೇ ಮಂಡಲದ ೧೬೩ನೇ ಸೂಕ್ತದಲ್ಲಿ ಅಳವಡಿಸಿದ್ದಾರೆ ಉಚಥ್ಯರು! ಅದನ್ನು ಅಧ್ಯಯನ ಮಾಡಿ ಅರ್ಥ ಮಾಡಿಕೊಂಡಲ್ಲಿ ಜಗದೆಲ್ಲವೂ ಎಷ್ಟು ಸರಳ ಸುಸೂತ್ರವೆಂಬರಿವು ನಿಮಗಾಗುತ್ತದೆ.

ಇಂತು
- ಕೆ. ಎಸ್. ನಿತ್ಯಾನಂದ
ಅಗಸ್ತ್ಯಾಶ್ರಮ ಗೋಶಾಲೆ
ಬಂದ್ಯೋಡ್, ಕಾಸರಗೋಡು

No comments:

Post a Comment