Thursday, June 2, 2011

ಇಷ್ಟು ಕಾಲ....

ಇಷ್ಟು ಕಾಲ ಒಟ್ಟಿಗಿದ್ದು..ಎಷ್ಟು ಬೆರೆತರೂ.....
ಅರಿತೆವೇನು ನಾವು ನಮ್ಮ ಅಂತರಾಳವ....?

ಸದಾ ಕಾಲ ತಬ್ಬುವಂತೆ ಮೇಲೆ ಬಾಗಿಯೂ.....
ಮಣ್ಣ ಮುದ್ದು ದೊರಕಿತೇನು.. ನೀಲಿ ಬಾನಿಗೆ...?

ಕಡಲ ಮೇಲೆ ಸಾವಿರಾರು ಮೈಲಿ ಸಾಗಿಯೂ.....
ನೀರಿನಾಳ ತಿಳಿಯಿತೇನು ಹಾಯಿ ದೋಣಿಗೆ....?

ಸಾವಿರಾರು ಮುಖದ ಚೆಲುವ ಹಿಡಿದು ತೋರಿಯೂ....
ಒಂದಾದರು ಉಳಿಯಿತೇ..ಕನ್ನಡಿಯ ಪಾಲಿಗೆ....???

1 comment:

ಸೋದರಿ ನಿವೇದಿತಾ

 ಪಾಶ್ಚಾತ್ಯರಿಗೆ ಶಂಕರಾಚಾರ್ಯರಂಥಹ ವ್ಯಕ್ತಿಯೊಬ್ಬರನ್ನು ಊಹಿಸಿಕೊಳ್ಳಲು ಕೂಡ ಕಷ್ಟ. ನಾವು, ಅಂದರೆ ಪಾಶ್ಚಾತ್ಯರು ಅಸ್ಸಿಸಿಯ ಫ್ರಾನ್ಸಿಸ್ಸನ ದೈವಭಕ್ತಿಯನ್ನು ಆಶ್ಚರ್ಯ ಸ...