Tuesday, February 11, 2014

ಬುರಿಡಾನ್‌ನ ಕತ್ತೆ ತತ್ತ್ವಜ್ಞಾನ. ನೀವು ಕತ್ತೆ ಆಗಿದ್ದೀರಾ? - ಶ್ರೀವತ್ಸ ಜೋಶಿ

ಬುರಿಡಾನ್‌ನ ಕತ್ತೆ ತತ್ತ್ವಜ್ಞಾನ. ನೀವು ಕತ್ತೆ ಆಗಿದ್ದೀರಾ?
==========================
ಬಟ್ಟೆಯಂಗಡಿಯಲ್ಲಿ ಸೀರೆ ತಗೊಳ್ಳುವಾಗ ಹುಡುಕಿ ಹುಡುಕಿ ಎರಡನ್ನು ಶಾರ್ಟ್‌ಲಿಸ್ಟ್ ಮಾಡಿ ಅದರ ಪೈಕಿ ಯಾವುದು ಫೈನಲ್ ಎಂದು ನಿರ್ಧರಿಸಲಾಗದೆ ಎರಡನ್ನೂ ಬಿಟ್ಟು ಬೇರೊಂದು ಅಂಗಡಿಯಲ್ಲಿ ನೋಡುವಾ ಎಂದು ನೀವು ಹೊರಬಂದದ್ದಿದೆಯೇ? ’ಬಟ್ಟೆಯಂಗಡಿಯಲ್ಲಿ ಸೀರೆ ಖರೀದಿ’ ಅಂತನೇ ಆಗ್ಬೇಕಿಲ್ಲ. ಬೇರಾವ ಅಂಗಡಿಯಲ್ಲಿ ಬೇರಾವ ವಸ್ತು ಖರೀದಿಯ ದೃಶ್ಯ ಸಹ ಆಗ್ತದೆ. ರೆಸ್ಟೋರೆಂಟ್‌ನಲ್ಲಿ ಸೌತ್ ಇಂಡಿಯನ್ ಊಟ ತಗೊಳ್ಲಾ ಅಥವಾ ನಾರ್ತ್ ಇಂಡಿಯನ್ ನಾನ್ ಗೋಬಿ ಮಟರ್ ತಗೋಳ್ಲಾ ಅಂತನ್ನೋ ಸನ್ನಿವೇಶನೂ ಆಗ್ತದೆ. ಎರಡು ಕಂಪನಿಗಳಿಂದ ಆಫರ್ ಲೆಟರ್ ಬಂದಾಗ ಯಾವುದಕ್ಕೆ ಸೇರಲಿ ಎಂದು ತಲೆಕೆರೆದುಕೊಳ್ಳೋ ಪರಿಸ್ಥಿತಿಯೂ ಆಗ್ತದೆ. ಒಟ್ಟಿನಲ್ಲಿ, ನಿರ್ಧಾರ ತೆಗೆದುಕೊಳ್ಳಲಾರದೆ ಒಂದರೆಕ್ಷಣವಾದರೂ ನೀವು ತೊಳಲಾಡಿದ್ದಿದೆಯೇ?
ಹೌದು ಅಂತಾದರೆ ಆ ಕ್ಷಣದಲ್ಲೊಮ್ಮೆ ನೀವು ಬುರಿಡಾನ್‌ನ ಕತ್ತೆ ಆಗಿದ್ದೀರಿ ಎಂದೇ ಅರ್ಥ!
ಬುರಿಡಾನ್‌ನ ಕತ್ತೆ (Buridan's Ass) ಎಂದರೆ ಒಂದು ಸಂದಿಗ್ಧ ಪರಿಸ್ಥಿತಿಯಲ್ಲಿನ ವಿರೋಧಾಬಾಸ (paradox). ಒಂದು ಕತ್ತೆ ಇರುತ್ತದೆ. ಅದಕ್ಕೆ ವಿಪರೀತ ಬಾಯಾರಿಕೆಯೂ ವಿಪರೀತ ಹಸಿವೆಯೂ ಆಗಿರುತ್ತದೆ. ಅದರ ಇಕ್ಕೆಲಗಳಲ್ಲಿ ಒಂದು ಬಕೆಟ್‌ನಲ್ಲಿ ನೀರು ಮತ್ತೊಂದು ಬಕೆಟ್‌ನಲ್ಲಿ ಬೈಹುಲ್ಲು ಇಡಲಾಗುತ್ತದೆ. ಯಾವ ಬಕೆಟ್‌ಗೆ ಮೊದಲು ಬಾಯಿ ಹಾಕಬೇಕು ಎಂದು ನಿರ್ಧರಿಸಲಾರದೆ ಕತ್ತೆ ಸುಮ್ಮನಾಗುತ್ತದೆ. ಅಷ್ಟೇ ಅಲ್ಲ ಹಾಗೇ ಉಪವಾಸವಿದ್ದು ಕೊನೆಗೆ ಸತ್ತೇ ಹೋಗುತ್ತದೆ!
14ನೇ ಶತಮಾನದಲ್ಲಿ ಬಾಳಿದ ಫ್ರೆಂಚ್ ತತ್ತಜ್ಞಾನಿ ಜೀನ್ ಬುರಿಡಾನ್ ಎಂಬಾತ ಈ ವಿರೋಧಾಭಾಸವನ್ನು ಮೊತ್ತಮೊದಲಿಗೆ ಸಾರ್ವಜನಿಕವಾಗಿ ಚರ್ಚಿಸಿದ. ಸಾಕಷ್ಟು ಗೇಲಿಗೂ ಒಳಗಾದ. ಅವನು ಪ್ರಯೋಗ ಮಾಡಿದ್ದು ತನ್ನ ಸಾಕುನಾಯಿಯ ಮೇಲೆ. ರಷ್ಯನ್ ತತ್ತ್ವಜ್ಞಾನಿ ಪಾವ್ಲೊ ಮಾಡಿದ್ನಲ್ಲ ಹಾಗೆಯೇ ಬುರಿಡಾನ್‌ನ ಪ್ರಯೋಗಪಶು ಸಹ ನಾಯಿಯೇ ಆಗಿತ್ತಂತೆ. ಆದರೆ ನಾಯಿಗಾದರೂ ಸ್ವಲ್ಪ ಸ್ಮಾರ್ಟ್‌ನೆಸ್ ಇರ್ತದೆ, ಎದುರಿಗೆ ಆಹಾರವಿದ್ದೂ ನಿರ್ಧರಿಸಲಾರದೆ ಉಪವಾಸದಿಂದ ಸತ್ತುಹೋಗಬೇಕಿದ್ದರೆ ಅದು ಕತ್ತೆಯಂಥ ದಡ್ಡ ಪ್ರಾಣಿಯೇ ಇರಬೇಕು ಎಂದು ತಮಾಷೆ ಮಾಡಿದ ಜನ ಆ ಪ್ರಯೋಗವನ್ನು "ಬುರಿಡಾನ್‌ನ ಕತ್ತೆ" ಎಂದೇ ಗುರುತಿಸಿದರು. ನಿರ್ಧಾರ ಮಾಡಲಾಗದ, ಡಿಸಿಶನ್ ಮೇಕಿಂಗ್ ಕೆಪ್ಯಾಕಿಟಿ ಇಲ್ಲದ ವ್ಯಕ್ತಿಯನ್ನು ’ಬುರಿಡಾನ್‌ನ ಕತ್ತೆ’ ಎಂದು ತಮಾಷೆ ಮಾಡುವುದು ರೂಢಿಯಾಯ್ತು.
ಈಗ 2014ರ ಲೋಕಸಭಾ ಚುನಾವಣೆಯಲ್ಲಿ ನವಯುವಕರು, ದೇಶ ಮುನ್ನಡೆಯಬೇಕೆಂಬ ಉತ್ಸಾಹಿಗಳು ಮೋದಿಯನ್ನೇ ಬೆಂಬಲಿಸುವುದು ಎಂದು ಆಗಲೇ ನಿರ್ಧರಿಸಿರುವಂತಿದೆ. ಮೋದಿಯನ್ನು ಅತಿಭಯಂಕರವಾಗಿ ವಿರೋಧಿಸುವವರದೂ ನಿರ್ಧಾರ ಹೇಗೂ ಆಗಿದೆ. ಉಳಿದವರ ಪರಿಸ್ಥಿತಿ ಏನು? ಅವರು ತಾವೂ ಉಪವಾಸ ಬಿದ್ದು ದೇಶವನ್ನೂ ಉಪವಾಸಕ್ಕೆ ತಳ್ಳುವ ಬುರಿಡಾನ್ ಕತ್ತೆಗಳಾಗದಿದ್ದರೆ ಸಾಕು!

 ಶ್ರೀವತ್ಸ ಜೋಶಿ

Monday, February 10, 2014

ಕವನ - ಪ್ರೀತಿ, ಹುಡುಗಿ ಸಹವಾಸ, ಹುಚ್ಚು

 ಪ್ರೀತಿ
ಸಿದ್ದರಾಮಯ್ಯನವರಿಗೆ ಅಹಿಂದ ಮೇಲೆ ಪ್ರೀತಿ
ದೇವಗೌಡರಿಗೆ ಮಕ್ಕಳ ಮೇಲೆ ಪ್ರೀತಿ
ಯಡಿಯೂರಪ್ಪನವರಿಗೆ ಲಿಂಗಾಯತ್ ಮೇಲೆ ಪ್ರೀತಿ
ಗೆ೯ ಸಾಹೇಬರಿಗೆ ದಲಿತರ ಮೇಲೆ ಪ್ರೀತಿ
ಎಲ್ಲಾ ಪ್ರೀತಿಯ ಮರ್ಮ ಒಂದೇ ಅದೇ ಅಧಿಕಾರದ ಮೇಲಿನ ಮೋಹ ಮಾತ್ರ.
  

ಹುಡುಗಿ ಸಹವಾಸ
ಹುಡುಗ ಹುಡುಗಿಯ ಸಹವಾಸಕ್ಕೆ ಬರುವ ಮುಂಚೆ
ತುಂಬಿದ ಸಾಗರವಾಗಿದ್ದ,
ಹುಡುಗ ಹುಡುಗಿಯ ಸಹವಾಸದಲ್ಲಿ ಇದ್ದಾಗ,
ಬೇಕಷ್ಟು ನೀರು ಕೊಡುವ ಬಾವಿಯಾಗಿದ್ದ,
ಹುಡುಗಿ ಹುಡುಗನನ್ನು ಬಿಟ್ಟು ಹೋದಾಗ,
ಹುಡುಗ ಒಣಗಿದ ಕೆರೆಯಂತೆ ಬರಬಾದ ಆಗಿದ್ದ.


 ಹುಚ್ಚು
ಭೃಷ್ಟ ವ್ಯವಸ್ಥೆ ಸುಧಾರಿಸುವ ಹುಚ್ಚು ಕ್ರೇಜಿವಾಲಗೆ,
ಸಂಪೂರ್ಣ ವ್ಯವಸ್ಥೆ ಸುಧಾರಿಸುವ ಹುಚ್ಚು ರಾಹುಲ ಗಾಂಧಿಗೆ
ದೇಶ ಸುಧಾರಿಸುವ ಹುಚ್ಚು ನರೇಂದ್ರ ಮೋದಿಗೆ
ಇವರಿಗೆಲ್ಲರಿಗೆ ಬುದ್ದಿ ಕಲಿಸುವ ಹುಚ್ಚು ಮತದಾರಿಗೆ
ಒಟ್ಟಾರೆ ಎಲ್ಲರಿಗೂ ಬೇರೆಯವರನ್ನು ಸುಧಾರಿಸುವ ಹುಚ್ಚು ನಾವು ಬದಲಾಗುವ ಮಾತೇ ಇಲ್ಲ. !

ವಿವೇಕ ಬೆಟ್ಕುಳಿ

‘ಸಾಫ್ಟ್ ಜಗತ್ತಿನಲ್ಲಿ’ - ಕವನ ಸಂಕಲನ




ನನ್ನ ಗೆಳೆಯ ಚೇತನ ಸೊಲಗಿ ಅವರ ಮೊದಲ ಕವನ ಸಂಕಲನ ‘ಸಾಫ್ಟ್ ಜಗತ್ತಿನಲ್ಲಿ’ 

## ನನಗೆ ನಾ ಹೇಳಿಕೂಂಡೆ -

* ನಡೆ ಮತ್ತು ನುಡಿ ಒಂದಾಗಿರೇ ಬದುಕು. ಇಲ್ದೆದಿರೆ... ಅದು ಒಂದು ಬದುಕೇ ? 

* "ಬೆನ್ನುಡಿ "ಗಿಂತಲೂ "ಮುನ್ನುಡಿ" ಚಂದ

ಕೆಡಕು ಮಾಡಿದವನಿಗೆ ಕೆಡುಕು ಮಾಡಿದರೆ ನಾನೂ ಕೆಡುಕನೆ, 

## ನನಗೆ ನಾ ಹೇಳಿಕೂಂಡೆ

Tuesday, February 4, 2014

ಆಧ್ಯಾತ್ಮದಲ್ಲಿ ಅಡೆಗಿದೆ ವಿಜ್ಞಾನದ ರಹಸ್ಯ

ಆಧ್ಯಾತ್ಮದಲ್ಲಿ ಅಡೆಗಿದೆ ವಿಜ್ಞಾನದ ರಹಸ್ಯ
ಆಧ್ಯಾತ್ಮ ಮತ್ತು ವಿಜ್ಞಾನ ಒಂದೇ ನಾಣ್ಯದ ಎರಡು ಮುಖಗಳು
ಫೆಬ್ರವರಿ 1 ಮತ್ತುರಂದು ಬನಾರಸ್ ಹಿಂದೂ ವಿಶ್ವ ವಿದ್ಯಾಲಯದಲ್ಲಿ  8ನೇ ರಾಷ್ಟ್ರೀಯ ವಿದ್ಯಾಥಿ೯ ಸಮ್ಮೇಳನ  ಸೈನ್ಸ್ ಎಂಡ್ ಸ್ಪೀರಿಜ್ಯೂಲ್ ಕ್ವಿಷ್ಟ್   ಜರುಗಿತು. ಸಮ್ಮೇಳನವನ್ನು ಭಕ್ತಿವೇದಾಂತ ಸಂಸ್ಥೆ  ಕಲಕತ್ತಾ ಮತ್ತು ಆಯ್ ಆಯ್ ಟಿ ಬನಾರಸ್ ಹಿಂದೂ ವಿಶ್ವವಿಧ್ಯಾಲಯ ಇವುಗಳು ಜಂಟೀಯಾಗಿ ಆಯೋಜಿಸಿದ್ದವು.
 ಸಮ್ಮೇಳನದಲ್ಲಿ ನಾ೯ಟಕದ ಆದಿ ಚುಂಚನಗಿರಿ ಮಹಾಸಂಸ್ಥಾನ ಮಠದ ಶ್ರೀ ಶ್ರೀ ಶ್ರೀ ನಿರ್ಮಲಾನಂದ ಸ್ವಾಮಿಜಿಯವರು ವಿಶೇಷ ಅತಿಥಿಯಾಗಿ ಆಹ್ವಾನಿಸಿದ್ದರು. ಸಮ್ಮೇಳನವನ್ನು ದೀಪ ಬೆಳಗಿಸುವ ಮುಖಾಂತರ ಸ್ವಾಮಿಜಿಯವರು ಉದ್ಘಾಟಿಸಿದರು.




ವಿಜ್ಞಾನ ಮತ್ತು ಆಧ್ಯಾತ್ಮ ಒಂದೇ ನಾಣ್ಯದ  ಎರಡು ಮುಖಗಳಿದಂತೆ ಇರುವುದು. ಆಧ್ಯಾತ್ಮದಲ್ಲಿಯೇ ವಿಜ್ಞಾನದ ರಹಸ್ಯ ಅಡಗಿರುವುದು ಎಂದು ಹೇಳಿದ ಸ್ವಾಮಿಜಿಯವರು ರೀತಿಯ ಸಮ್ಮೇಳನವನ್ನು ಆಯೋಜಿಸಿ ವಿದ್ಯಾಥಿ೯ ಳಿಗೆ ಅನ್ವೇಷಣೆ ಮಾಡಲು ಪ್ರೋತ್ಸಾಹಿಸುತ್ತಿರುವ ಭಕ್ತಿವೇದಾಂತ ಸಂಸ್ಥೆಯ ಕಾರ್ಯವನ್ನು ಶ್ಲಾಘಿಸಿದರು.  2 ದಿನದ ಕಾರ್ಯಗಾರದ ಸಂಪೂರ್ಣ ಪ್ರಯೋಜನವನ್ನು ಪಡೆಯಲು ಭಾಗವಹಿಸದ್ದ ಎಲ್ಲರಿಗೂ ಕರೆನೀಡಿದರು
ಆಯ್ ಆಯ್ ಟಿ ಗೋವಾಹಟಿಯ ಬೋರ್ಡ ಆಫ್ ಗವರ್ನರದ ಚೇರಮ್ಯಾನ ಪ್ರೋ. ಆರ್.ಪಿ ಸಿಂಗಭಕ್ತಿ ವೇದಾಂತ ಸಂಸ್ಥೆ ಕಲಕತ್ತಾದ ಅಧ್ಯಕ್ಷರಾರ ಶ್ರೀ ವಾಸುದೇವ್ ರಾವ್ಡಾ. ಸುದೀಪ್, ಡಾ. ಪಿ ಕೆ ಗೋಸ್ವಾಮಿಡಾ. ಪ್ರಥ್ವೀಶ ನಾಗ್, ಪ್ರೋ ಪಿ,ಕೆ ಮುಖ್ಯೋಪಾಧ್ಯಾಯ ಹಾಗೂ ಪ್ರೋ ಕೆ ತ್ರಿಪಾಠಿಯವರು ಉದ್ಘಾಟನಾ ಸಮಾರಂಭದಲ್ಲಿ ಉಪಸ್ಥಿತರಿದ್ದರು.
2 ದಿನದ ಸಮ್ಮೇಳನದಲ್ಲಿ ಆಧ್ಯಾತ್ಮ ಮತ್ತು ವಿಜ್ಞಾನಕ್ಕೆ ಸಂಬಂಧಿಸಿದಂತೆ ಉಪನ್ಯಾಸ ಚೆ೯ಗಳು ನಡೆದವು. ಇದರಲ್ಲಿ ದೇಶದ ಹಲವಡೆಯಿಂದ ಬಂದ ವಿದ್ಯಾಥಿ೯ ಗಳು ಭಾಗವಹಿಸಿದ್ದರು.


ವಿವೇಕ ಬೆಟ್ಕುಳಿ


Thursday, January 23, 2014

ಸಂವಿಧಾನದ ಮರು ವಿಮಶೆ೯ ಅಗತ್ಯವೇ? - ವಿವೇಕ್ ಬೆಟ್ಕುಳಿ ಕುಮಟಾ


ವಿಶ್ವದ ಅತಿ ದೊಡ್ಡ ಪ್ರಜಾಪ್ರಭುತ್ವ ರಾಷ್ಟ್ರವಾದ ಗುರುತಿಸಲ್ಪಡುವ ನಮ್ಮ ದೇಶ ಈಗ 64ನೇ ಪ್ರಜಾರಾಜೋತ್ಸವದ ಹೊಸ್ತಿಲಲ್ಲಿ ನಿಂತಿರುವುದು. 1947 ಅಗಷ್ಟ 15 ಭಾರತಕ್ಕೆ ಸ್ವತಂತ್ರ ಸಿಕ್ಕಿತು. ನಮ್ಮನ್ನು ನಾವು ಆಳುವ ಅವಕಾಶ ಬಂತು. ನಮ್ಮ ಆಡಳಿತದಲ್ಲಿ ಯಾವ ರೀತಿ ನೀತಿ ನಿಯಮ ಇರಬೇಕು, ನಮ್ಮ ಆಡಳಿತ ಪದ್ದತಿ ಹೇಗಿರಬೇಕು, ಎಲ್ಲವುಗಳ ಸ್ಪಷ್ಟತೆ ರೂಪುರೇಷೆ ಸಂದರ್ಭದಲ್ಲಿ ಇರಲಿಲ್ಲ.  ಆಡಳಿತ ವ್ಯವಸ್ಥೆ ನೀತಿ ನಿಯಮ ಹೇಗಿರಬೇಕು ಎಂಬುದರ ಬಗ್ಗೆ ಒಂದು ಮಾರ್ಗಸೂಚಿಯ ಅಗತ್ಯವಿತ್ತು. ಅದಕ್ಕಾಗಿ ಸ್ವತಂತ್ರ ಭಾರತದ ಸಂವಿಧಾನ ರಚಿಸಲು ನಿರ್ಧರಿಸಿ ಕಾರ್ಯವನ್ನು ಕರಡು ಸಮಿತಿಗೆ ಒಪ್ಪಿಸಲಾಯಿತು. ಕರಡು ಸಮಿತಿಯ ಅಧ್ಯಕ್ಷರನ್ನಾಗಿ ಅಂಬೇಡ್ಕರರವರನ್ನು ಆಯ್ಕೆ ಮಾಡಲಾಯಿತು.  ಬೇರೆ ಬೇರೆ ದೇಶದ ಎಲ್ಲಾ ಸಂವಿಧಾನಗಳನ್ನು ಅಭ್ಯಸಿಸಿ ಸ್ವತಂತ್ರ್ಯ ಭಾರತಕ್ಕೆ ಸಂವಿಧಾನವನ್ನು ಸಿದ್ದಪಡಿಸಲಾಯಿತು. ಸ್ವತಂತ್ರ ಭಾರತಕ್ಕೆಂದು ರಚಿಸಲ್ಪಟ್ಟ ಸಂವಿಧಾನವನ್ನು 1950 ಜನವರಿ 26 ರಂದು ಅಧಿಕೃತವಾಗಿ ಸ್ವೀಕರಿಸಲಾಯಿತು.  ಅಂದಿನಿಂದ ಜನವರಿ 26ನ್ನು ಪ್ರಜಾರಾಜೋತ್ಸವ/ಗಣರಾಜೋತ್ಸವನ್ನಾಗಿ ದೇಶದಲ್ಲೆಡ ಸಂಭ್ರಮಿಸಲಾಗುವುದು. ಸಂಭ್ರಮಕ್ಕೆ  ಈಗ 64 ಹರಯ.   ಕಳೆದ 63 ವರ್ಷಗಳಿಗೆ ನಮ್ಮ ಸಂವಿಧಾನವನ್ನು 100 ಅಧಿಕ ಬಾರಿ ನಾವು ತಿದ್ದುಪಡಿ ಮಾಡಿಕೊಂಡಿರುವೆವು. ಆಗಾಗ ತಿದ್ದುಪಡಿ ಮಾಡುತ್ತಲೇ ಇರುವೆವು. ಸಂವಿಧಾನದ ಕೆಲವು ಅಂಶಗಳನ್ನು ತಿದ್ದುಪಡಿ ಮಾಡುವ ಬಗ್ಗೆ ಚುನಾವಣೆಯಲ್ಲಿ ರಾಜಕೀಯ ಪಕ್ಷಗಳು ತಮ್ಮ ಪ್ರಣಾಳಿಕೆಯಲ್ಲಿ ಸಹಾ ಸೇರಿಸುವುದನ್ನು ಕಾಣಬಹುದಾಗಿದೆ.
 ನಮ್ಮ ಸಂವಿಧಾನದ ಬಗ್ಗೆ, ನಮ್ಮ ದೇಶ ಪ್ರೇಮದ ಬಗ್ಗೆ, ನಮ್ಮ ವರೆಗಿನ ಸಾಧನೆಯ ಬಗ್ಗೆ ಪ್ರತಿ ಜನವರಿ 26 ರಂದು ಹೇಳಿಕೊಳುತ್ತಾ ನಾವು ಗಣರಾಜೋತ್ಸವವನ್ನು ಆಚರಿಸುತ್ತಿರವೆವು. ಪ್ರತಿ ವರ್ಷ ಬೇರೆ ಯಾವುದಾದರು ದೇಶದ ಅಥಿತಿಯನ್ನು ಆಹ್ವಾನಿಸಿ ತಮ್ಮ ಸಾಧನೆಯನ್ನು ದೆಹಲಿಯಲ್ಲಿ ಪ್ರದಶಿ೯ಸುತ್ತಿರುವೆವು. ಗಣರಾಜೋತ್ಸವ ಪರೇಡ್ ಎಂಬುದು ನಮ್ಮ ದೇಶದ ಹೆಮ್ಮೆ ಎಂದು ನಾವು ಹೇಳಿಕೊಳ್ಳುತ್ತಿರುವೆವು.
ಕಳೆದ ಒಂದೆರಡು ವರ್ಷಗಳಲ್ಲಿ ದೇಶದಲ್ಲಿ ಎಲ್ಲಾ ಕ್ಷೇತ್ರಗಳಲ್ಲಿ ಬದಲಾವಣೆಯ ಗಾಳಿ ಬೀಸುತ್ತಿರುವುದು. ರಾಜಕೀಯದಲ್ಲಿ ಆಮ ಆದ್ಮೀ ಹೊಸ ಸಂಜಲನವನ್ನು ಮೂಡಿಸಿದರೆ, ಜನಹೋರಾಟದಲ್ಲಿ ಅಣ್ಣಾ ಹಜಾರೆಯ ಆಂದೋಲನ ತನ್ನ ಶಕ್ತಿಯನ್ನು ತೋರಿಸಿದೆ. ರಾಷ್ಟ್ರೀಯ ಆಹಾರ ಭಧ್ರತೆಯ ಹಕ್ಕನ್ನು ಜಾರಿಗೊಳಿಸುವ ಮೂಲಕ ಕಾ೯ ತನ್ನ ಬದ್ದತೆಯನ್ನು ತೋರಿಸಿರುವುದು. ಎಲ್ಲಾ ಅಂಶಗಳು ಭಾರತದಂತಹ ದೇಶದಲ್ಲಿ ಒಂದೊಂದು ಮೈಲಿಗಲಾಗಿ ಇರುವುದು.
ಸಲಿಂಗ ಕಾಮಿಗಳ ಬಗ್ಗೆ ಇರುವ ನಿಯಮ, 377 ವಿಧಿ, ರಾಜಕೀಯ ಮತ್ತು ಉದ್ಯೋಗ ಮೀಸಲಾತಿ, ಮಹಿಳೆಯ ರಕ್ಷಣೆ, ಇಂತಹ ಹಲವಾರು ವಿಚಾರಗಳ ಬಗ್ಗೆ ನಮ್ಮ ಎಲ್ಲಾ ನಿಯಮಗಳನ್ನು ಪ್ರಸ್ಥುತ ಪರಿಸ್ಥಿತಿಗೆ ಅನುಗುಣವಾಗಿ ಮಾರ್ಪಡಿಸುವ ಅಗತ್ಯವಿದೆ. ವಿಚಾರಗಳ ಬಗ್ಗೆ ಚೆ೯ಯೂ ಸಹಾ ಆಗುತ್ತಿರುವುದು.
ಆದರೇ 63 ವರ್ಷದ ಹಿಂದಿನ ಪರಿಸ್ಥಿತಿಗೆ ಅನುಗುಣವಾಗಿ ರಚಿಸಿದ ಸಂಪೂರ್ಣ ಸಂವಿಧಾನವನ್ನು ಮರು ವಿಮರ್ಶಗೆ ಒಳಪಡಿಸುವ ಬಗ್ಗೆ ನಾವು ಇಂದು ಚಿಂತಿಸುವ ಅಗತ್ಯವಿದೆ.  ಅಪ್ಪ ನೆಟ್ಟ ಆಲದ ಮರಕ್ಕೆ ನೇಣು ಹಾಕಿಕೊಳ್ಳುವ ಸಂಪ್ರದಾಯವನ್ನು ಬಿಟ್ಟು ನಾವಿಂದು ಹೊಸತನದಲ್ಲಿ ಇಂದಿನ ಸ್ಥಿತಿಗೆ ಹೊಂದುವಂತಹ ಹೊಸ ಸಂವಿಧಾನವನ್ನು ರೂಢಿಸಿಕೊಳ್ಳುವ ಅಗತ್ಯವಿರುವುದು. ಬಗ್ಗೆ ಗಣರಾಜ್ಯೋತ್ಸವದ ಸಂದರ್ಭದಲ್ಲಿ ನಾವು ಚೆ೯ಯೊಂದನ್ನು ಹುಟ್ಟು ಹಾಕುವ ಅಗತ್ಯತೆ ಇರುವುದು.
ಸ್ವತಂತ್ಯ ಸಿಕ್ಕು 67 ವರ್ಷಗಳನ್ನು ಕಳೆದರು ದಲಿತರ ಮೇಲಿನ ದೌರ್ಜನ್ಯ ಒಂದು ಕಡೆ ನಡೆಯುತ್ತಲೇ ಇರುವುದು. ಅದೇ ರೀತಿ ದಲಿತರ ಹೆಸರಿನಲ್ಲಿ ಸೌಲಭ್ಯ ಪಡೆದ ವ್ಯಕ್ತಿ ಅದನ್ನು ದುರುಪಯೋಗ ಮಾಡಿಕೊಳ್ಳುತ್ತಿರುವ ಉದಾಹರಣೆಗಳು ಇರುವವು.
ಯಾವುದೇ ರೀತಿಯ ಕಾನೂನನ್ನು ತಂದರು ಅಪರಾಧಗಳು ಹೆಚ್ಚುತ್ತಲೇ ಇರುವುದು. ಮಹಿಳೆಯರ ಮೇಲೆ ವರ್ಷದಿಂದ ವರ್ಷಕ್ಕೆ ದೌರ್ಜನ್ಯ ನಡೆಯುತ್ತಲೇ ಇರುವುದು. ಒಟ್ಟಾರೆ ನಮ್ಮ ದೇಶ ಜನರ ಹಿತಕ್ಕಿಂತ ಬಂಡವಾಳಶಾಹಿಗಳ ಹಿತಾಸಕ್ತಿಗನುಗುಣವಾಗಿಯೇ ಹೆಚ್ಚಾಗಿ ಗಮನ ಕೇಂದ್ರಿಕರಿಸಿದಂತೆ ಕಂಡು ಬರುತ್ತಿರುವುದು.
ರಾಜಕೀಯ ಪಕ್ಷಗಳು ಸಹಾ ಅಧಿಕಾರಕ್ಕೆ ಬಂದು ಅಪ್ರತ್ಯಕ್ಷವಾಗಿ ಜನರಿಗೆ ವಿವಿಧ ರೀತಿಯ ಸೌಲಭ್ಯಗಳನ್ನು ನೀಡುತ್ತಿರುವುದು. ಟಿವಿ, ಕಂಪ್ಯೂಟರ್, ಸೈಕಲ್, ಮೊಬೈಲ್, ಮಂಗಲಸೂತ್ರ, ದುಡ್ಡು ರೀತಿಯಾಗಿ ನೇರವಾಗಿ ಜನರೊಂದಿಗೆ ಕೊಡುಕೊಳ್ಳುವಿಕೆಯ ವ್ಯವಹಾರಕ್ಕೆ ಇಳಿದಿರುವವು. ಜನರಿಂದ ಜನರ ಕಲ್ಯಾಣಕ್ಕಾಗಿ ಆಯ್ಕೆ ಆದ ಚುನಾಯಿತ ಪ್ರತಿನಿಧಿಗಳು ನೆಂಟರ ಮನೆಗೆ ಹೋಗಿ ಬರುವವರಂತೆ ವಿವಿಧ ಭೃಷ್ಟಾಚಾರದ ಆರೋಪದ ಮೇಲೆ ಜೈಲಿಗೆ ಹೋಗಿ ಬರುತ್ತಿರುವರು ಪುನ: ಆಯ್ಕೆ ಆಗುತ್ತಿರುವರು. ಆದ್ಯಾತ್ಮ ಕೇತ್ರದ ಮಠ, ಮಂದಿರ, ಮಸೀದಿಗಳಲ್ಲಿಯೂ ವಿವಿಧ ಬಗೆಯ ಆರೋಪ ಪ್ರತ್ಯರೋಪಗಳು ಬರುತ್ತಿರುವುದು. ಸ್ವಾಮಿಗಳು ಸಹಾ ಜೈಲಿನಲ್ಲಿರುವರು. ಅತ್ಯಾಚಾರ, ಕೊಲೆ ದರೋಡೆ, ಆರೋಪಿತರು ಜೈಲಿಗೆ ಹೋಗಿ ಬರುವರು ಪುನ: ತಮ್ಮ ಕಾರ್ಯದಲ್ಲಿ ಮಗ್ನರಾಗಿರುವರು. ಆತಂರಿಕೆ ಭದ್ರತೆಗೆ ಸವಾಲಾಗಿರುವ ನಕ್ಸ್ಲಿಸಂ ದಿನೇ, ದಿನೇ ಬೇರೆ ಬೇರೆ ಹೆಸರುಗಳಲ್ಲಿ ಕಾಣಿಸಿಕೊಳ್ಳುತ್ತಿರುವರು.
ಇಂತಹ ಸಂದಿಗ್ದ ಪರಿಸ್ಥಿತಿಯಲ್ಲಿರುವ ನಾವು ಇಂದು ಎಲ್ಲಾ ವ್ಯವಸ್ಥೆಯಲ್ಲಿ ಭಾಗವಾಗಲು ಒಪ್ಪಿಕೊಳ್ಳುತ್ತಿರುವೆವು. ಇಲ್ಲಾ ಎಲ್ಲಾ ಗೊತ್ತಿದ್ದು ಏನು ಮಾಡಲಾಗದೆ ಅಸಹಾಯಕರಾಗಿರುವೆವು. ನಮ್ಮ ಕಾನೂನು ಸಹಾ ಅದೇ ರೀತಿಯ ವ್ಯವಸ್ಥೆಯನ್ನು ಸೃಷ್ಠಿಸಿರುವುದು. ಎಲ್ಲಾ ಹಿನ್ನಲೆಯಲ್ಲಿ ನಮ್ಮ ಸಂವಿಧಾನದ ಸಂಪೂರ್ಣ ಮರು ವಿಮಶೆ೯ ಅಗತ್ಯವೆನಿಸುವುದು.
ನಮ್ಮ ಚುನಾವಣಾ ಪದ್ದತಿ, ಕಾ೯ರದ ಕಾರ್ಯವೈಖರಿ, ಭೃಷ್ಟಾಚಾರ, ಅತ್ಯಾಚಾರ, ಹೆಚ್ಚುತ್ತಿರುವ ವಿವಿಧ ಬಗೆಯ ಅಪರಾಧಗಳು, ದೇಶದ ಭದ್ರತೆ, ಎಲ್ಲಾ ವಿಚಾರಗಳನ್ನು ಗಮನದಲ್ಲಿರಿಸಕೊಂಡು  ವಿವಿಧತೆಯಲ್ಲಿ ಏಕತೆಯಿರುವ ನಮ್ಮಂತ ದೇಶದಲ್ಲಿ ಹೊಸ ಸಂವಿಧಾನದ ಅಗತ್ಯತೆ ಕಂಡುಬರುತ್ತಿರುವುದು. ಬಗ್ಗೆ ಈಗಿನಿಂದಲ್ಲೆ ಚೆ೯ಯನ್ನು ಪ್ರಾರಂಭಿಸಿದರೆ ಮುಂದಿನ ಕೆಲವರ್ಷಗಳಲ್ಲಿ ನಾವು ಕಲ್ಪಿಸಿಕೊಳ್ಳುವ ರೀತಿಯಲ್ಲಿ ಸಂವಿಧಾನ ಬರಬಹುದಾಗಿದೆ.
ವ್ಯಕ್ತಿಯೊಬ್ಬ ಸರಾಸರಿ 60 ವರ್ಷಗಳ ಕಾಲ ಉತ್ತಮವಾಗಿ ಕಾರ್ಯನಿರ್ವಹಿಸಬಲ್ಲನು. ಅದನ್ನು ತಿಳಿದೆ ಕಾ೯ರ್  ನಿವೃತ್ತಿ ವಯಸ್ಸನ್ನು 58-60 ವರ್ಷಕ್ಕೆ ನಿಗದಿಪಡಿಸಿದೆ. ಅದೇ ರೀತಿ 63 ವರ್ಷದ ಹಳೆಯ ಸಂವಿಧಾನಕ್ಕೆ ಒಂದು ನಿವೃತ್ತಿ ಎಂಬುದು ಇರುವುದು ಅಗತ್ಯ. ಬಗ್ಗೆ ಚೆ೯ ಪ್ರಾರಂಭವಾಗುವ ಅಗತ್ಯವಿದೆ.
                                                                                                                                                   
ವಿವೇಕ್ ಬೆಟ್ಕುಳಿ ಕುಮಟಾ

ಡಾ ಎಚ್ ಎಸ್ ವೆಂಕಟೇಶ ಮೂರ್ತಿ (೨೩.೦೬.೧೯೪೪-೩೦.೦೫.೨೦೨೫) - ಒಂದು ನೆನಪು - ಸಿ ಬಿ ಶೈಲಾ ಜಯಕುಮಾರ್. ಚಿತ್ರದುರ್ಗ.

  "ಪ್ರೀತಿ ಕೊಟ್ಟ ರಾಧೆಗೆ...ಮಾತು ಕೊಟ್ಟ ಮಾಧವ..." "ಅಮ್ಮ ನಾನು ದೇವರಾಣೆ ಬೆಣ್ಣೆ ಕದ್ದಿಲ್ಲಮ್ಮ..." "ಲೋಕದ ಕಣ್ಣಿಗೆ ರಾಧೆಯೂ ಕೂಡ ......