ಸಂತೃಪ್ತಿ

 ಸಂತೃಪ್ತಿ

ಕಿಕ್ಕಿರಿದ ಬಸ್ಸಿನಲ್ಲಿ ಕುಳಿತುಕೊಳ್ಳಲು ಆಸನವೇ ಇರಲಿಲ್ಲ; ಅಷ್ಟರಲ್ಲೇ ಕುಳಿತಿದ್ದ ಯಾರೋ ಒಬ್ಬ ಎದ್ದು ನಿಂತು ತನ್ನ  ಆಸನವನ್ನು ಬಿಟ್ಟು ಕೊಟ್ಟ. ಅವನು ಸ್ವಲ್ಪ ಮುಂದೆ  ತೆರಳಿ ನಿಂತನು.  ನನಗೂ ಸಾಕಾಗಿತ್ತು, ಮರು ಮಾತನಾಡದೆ  ಕುಳಿತುಕೊಂಡೆ.  ಅಷ್ಟರಲ್ಲಿ  ಮುಂದೆ  ಬಂದ ಸ್ಟಾಪ್ ನಲ್ಲಿ ಒಬ್ಬರು ಪ್ರಯಾಣಿಕರು ಇಳಿದರು.


 ಖಾಲಿಯಾದ ಆ ಸೀಟ್ನಲ್ಲಿ ನನಗೆ ಸೀಟ್ ಬಿಟ್ಟು ಕೊಟ್ಟಿದ್ದ ಆ ಪ್ರಯಾಣಿಕ ಮತ್ತೆ ಕುಳಿತನು.ಅಷ್ಟರಲ್ಲಿ ಮತ್ತೊಬ್ಬ ಪ್ರಯಾಣಿಕ ಬಸ್ ಹತ್ತಿದ. ಮತ್ತೆ ಅವನು ಎದ್ದುನಿಂತು ಆ ಹೊಸಬನಿಗೆ  ಮತ್ತೆ ತನ್ನ ಆಸನವನ್ನು ಬಿಟ್ಟು ಕೊಟ್ಟನು. ಹೀಗೆಯೇ ಮುಂದಿನ ನಾಲ್ಕೈದು ನಿಲ್ದಾಣಗಳಲ್ಲಿ ಅವನು ಕುಳಿತಿರುವ ಆಸನವನ್ನು ಎಲ್ಲರಿಗೂ ನೀಡುವುದನ್ನು ಅವನು ಮುಂದುವರಿಸಿದ.


ನಾನು ಎಲ್ಲವನ್ನೂ ಗಮನಿಸುತ್ತಿದ್ದೆ, ನಾನು ನನ್ನ ಕೊನೆಯ ನಿಲ್ದಾಣದಲ್ಲಿ ಬಸ್ ಇಳಿಯುವ ಮೊದಲು ಅವನೊಂದಿಗೆ ಮಾತನಾಡಿದೆ: "ನೀನು ಕುಳಿತುಕೊಳ್ಳುವ ಬದಲು ನಿನ್ನ ಸ್ಥಾನವನ್ನು ಬೇರೆಯವರಿಗೆ ಏಕೆ ನೀಡುತ್ತಿರುವೆ?  " ನಾನು  ಕೇಳಿದೆ. 

ಅವನ ಉತ್ತರ ನನಗೆ ಆಶ್ಚರ್ಯ ತಂದಿತು.  "ನಾನು ವಿದ್ಯಾವಂತನಲ್ಲ, ಶ್ರೀಮಂತನೂ ಅಲ್ಲ. ಕೂಲಿ ಕೆಲಸ ಮಾಡುವವನು. ಯಾರಿಗೂ ಯಾವುದೇ ರೀತಿಯಲ್ಲಿ ಸಹಾಯಯಾಗಲಿ,    ಹಣ ಸಹಾಯ ವಾಗಲಿ ಮಾಡಲು ನನಗೆ ಸಾಧ್ಯವಾಗುವುದಿಲ್ಲ. ಅದಕ್ಕಾಗಿಯೇ ನಾನು ಇದನ್ನು ಪ್ರತಿದಿನ ಮಾಡುತ್ತಿದ್ದೇನೆ. ಈ ಕೆಲಸ ತುಂಬಾ ಸುಲಭ" ಎಂದನು. 

ಮುಂದುವರಿದು ನುಡಿದ. "ನಾನು ಸೀಟು ಕೊಟ್ಟಾಗ ನನಗೆ ಪ್ರತಿಯಾಗಿ ಧನ್ಯವಾದ ಸಲ್ಲಿಸುತ್ತಾರೆ, ನಾನು ಯಾರಿಗೂ ಏನನ್ನೂ ಕೊಡಲಾಗದ ಪರಿಸ್ಥಿತಿಯಲ್ಲಿದ್ದೇನೆ, ಈ ತೃಪ್ತಿಯೇ ನನಗೆ ಸಾಕು.  ಆ ತೃಪ್ತಿಯಿಂದ ನಾನು ಆರಾಮವಾಗಿ ಮಲಗುತ್ತೇನೆ" ಎಂದನು.

ನನಗೆ  ಮಾತೇ ಹೊರಡಲಿಲ್ಲ.!

ನಾವು ಬೇರೆಯವರಿಗೆ ಕೊಡಬೇಕೆಂದರೆ ನಮ್ಮ ಬಳಿ ಏನೂ ಇಲ್ಲದಿದ್ದರೂ ಯಾವುದಾದರೊಂದು ರೂಪದಲ್ಲಿ ಕೊಡಬಹುದು ಎಂಬುದನ್ನು ಅವನಿoದ ಕಲಿತೆ.  ನಾವು ಶ್ರೀಮಂತರು ಮತ್ತು ಸ್ಥಿತಿ ವಂತರಾಗಿದ್ದರೆ  ಮಾತ್ರ ನಾವು ಇನ್ನೊಬ್ಬರಿಗೆ ಏನನ್ನಾದರೂ ನೀಡಬಹುದು ಎಂದು ಯೋಚಿಸುವುದು ತಪ್ಪು.  

 ಏನನ್ನಾದರೂ, ಯಾವುದೇ ರೂಪದಲ್ಲಿದಾರೂ ಸರಿ ಕೊಡುವ ಹೃದಯವುಳ್ಳ ಯಾರಾದರೂ ಸರಿಯೇ, ಅವರು "ಶ್ರೀಮಂತರು" ಯಾರಿಗಾದರೂ ನಮ್ಮ ಕೈಲಾದ ಏನನ್ನಾದರೂ ನೀಡುವ "ತೃಪ್ತಿ" ಬೇರೆ ಯಾವುದರಲ್ಲಿಯೂ ಬರುವುದಿಲ್ಲ. 

(ಸಂಗ್ರಹ ಮಾಹಿತಿ.)

Comments

Popular posts from this blog

ಮುದ್ದಣ ಮನೋರಮೆಯ ಸಲ್ಲಾಪ - ಶ್ರೀವತ್ಸ ಜೋಶಿ

ಕನ್ನಡ ಕಾದಂಬರಿ ಮತ್ತು ಪುಸ್ತಕಗಳು

ಮೂಡುವನು ರವಿ ಮೂಡುವನು - ಪಂಜೆ ಮಂಗೇಶ ರಾಯರು