Posts

Showing posts from May, 2013

ಬಾಹ್ಯ ರೂಪ - ಗುರುರಾಜ ಕರ್ಜಗಿ,

Image
1930-31ರಲ್ಲಿ ತಮಿಳುನಾಡಿನ ತಿರುಚ್ಚಿಯಲ್ಲಿ ಕನ್ನಡ ಸಂಘದವರು ಒಂದು ಕಾರ್ಯಕ್ರಮ ಆಯೋಜಿಸಿದ್ದರು. ಅದಕ್ಕೆ ಮುಖ್ಯ ಅತಿಥಿಯನ್ನಾಗಿ ಟಿ.ಪಿ. ಕೈಲಾಸಂರ ಅವರನ್ನು ಆಹ್ವಾನಿಸಿದ್ದರು. ಹಿಂದಿನ ರಾತ್ರಿ ಬೆಂಗಳೂರಿನಿಂದ ಹೊರಟು ಮರುದಿನ ಇನ್ನೂ ಬೆಳಗಾಗುವುದರೊಳಗೆ ರೈಲಿನಿಂದ ತಿರುಚ್ಚಿಯನ್ನು ತಲುಪಿದರು ಕೈಲಾಸಂ. ಸಾಮಾನ್ಯವಾದ ದಿನದಲ್ಲೇ ತಮ್ಮ ವೇಷಭೂಷಣಗಳ ಬಗ್ಗೆ ಅಷ್ಟೊಂದು ಗಮನ ನೀಡದ ಕೈಲಾಸಂ, ರಾತ್ರಿ ಪ್ರವಾಸದಲ್ಲಿ ತಮಗೆ ಅನುಕೂಲವೆನಿಸಿದ ಬಟ್ಟೆ ಧರಿಸಿದ್ದರು. ಅವರು ರೈಲಿನಿಂದ ಇಳಿದಾಗ ಅವರ ವೇಷ ವಿಚಿತ್ರವಾಗಿತ್ತು. ಸ್ಯಾಂಡೋ ಬನಿಯನ್, ಕೊಳೆಯಾಗಿದ್ದ ಲುಂಗಿ, ಹೆಗಲಿಗೊಂದು ಕೈ ಚೀಲ. ಕೆಳಗಿಳಿದು ಕತ್ತು ತಿರುಗಿಸಿ ಅತ್ತಿತ್ತ ನೋಡಿದರು. ಸಂಘಟಕರಾರಾದರೂ ಬಂದಿರಬಹುದೇ ಎಂದು ಹುಡುಕಾಡಿದರು. ಯಾರೂ ಕಾಣಲಿಲ್ಲ. ಮನದಲ್ಲೇ ಅವರನ್ನು ಶಪಿಸಿ ತಾವೇ ಏನಾದರೂ ವ್ಯವಸ್ಥೆ ಮಾಡಿಕೊಳ್ಳಬೇಕೆಂದು ಹೊರನಡೆದರು. ಆಗ ಯಾರೋ ಇವರ ಹೆಗಲ ಮೇಲೆ ಒಂದು ಕೋಲನ್ನು ಇಟ್ಟಂತಾಯಿತು. ತಿರುಗಿ ನೋಡಿದರೆ ಒಬ್ಬ ದೀರ್ಘದೇಹಿ ನಿಂತಿದ್ದಾರೆ. ಘಿಗರಿಗರಿ ಮಲ್ ಪಂಚೆ, ಉದ್ದ ಕ್ಲೋಸ್ ಕಾಲರ್ ಉಲ್ಲನ್ ಕೋಟು, ತಲೆಗೆ ಜರೀಪೇಟ, ಕಣ್ಣಿಗೆ ಕಪ್ಪು ಕನ್ನಡಕ. ಒಟ್ಟಿನಲ್ಲಿ ಅತ್ಯಂತ ಶ್ರಿಮಂತರ ಠೀವಿ. ಕೈಯಲ್ಲಿಯ ಬೆತ್ತವನ್ನು ತೋರಿಸುತ್ತಾ ತಮಿಳಿನಲ್ಲಿ ಹೇಳಿದರು, `ಏ ಕೂಲಿ, ಬಾ ಇ್ಲ್ಲಲಿ', ನಂತರ ತಮ್ಮ ಹಾಸಿಗೆ ಸುರುಳಿ ಮತ್ತು ಸೂಟಕೇಸನ್ನು ತೋರುತ್ತ,  `ಇವೆರ...

ಹಳ್ಳಿಯ ಲೆಕ್ಕಗಳು - ಮಾ.ಕೃ.ಮಂಜು

ಹಳೆಯ ಹಳ್ಳಿಯ ಲೆಕ್ಕಗಳು ತೂಕ ಹಾಗೂ ಅಳತೆಗೆ ಸಂಬಂಧಿಸಿದಂತೆ ಹಿಂದೆ ತೂಕವನ್ನು "ರೂಪಾಯಿ"ಗಳಿಂದಲೇ ಕಂಡುಕೊಂಡಿದ್ದು ನಮಗೆ ಕಂಡುಬರುತ್ತದೆ. ೨೪ ಬೆಳ್ಳಿ "ರೂಪಾಯಿ"ಗಳ ತೂಕವನ್ನು ಒಂದು "ಸೇರು" ಎಂದು ಮಾಡಿಕೊಂಡಿದ್ದರಿಂದ, ಅದರ ಅಳತೆಗೆ ತಕ್ಕಂತೆ " ಸೇರಿ"ನ ಸೃಷ್ಟಿಯಾಗಿರುವುದನ್ನು ನಾವು ಗಮನಿಸುತ್ತೇವೆ. ಹೀಗೆ "ಪಾವು", "ಚಟಾಕು", "ಗಜ", "ಅಂಗುಲ", "ಮೈಲಿ", "ಹರಿದಾರಿ" "ಎಕರೆ" ಮುಂತಾದ ಅಳತೆಮಾನಗಳು ಹಾಗೂ "ತೊಲ", "ಪಲ್ಲ", "ಖಂಡುಗ" ಮುಂತಾದ ತೂಕಮಾನಗಳು ಬಂದು ಸೇರಿಕೊಂಡಿವೆ. ಉದಾಹರಣೆಗೆ, ಒಂದು ಸೇರು ಎಂದರೆ, ೨೪ ಬೆಳ್ಳಿ "ರೂಪಾಯಿ"ಗಳ ತೂಕ ಅಥವಾ ನಾಲ್ಕು "ಪಾವು" ಎಂದೂ ಹಾಗೂ ಒಂದು "ಗಜ" ಎಂಬುದನ್ನು ಮೂರು "ಅಡಿ" ಎಂದು ಹೇಳಲಾಗುತ್ತದೆ. ಇವುಗಳ ಪ್ರಕಾರ ತೂಕ ಹಾಗು ಅಳತೆಗಳನ್ನು ನಾವು ಈ ರೀತಿ ವಿಂಗಡಿಸಬಹುದಾಗಿದೆ. ೧ ಬೆಳ್ಳಿ ರೂಪಯಿ ತೂಕ = ೧ ತೊಲ ೧ ಪಾವು = ೪ ಚಟಾಕು ೧ ಸೇರು = ೪ ಪಾವು ಅಥವ ೨೪ ಬೆಳ್ಳಿ ರೂಪಯಿಗಳ ತೂಕ ೧ ಇಬ್ಬಳಿಗೆ = ಐದೂವರೆ ಸೇರು (ದೊಡ್ದ ಇಬ್ಬಳಿಗೆಯಾದರೆ ೬ ಸೇರು) ೧ ಪಲ್ಲ = ೧೦೦ ಸೇರು ೧ ಕೊಳಗ = ೨ ಇಬ್ಬಳಿಗೆ ಅಥವ ೧೧ ಸೇರು ೧ ಖಂಡುಗ = ೪೦ ಇಬ್ಬಳಿಗೆ ಅಥವ ೨೦ ಕೊಳಗ ...
ಯಾರ ಯೋಗ್ಯತೆಯನ್ನು ಅವರ ಲೋಪಗಳ ಆಧಾರದ ಮೇಲೆ ನಿರ್ಣಯಿಸಬಾರದು.

ಕೃತಜ್ಞತೆ - ಗುರುರಾಜ ಕರ್ಜಗಿ,

Image
ಗಾಂಧೀಜಿ ಪುಣೆಯ ಯೆರವಡಾ ಜೈಲಿನಲ್ಲಿದ್ದಾಗ ಒಂದು ದಿನ ಅವರಿಗೊಂದು ಪತ್ರ ಬಂದಿತು. ದಿನಾಲೂ ಗಾಂಧೀಜಿಗೆ ಪತ್ರಗಳು ಬರುವುದು ಸಾಮಾನ್ಯವಾದ ವಿಷಯವಾಗಿದ್ದರೂ ಈ ಪತ್ರ ವಿಶೇಷವಾಗಿತ್ತು. ರಣಛೋಡದಾಸರೆಂಬವರು ಬರೆದ ಈ ಪತ್ರದಲ್ಲಿ ಎಂಭತ್ತೆಂಟು ಪ್ರಶ್ನೆಗಳಿದ್ದವು.  ಪ್ರತಿಯೊಂದು ಪ್ರಶ್ನೆಗೂ ಗಾಂಧೀಜಿ ಉತ್ತರಿಸಲೇಬೇಕೆಂಬ ಒತ್ತಾಯವೂ ಇತ್ತು. ಗಾಂಧೀಜಿಯವರ ಕಾರ್ಯದರ್ಶಿಯಾಗಿದ್ದ ಮಹಾದೇವ ದೇಸಾಯಿಯವರಿಗೆ ಕೋಪ ಬಂತು.  ಅದನ್ನು ಬಾಪೂಜಿಗೆ ತೋರಿಸಿ ಹರಿದುಹಾಕಬೇಕೆಂದುಕೊಂಡರು.  ಗುರುರಾಜ ಕರ್ಜಗಿ ಆದರೆ ಗಾಂಧೀಜಿ ಅದನ್ನು ಮುಖ್ಯವಾದ ಪತ್ರವೆಂಬಂತೆ ತಾಳ್ಮೆಯಿಂದ ಓದಿದರು. ಅದರಲ್ಲಿ ಅನೇಕ ಪ್ರಶ್ನೆಗಳು. ಅವುಗಳಲ್ಲಿ ಕೆಲವು ಗಾಂಧೀಜಿಗೆ ನೋವು ಉಂಟುಮಾಡುವಂಥವು, ಕೆಲವು ಅವರ ತತ್ವಗಳನ್ನು ಬಲವಾಗಿ ವಿರೋಧಿಸುವಂಥವು ಇದ್ದವು.  ಗಾಂಧೀಜಿ ಸ್ವತ: ತಾವೇ ಪ್ರತಿಯೊಂದು ಪ್ರಶ್ನೆಗೂ ಉತ್ತರ ಬರೆದರು. ಇದು ಮಹಾದೇವ ದೇಸಾಯಿಯವರಿಗೆ ಸರಿ ಕಾಣಲಿಲ್ಲ,  ಬಾಪೂ, ರಣಛೋಡದಾಸರು ನಮ್ಮೆಲ್ಲರ ಮನಸ್ಸಿಗೆ ನೋವಾಗುವಂತೆ ಉದ್ದೇಶಪೂರ್ವಕವಾಗಿ ಬರೆದಿದ್ದಾರೆ. ನೀವು ಆ ಪತ್ರಕ್ಕೆ ಅಷ್ಟೊಂದು ಮಹತ್ವ ನೀಡಿ ಉತ್ತರ ಬರೆದಿದ್ದು ನನಗೆ ಸರಿ ಕಾಣುವುದಿಲ್ಲ  ಎಂದರು.  ಆಗ ಗಾಂಧೀಜಿ ಹೇಳಿದರು,  ಮಹಾದೇವ, ರಣಛೋಡದಾಸರು ನನಗೆ ತುಂಬ ಅವಶ್ಯವಾಗಿದ್ದಾಗ ಸಹಾಯ ಮಾಡಿದ್ದಾರೆ.  ನಾನು ಕೊನೆಯ ಉಸಿರು ಇರುವ ತನಕ ಅವರು ಮಾಡಿದ ...

ದಾನದ ಮಹಿಮೆ : ಕೃಪೆ - ಪ್ರಜಾವಣಿ

ಡಾ. ಚಂದ್ರಶೇಖರ ಕಂಬಾರ ಅವರು ಬರೆದ ಅನೇಕ ಸುಂದರ ಜನಪದ ಕಥೆಗಳಲ್ಲಿ ಇದೊಂದು. ಒಂದು ಊರಿನಲ್ಲಿ ತಾಯಿ ಮಗ ಇದ್ದರು. ತಾಯಿ ಬೇರೆಯವರ ಮನೆಗಳಲ್ಲಿ ದುಡಿದು ಹಣಗಳಿಸಿ, ಅದರಲ್ಲೇ ಸಾಕಷ್ಟನ್ನು ದಾನ ಮಾಡಿ ಉಳಿದದ್ದರಲ್ಲಿ ಇಬ್ಬರ ಜೀವನ ಸಾಗಿಸುತ್ತಿದ್ದಳು.  ಮಗನಿಗೆ ಈ ದಾನ ಇಷ್ಟವಿಲ್ಲ. ಆಕೆಯನ್ನು ಕೇಳಿದ, `ಯಾಕೆ ಹೀಗೆ ದಾನ ಮಾಡುತ್ತೀ. ಕೆಲವೊಮ್ಮೆ ಉಪವಾಸ ಇದ್ದು ದಾನ ಮಾಡುತ್ತಿ.  ಈ ದಾನದ ಮಹತ್ವ ಏನು'  ತಾಯಿ ಹೇಳಿದಳು,  `ಮಗೂ, ದಾನದಿಂದ ಪುಣ್ಯ ಬರುತ್ತದೆ. ಪುಣ್ಯ ಎಂದರೇನು'  ಮಗ ಕೇಳಿದ. ತಾಯಿ,  `ನನಗೇನು ಗೊತ್ತಪ್ಪ.  ಅದು ಶಿವನಿಗೇ ಗೊತ್ತು. ಅವನನ್ನೇ ಹೋಗಿ ಕೇಳು'  ಎಂದಳು. ಮಗ ಶಿವನನ್ನು ಕಾಣಲು ಹೊರಟ. ದಾರಿಯಲ್ಲಿ ದಟ್ಟವಾದ ಅರಣ್ಯ. ಕತ್ತಲೆಯೂ ಆಯಿತು.  ತರುಣನಿಗೆ ಗಾಬರಿ. ಆಗ ಅಲ್ಲಿಗೊಬ್ಬ ಬೇಡ ಬಂದ.  ಈತನನ್ನು ಕರೆದುಕೊಂಡು ತನ್ನ ಗುಡಿಸಲಿಗೆ ಹೋದ. ಹೆಂಡತಿಗೆ ಹಣ್ಣು, ಹಂಪಲುಗಳನ್ನು ನೀಡಲು ಕೇಳಿದ. ಆಕೆ ಸಿಡುಕಿನಿಂದ, `ನನ್ನದ್ದನ್ನು ಕೊಡಲಾರೆ, ಬೇಕಾದರೆ ನಿನ್ನ ಪಾಲಿನಲ್ಲೇ ಕೊಡು' ಎಂದಳು.  ಬೇಡ ತನ್ನ ಪಾಲಿನ ಆಹಾರವನ್ನು ಈತನಿಗಿತ್ತು, ಕಾಲು ಒತ್ತಿ, ಹಾಸಿಗೆ ಹಾಸಿ ಗುಡಿಸಲಿನಲ್ಲಿ ಮಲಗಿಸಿದ.  ತಾನು ಗುಡಿಸಿಲಿನ ಅರ್ಧ ಒಳಗೆ, ಅರ್ಧ ಹೊರಗೆ ಮಲಗಿದ. ರಾತ್ರಿ ಹುಲಿ ಬಂದು ಬೇಡನನ್ನು ಹೊಡೆದು ತಿಂದಿತು. ಗುಡಿಸಲಿನೊಳಗೆ ನುಗ್ಗಿ ಅವನ ಹೆಂಡತಿಯನ...

ಸುಭಾಷಿತ

ಪ್ರಜಾಪ್ರಭುತ್ವದಲ್ಲಿ ಬಲಿಷ್ಠನಿಗಿರುವಷ್ಟೇ ಅವಕಾಶಗಳು ದುರ್ಬಲನಿಗೂ ಇರಬೇಕು. -ಮಹಾತ್ಮ ಗಾಂಧೀಜಿ

ಮಾಹಿತಿ ಹಕ್ಕು ಅಧಿನಿಯಮ, ೨೦೦೫ - ಒಂದು ಅವಲೋಕನ

http://www.ourkarnataka.com/Articles/law/information.htm E0zÀÄ vÀ0vÀæeÁÕ£À ±ÀgÀªÉÃUÀzÀ°è ¨É¼ÉAiÀÄÄwÛgÀĪÀÅzÀÄ ¸ÁéUÀvÁºÀð. « - ªÁtÂdå, « - ªÀiÁgÀÄPÀmÉÖ, « - ¨Áå0Q0Uï, « - DqÀ½vÀ, « - «zÁå¨sÁå¸À J®èªÀÇ «zÀÄå£ÀäAiÀĪÁVzÉ. ¨sÁgÀvÀzÀ°è ªÀiÁ»w ªÀÄvÀÄÛ vÀ0vÀæeÁÕ£À PÁ¬ÄzÉUÉ C¨sÀÆvÀ¥ÀǪÀð ¸ÁéUÀvÀ ¹QÌzÉ. F ªÀiÁ»w ªÀÄvÀÄÛ vÀ0vÀæeÁÕ£À PÁ¬ÄzÉ- 2000 zÀ°è ªÀiÁ»wAiÀÄ §UÉÎ ¸ÀzÀj PÁ£ÀÆ£ÀÄ ¸ÀĪÀÄä¤zÀÄÝzÀÄ M0zÀÄ «¥ÀAiÀiÁð¸À. 2005 gÀ°è ªÀiÁ»w ºÀPÀÄÌ C¢ü¤AiÀĪÀÄ eÁjUÉ §0zÀÄ ªÀiÁ»w J0§ ¥ÀzÀPÉÌ ªÀĺÀvÀéªÀ£ÀÄß PÉÆnÖzÉ. ªÀiÁ»w J0zÀgÉ ¸ÁªÀiÁ£Àå £ÁUÀjÃPÀ¤UÉ ¸ÀPÁðgÀzÀ E¯ÁSÉUÀ¼À°ègÀĪÀ PÀqÀvÀUÀ¼À §UÉÎ, ¸ÀPÁðgÀzÀ RZÀÄð ªÉZÀÑUÀ¼À §UÉÎ, CzÀgÀ DqÀ½vÀzÀ §UÉÎ ¹UÀĪÀ ªÀiÁ»w. E0zÀÄ ªÀiÁ»w ºÀPÀÄÌ C¢ü¤AiÀĪÀÄ eÁjUÉ §0zÀÄ ¥ÀæwAiÉƧ⠣ÁUÀjÃPÀ¤UÉ ¸ÀPÁðgÀzÀ°ègÀĪÀ ªÀiÁ»w ®¨sÀåªÁVzÉ. F C¢ü¤AiÀĪÀĪÀ£ÀÄß £ÀªÀÄä ¸À0¸ÀvÀÄÛ ¨sÁgÀwÃAiÀÄjUÉ ¤Ãr £ÀªÀÄä ¸À0«zsÁ£ÀªÀ£ÀÄß UËgÀ«¹zÉ. zÀ±ÀPÀUÀ¼À PÁ®¢0zÀ®Æ ¸ÀPÁðgÀzÀ PÀqÀvÀUÀ¼À gÀºÀ¸Àå ¸ÁªÀiÁ£Àå £ÁUÀjÃPÀ¤UÉ w½AiÀÄĪÀÅzÀÄ zÀÄ®ð¨sÀªÁVvÀÄÛ. £ÀªÀÄUÉ ¸ÁévÀ0vÀæ÷å §0zÀ ªÉÄÃ®Æ ¸ÀºÀ ©ænõÀgÀ ¥ÀgÀ...