ನಮ್ಮನು ಮತ್ತು ಬ್ಲಾಗಿನ ಓರೆ ಕೋರೆಯನು ತಿದ್ದಲು, ಬ್ಲಾಗಿಗೆನಲ್ಲಿ ಬರೆಯಲು.. ನಿಮ್ಮ ಸಂಗ್ರಹವನು ಪ್ರಕಟಿಸಲು ನಮ್ಮನ್ನು ತಲುಪಲು - ಇ ಮೇಲ್ ಕಳುಹಿಸಿ - kannada.info@gmail.com |.

Friday, March 8, 2013

ಕನ್ನಡ ಸಿನಿಮಾ - ಮುಂಗಾರು ಮಳೆ




ಮಾಹಿತಿ ಕೃಪೆ - http://kn.wikipedia.org/wiki/ಮುಂಗಾರು_ಮಳೆ


ಮುಂಗಾರು ಮಳೆ

ಮುಂಗಾರು ಮಳೆ ೨೦೦೬ರಲ್ಲಿ ಬಿಡುಗಡೆಯಾದ ಕನ್ನಡ ಚಿತ್ರ. ಯೋಗರಾಜ್ ಭಟ್ ನಿರ್ದೇಶನದ ಚಿತ್ರದಲ್ಲಿ ಗಣೇಶ್, ಸಂಜನಾ ಗಾಂಧಿ ಮತ್ತು ಅನಂತ್ ನಾಗ್ ಪ್ರಮುಖ ಪಾತ್ರಗಳಲ್ಲಿ ಕಾಣಿಸಿಕೊಂಡಿದ್ದಾರೆ. ಬಿಡುಗಡೆಯಾದ ೪೦೦ ದಿನಗಳ ನಂತರ ಗಲ್ಲಾಪೆಟ್ಟಿಗೆಯಲ್ಲಿ ೭೫ ಕೋಟಿ ಗಳಿಕೆ ಚಿತ್ರವು ಎಲ್ಲಾ ಅಪೇಕ್ಷೆಗಳನ್ನೂ ಮೀರಿ ಯಶಸ್ಸುಗಳಿಸಿದ್ದಕ್ಕೆ ಸಾಕ್ಷಿ. ಮುಂಗಾರು ಮಳೆ ಚಿತ್ರವು ರಾಜ್ಯದ ಹಲವೆಡೆ ಯಶಸ್ವಿ ಪ್ರದರ್ಶನಗೊಂಡು ದಾಖಲೆ ನಿರ್ಮಿಸಿದ್ದಲ್ಲದೇ ಶತದಿನೋತ್ಸವವನ್ನು ದಾಟಿ ರಜತ ಮಹೋತ್ಸವವನ್ನು ಆಚರಿಸಿಕೊಂಡಿದೆ. ಬೆಂಗಳೂರಿನ ಪಿವಿಆರ್ ಸಿನೆಮಾಸ್ ಚಿತ್ರಮಂದಿರದಲ್ಲಿ ಸತತವಾಗಿ ಒಂದು ವರ್ಷ ಪ್ರದರ್ಶಿಸಲ್ಪಟ್ಟಿದ್ದು ಭಾರತದಲ್ಲಿ ಒಂದು ದಾಖಲೆ[೧].
ಚಿತ್ರವನ್ನು ತೆಲುಗಿನಲ್ಲಿ ವಾನ ಮತ್ತು ಬೆಂಗಾಲಿಯಲ್ಲಿ ಪ್ರೇಮೆರ್ ಕಹಿನಿ ಎಂದು ಮರು-ನಿರ್ಮಾಣ ಮಾಡಲಾಯಿತು.


ನಿರ್ದೇಶಕ ಯೋಗರಾಜ್ ಭಟ್ ಅವರು ಮಯೂರ್, ರಾಧಿಕಾ ನಟಿಸಿದ ಮಣಿ ಮತ್ತು ಸುದೀಪ್, ರಮ್ಯಾ ನಟಿಸಿದ ರಂಗ (ಎಸ್.ಎಸ್.ಎಲ್.ಸಿ) ಚಿತ್ರಗಳನ್ನ ನಿರ್ದೇಶಿಸಿದ್ದರು. ಎರಡೂ ಚಿತ್ರಗಳು ಹೆಚ್ಚಿನ ಯಶಸ್ಸು ಕಾಣಲಿಲ್ಲ. ನಂತರ ಯುವ ಲೇಖಕ ಪ್ರೀತಂ ಗುಬ್ಬಿ ಜೊತೆಗೂಡಿ ಮುಂಗಾರು ಮಳೆ ಚಿತ್ರದ ಕಥೆ ನಿರ್ಮಾಣ ಪ್ರಯತ್ನಿಸಿದ್ದರು. ಯೋಗರಾಜ್ ಭಟ್ ಅವರು ಚಿತ್ರದ ಕಥೆಯನ್ನು ಪುನೀತ್ ರಾಜ್‌ಕುಮಾರ್ ಅವರಿಗೆ ನಿರೂಪಿಸಿದ್ದರು, ನಂತರ ಪುನೀತ್ ಅವರು ಚಿತ್ರದಲ್ಲಿ ನಟಿಸಲು ನಿರಾಕರಿಸಿದ್ದರು. "ಕಾಮಿಡಿ ಟೈಮ್" ಗಣೇಶ್ ಅವರು ಮುಂಗಾರು ಮಳೆ ಚಿತ್ರದ ಕಥೆ ನಿರ್ಮಾಣದ ಹಂತದಲ್ಲೆ ಯೋಗರಾಜ್ ಅವರೊಡನೆ ಕೆಲಸ ಮಾಡಿದ್ದರಿಂದ ಚಿತ್ರದಲ್ಲಿ ನಟಿಸುವ ಕುತೂಹಲದಲ್ಲಿದ್ದರು. ಯೋಗರಾಜ್ ಅವರನ್ನು ನಿರ್ಮಾಪಕ ಈ. ಕೃಷ್ಣಪ್ಪ ಅವರಿಗೆ ಭೇಟಿ ಮಾಡಿಸಿದವರ ಗಣೇಶ್ ಅವರೆ. ಕೃಷ್ಣಪ್ಪ ಅವರು ಮತ್ತು ಗಣೇಶ್ ಒಂದೆ ಊರಿನವರಾದ್ದರಿಂದ ಮುಂಚಿನ ಪರಿಚಯವಿತ್ತು, ಕೃಷ್ಣಪ್ಪನವರು ಚಿತ್ರ ನಿರ್ಮಿಸಲು ಒಪ್ಪಿದರು. ಕನ್ನಡದ ಯಾವುದೇ ಹೆಸರಾಂತ ನಟಿ ಸಿಗದಿದ್ದ ಕಾರಣ ಯೋಗರಾಜ್ ಅವರು ಉತ್ತರ ಭಾರತದ ಸಂಜನಾ ಗಾಂಧಿ ಅವರನ್ನು ನಾಯಕಿ ಪಾತ್ರಕ್ಕೆ ಆಯ್ಕೆ ಮಾಡಿದರು. ಇದು ಇವತ್ತಿನವರೆಗು ಅದ್ಭುತ್ ಚಿತ್ರ ಹೆಲ್ಲಬಹುದು.


ಗಣೇಶ್ - ಪ್ರೀತಂ ಪಾತ್ರದಲ್ಲಿ
ಸಂಜನಾ ಗಾಂಧಿ - ನಂದಿನಿ ಪಾತ್ರದಲ್ಲಿ
ಅನಂತ್ ನಾಗ್ - ಕರ್ನಲ್ ಸುಬ್ಬಯ್ಯ ಪಾತ್ರದಲ್ಲಿ
ಸುಧಾ ಬೆಳವಾಡಿ - ಕಮಲಾ ಪಾತ್ರದಲ್ಲಿ
ಪದ್ಮಜಾ ರಾವ್ - ಬಬ್ಲೀ ಬಬೀತ ಪಾತ್ರದಲ್ಲಿ
ದಿಗಂತ್ - ಗೌತಮ್ ಪಾತ್ರದಲ್ಲಿ
ನೀನಾಸಂ ಅಶ್ವತ್ಥ್ - ಜಾಲಿ ಪಾತ್ರದಲ್ಲಿ
ಜೈಜಗದೀಶ್ - ಜಯಂತ್ ರಾವ್ ಪಾತ್ರದಲ್ಲಿ.

No comments:

Post a Comment