Tuesday, October 15, 2013

ತುಳಿಸಿಕೊಂಡವರು ಇವರು - ಪವನ್ ಪಾರುಪತ್ತೇದಾರ


ಪವನ್ ಪಾರುಪತ್ತೇದಾರ


ಅದು ಸಿಂಧೂ ನದಿಯ ಸೇತುವೆ
ಅಲ್ಲಲ್ಲಿ ಕಾಂಕ್ರೀಟಿನ ಕೊರತೆ
ಕಬ್ಬಿಣದ ಸಲಾಕೆಗಳ ಅಲುಗಾಟ ಬೇರೆ
ತಟದಾಕಡೆ ಹೆಸರಾಂತ ದೇಗುಲ
ತಟದೀಕಡೆ ಜಾತ್ರೆ ಪೇಟೆ ಪೆಂಡಾಲು

ಸೇತುವೆಯ ಮೇಲೆ ಇಪ್ಪತ್ತೈದು ಸಾವಿರ ಜನೆ
ಎಲ್ಲರ ಮನದಲ್ಲೂ ಒಂದೇ ಬಯಕೆ
ಆಯುಧಗಳಿಗೊಂದಷ್ಟು ಶಕ್ತಿ ಬರಲೆಂದು
ಗುದ್ದಲಿ ಪಿಕಾಸಿ ಶನಕೆ ಕುಡುಗೋಲು
ನೇಗಿಲು ವೊರವಾಲೆ ಇನ್ನು ಇನ್ನೆಷ್ಟೋ

ಈಗ ಅದೇ ಸೇತುವೆ ಇನ್ನೂ ಭದ್ರವಾಗಿದೆ
ಆದರಲ್ಲಿ ಎಲ್ಲರಲ್ಲು ಭಯದ ವಾತಾವರಣ
ಕಾಂಕ್ರೀಟು ಗುಂಡಿಗಳಲ್ಲಿ ರಕ್ತದ ಹೆಪ್ಪುಗಟ್ಟುವಿಕೆ
ಕಬ್ಬಿಣದ ಸಲಾಕೆಗಳಿಗೆ ಕರುಳು ನರಗಳ ಹಾರ
ಇಲ್ಲಿ ಯಾರು ಪಾಪಿಗಳೋ ಗೊತ್ತಿಲ್ಲ
ತುಳಿದವರ ತುಳಿಸಿಕೊಂಡವರ

ಸಿಂಧು ಹರಿಯುತ್ತಳೇ ಇದ್ದಾಳೆ
ರಕ್ತದ ತೊಟ್ಟು ಸೇತುವೆಯ ಸೊಂದಿಗಳಿಂದ
ಜಾತ್ರೆ ಪೇಟೆ ಪೆಂಡಾಲುಗಳಲ್ಲಿನ
ಸರಕುಗಳೆಲ್ಲಾ ಸೂತಕದ ಮೌನ
ಗಿರಗಿಟ್ಟಲೆ ಹಿಡಿದ ಹುಡುಗನ ಕೈ ಹಾಗೆ ಇದೆ
ಜೋಳಿಗೆಯಲ್ಲಿ ತುಂಬಿಕೊಂಡಿದ್ದ ಕಡಲೆ ಹಾಗೆ ಇದೆ
ಆದರೆ ಯಾರಿಗೂ ಜೀವವಿಲ್ಲ
ಶಕ್ತಿ ದೇವತೆ ಆಯುಧಗಳ ಹಿಡಿದು ಮೌನವಾಗಿದ್ದಾಳೆ
ವಿಧಿಯ ಅಟ್ಟಹಾಸವ ಮೆಟ್ಟಿ ನಿಲ್ಲದೆ
ವಿಧಿಯ ಅಟ್ಟಹಾಸವ ಮೆಟ್ಟಿ ನಿಲ್ಲದೆ

(ಮಧ್ಯಪ್ರದೇಶದಲ್ಲಿ ಕಾಲ್ತುಳಿತಕ್ಕೆ ಬಲಿಯಾದವರ ಕುರಿತು )

ದೇವರು ರುಜು ಮಾಡಿದನು - ಕುವೆಂಪು

ದೇವರು ರುಜು ಮಾಡಿದನು;
ರಸವಶನಾಗುತ ಕವಿ ಅದ ನೋಡಿದನು!

ಬಿತ್ತರದಾಗಸ ಹಿನ್ನೆಲೆಯಾಗಿರೆ
ಪರ್ವತದೆತ್ತರ ಸಾಲಾಗೆಸೆದಿರೆ
ಕಿಕ್ಕಿರದಡವಿಗಳಂಚಿನ ನಡುವೆ
ಮೆರೆದಿರೆ ಜಲಸುಂದರಿ ತುಂಗೆ
ದೇವರು ರುಜು ಮಾಡಿದನು;
ರಸವಶನಾಗುತ ಕವಿ ಅದ ನೋಡಿದನು!

ನದಿ ಹರಿದಿತ್ತು; ಬನ ನಿಂತಿತ್ತು;
ಬಾನ್ ನೀಲಿಯ ನಗೆ ಬೀರಿತ್ತು.
ನಿರ್ಜನ ದೇಶದ ನೀರವ ಕಾಲಕೆ
ಖಗರವ ಪುಲಕಂ ತೋರಿತ್ತು.
ಹೂಬಿಸಲಲಿ ಮಿರುಗಿರೆ ನಿರಿವೊನಲು
ಮೊರೆದಿರೆ ಬಂಡೆಗಳಲಿ ನೀರ‍್ತೊದಲು
ರಂಜಿಸೆ ಇಕ್ಕೆಲದಲಿ ಹೊಮ್ಮಳಲು

ಸಿಬ್ಬಲುಗುಡ್ಡೆಯ ಹೊಳೆಯಲಿ ಮೀಯುತ
ಕವಿಮನ ನಾಕದಿ ನೆಲೆಸಿತ್ತು;
ಮಧು ಸೌಂದರ್ಯದ ಮಧುರ ಜಗತ್ತು
ಹೃದಯ ಜಿಹ್ವೆಗೆ ಜೇನಾಗಿತ್ತು!

ದೃಶ್ಯದಿಗಂತದಿನೊಮ್ಮೆಯೆ ಹೊಮ್ಮಿ
ಗಿರಿವನ ಪಟದಾಕಾಶದಲಿ
ತೇಲುತ ಬರಲ್ಕೆ ಬಲಾಕಪಂಕ್ತಿ
ಲೇಖನ ರೇಖಾವಿನ್ಯಾಸದಲಿ,
ಅವಾಙ್ಮಯ ಛಂದಃಪ್ರಾಸದಲಿ,

ಸೃಷ್ಟಿಯ ರಚನೆಯ ಕುಶಲಕೆ ಚಂದಕೆ
ಜಗದಚ್ಚರಿಯಂದದ ಒಪ್ಪಂದಕೆ
ಚಿರಚೇತನ ತಾನಿಹೆನೆಂಬಂದದಿ
ಬೆಳ್ಳಕ್ಕಿಯ ಹಂತಿಯ ಆ ನೆವದಿ
ದೇವರು ರುಜು ಮಾಡಿದನು:
ರಸವಶನಾಗುತ ಕವಿ ಅದ ನೋಡಿದನು!

ಡಾ ಎಚ್ ಎಸ್ ವೆಂಕಟೇಶ ಮೂರ್ತಿ (೨೩.೦೬.೧೯೪೪-೩೦.೦೫.೨೦೨೫) - ಒಂದು ನೆನಪು - ಸಿ ಬಿ ಶೈಲಾ ಜಯಕುಮಾರ್. ಚಿತ್ರದುರ್ಗ.

  "ಪ್ರೀತಿ ಕೊಟ್ಟ ರಾಧೆಗೆ...ಮಾತು ಕೊಟ್ಟ ಮಾಧವ..." "ಅಮ್ಮ ನಾನು ದೇವರಾಣೆ ಬೆಣ್ಣೆ ಕದ್ದಿಲ್ಲಮ್ಮ..." "ಲೋಕದ ಕಣ್ಣಿಗೆ ರಾಧೆಯೂ ಕೂಡ ......