Friday, November 9, 2012

ದಿಕ್ಕು ತಪ್ಪಿದ ಅನಾಮಿಕ ನಾವೆಗೆ....


ನಿನ್ನೆದೆಯ ಗಡಿಯಂಚಿನಲ್ಲಿಯೆ ನನ್ನೆಲ್ಲ ಕನಸುಗಳು ಅಹೋರಾತ್ರಿ ಕಾವಲಿಗಿವೆ.... ನನ್ನ ಕಣ್ಣಚಿಂದ ಜಾರಿದ ಕಿರು ಕನಸೊಂದು ನಿನ್ನ ನಗುವಲ್ಲಿ ಕರಗಿ ಕಣ್ಮರೆಯಾಗುವಾಗ ನಾನು ಪರಮ ಸುಖಿ, ಅಳಿಸಲಾಗದ ಗುರುತನ್ನ ಮನಸಲ್ಲಿ ಹಚ್ಚೆ ಹೊಯ್ದ ನೆನಪಿನ ಲೇಖನಿ ಇನ್ನೂ ಮನಸಿನಲ್ಲಿ.... ಬಾಣದಂತೆ ಚುಚ್ಚಿಕೊಂಡಿದೆ/ ಹೇಳದ ನೂರು ಮಾತುಗಳಿಗೆ ಒಂದು ಮೌನ ಸಮ ಕಣ್ಣ ಭಾಷೆಯದ್ದೆ ಅಸಮಾನ ಘಮ.... ನೀನಿಲ್ಲ ನಿನ್ನ ನೆನಪಿದೆ ಮರೆತಿಲ್ಲ ನಿನ್ನಲ್ಲೆ ನನ್ನ ಮನಸಿದೆ, ಕಣ್ಣ ಕನ್ನಡಿಯ ಪ್ರತಿ ಪ್ರತಿಫಲನವೂ ನಿನ್ನ ನೆನಪುಗಳಲ್ಲೆ ಹೊಳೆಯುವಾಗ.... ಇನ್ನು ನನ್ನದೇನು ಇಲ್ಲಿ ಹೇಳು?// ಕತ್ತಲಲ್ಲಿ ಕರಗಿದ್ದ ಕುರುಡು ಕನಸುಗಳಿಗೆ ನೀ ಜೊತೆಗಿದ್ದಾಗ ಕಡುಗಪ್ಪು ಹಾದಿಯೂ ನಿನ್ನ ಕಣ್ಬೆಳಕಲ್ಲಿ ಸಲೀಸು.... ಕಡೆಯವರೆಗೂ ಅಂತಹ ನೆನಪುಗಳ ನಿರಂತರ ಜೊತೆ ಮಾತ್ರ ನನಗೆ ಸಾಕು, ಪ್ರತಿ ಉಸಿರ ಆವರ್ತದ ಬಸಿರಿನಲ್ಲಿ ಬಿಸಿಯಾಗಿ ಹೊಮ್ಮುವ ನೀನಿತ್ತ ಬೆಚ್ಚನೆಯ ನೆನಪುಗಳ.... ಸಾಂಗತ್ಯ ಸದಾ ನನಗೆ ಬೇಕು/ ನೆಲದ ನಿರೀಕ್ಷೆಗೆ ಬಾನಿನ ಆರ್ದ್ರತೆಯ ಬಗ್ಗೆ ಆರ್ತ ನೋಟವಿದ್ದಾಗ ಮೋಡ ಮಳೆಯಾಗಿ ಇಳೆಯ ತಣಿಸುತ್ತಿದೆ.... ಧರೆಗೆ ತಂಪೆರೆವ ಇರುಳ ನಿಲಕ್ಕೆ ನೆಲವನ್ನ ಮುಟ್ಟುವ ಹಂಬಲ ನಿರಂತರ, ನೆನೆದಷ್ಟೂ ನಿನ್ನ ನೆನಪಲ್ಲಿ ನನ್ನ ಒಳ ಮನಕ್ಕೆ ಅದೇನೋ ಹಿತದ ಅಮಲೇರುತ್ತದೆ.... ಕೇವಲ ಕನಸಲ್ಲಿ ಹೀಗೆಯೆ ಕಾಡುತ್ತಿರು ಮನಸೊಳಗಿನ ನೆನಪುಗಳು ಬಾಡದಂತೆ ನೀ ಕಾಪಾಡುತ್ತಿರು.... ಹಗಲಿನ ಬೆಳಕ ಹಿನ್ನೆಲೆಯಲ್ಲಿ ಹೊಳೆವ ನಿನ್ನ ಕನಸುಗಳು ನನ್ನ ಹೀಗೆಯೆ ಆವರಿಸುತ್ತಿರಲಿ// ಖಚಿತ ಭರವಸೆಗಳ ಆಸರೆಯಿಲ್ಲದಿದ್ದರೂ ಕನಸುಗಳಿಗೆ ಬರವೆ ನನ್ನ ಕಣ್ಣುಗಳಲ್ಲಿ ಹೇಳು? ತಾವರೆ ಮೇಲಿಳಿವ ಹನಿ ನೀರು ಕೆಸುವಿನ ಪತ್ರೆ ಮೇಲಿರುವ ಹೊಳೆವ ಜಲದ ಬಿಂದುವಿನ ದನಿ ನಾನು.... ಜಾರುವುದು ಖಚಿತ ಆದರೂ ಅದು ನಿನ್ನ ಅಂಗೈ ಮೇಲೆ ಆಗಿರಲಿ ಅಂತನ್ನುವ ಕ್ಷೀಣ ಆಸೆ ನನ್ನದು, ಉಸಿರ ಕೊನೆಯ ಉಚ್ವಾಸದಲ್ಲೂ ನೋಡಿದೆಯ ನಿನ್ನದೆ ಅವಾಸ... ದಿನವಿಡಿ ಕಾದ ಮನ ಉಸಿರ ಕೊನೆ ಕ್ಷಣದವರೆಗೂ ನಿನ್ನ ಪ್ರತೀಕ್ಷೆಯಲ್ಲಿ ತಲ್ಲೀನ ನನ್ನೆಲ್ಲ ಮೌನ ನಿನ್ನ ಮಾತಲ್ಲಿ ಲೀನ/ ಕತ್ತಲ ಅಂತರಾಳದಲ್ಲಿ ಅಡಗಿರುವ ಕನಸುಗಳ ಕಣ್ಣುಗಳಲ್ಲಿ ಕಾತರದ ಕಡತಗಳ ದೊಡ್ಡ ದಾಸ್ತಾನಿದೆ..... ದೂರ ಇದ್ದಷ್ಟು ಬಾನಿಗೂ ನೆಲಕ್ಕೂ ತೀರದ ಸೆಳೆತ ಮೋಡದ ಮನದಲ್ಲಿ ನಿರಂತರ ಧರೆಯದೆ ನಾಮದ ಮಿಡಿತ, ಮನಕ್ಕೆ ಮುಸುಗಿರುವ ಮೋಡ ಮಳೆಯಾಗಿ ಮಣ್ಣು ಸೇರುವ ತನಕ ದುಗುಡದ ಕರಿಛಾಯೆ.... ಹೀಗೆಯೆ ಆವರಿಸಿರಲಿದೆ// ದೂರದ ದ್ವೀಪ ಮುಟ್ಟುವ ದಿಕ್ಕು ತಪ್ಪಿದ ಅನಾಮಿಕ ನಾವೆಗೆ.... ಕಡೆಗೂ ದಡ ಮುಟ್ಟಿದ್ದೊಂದೆ ಕಳ್ಳ ಸಮಾಧಾನ, ಸಾಗರದ ಎದೆಯ ಮೇಲೆ ಸಾಗುವ ದೋಣಿಗಳಿಗೆ ದಡ ಮುಟ್ಟಿಸುವ ಹೊಣೆ ಎಲ್ಲಾ ಅಲೆಗಳಿಗೂ ಇದ್ದೇ ಇದೆ/ ಕೇವಲ ನಿರೀಕ್ಶೆಯ ನೆಲೆಗಟ್ಟಿನ ಮೇಲೆಯೆ ಸಾಗಿಸ ಬೇಕಿದೆ ಬದುಕು.... ಅದರೊಂದಿಗೆ ಸಲ್ಲ ಬೇಕಿದೆ ಅದಕೂ-ಇದಕೂ, ಕಂಬನಿ ಹಿಡಿತ ಮೀರಿ ಉಕ್ಕುತ್ತಿರೋದು ಕನಸು ಕಮರಿ ಹೋಗಿದ್ದಕ್ಕೊ ಇಲ್ಲಾ ಮನಸು ಮುದುಡಿದ್ದಕ್ಕೋ ಗೊತ್ತಾಗುತ್ತಿಲ್ಲ.... ಕತ್ತಲ ಕೊನೆಯಂಚಿನಲ್ಲಿ ಅಡಗಿದ ಬೆಳಕಿನ ಭರವಸೆಯಲ್ಲಿಯೆ ಅಡಗಿದೆ ನಾಳಿನ ಬದುಕು//

Thursday, November 8, 2012

ಸಕಾರಣವಿದೆ.......


ಕಿತ್ತಿಡಲಾಗದ ಸಹಜ ಭಾವ ನಿನ್ನೆಡೆಗಿನ ನನ್ನ ಸೆಳೆತ ಇಷ್ಟು ಬೇಗ ನಾವು ಅಗಲಲೆ ಬೇಕಿತ್ತಾ?.... ಏನೆಲ್ಲಾ ಕನಸಿದ್ದೆ ಎಷ್ಟನ್ನೆಲ್ಲ ಕನವರಿಸಿದ್ದೆ ಕಮರಿತು ಸ್ವಪ್ನ ಸುಮ ಬಾಳಲ್ಲಿ ಇನ್ನೆಲ್ಲಿ ಸಂತಸದ ಸ್ನೇಹ ಘಮ, ಇಂದು ನೋವಿಗೆ ನೂರು ಕಾರಣಗಳಿವೆ ನಲಿವಿಗೆ ಮಾತ್ರ ನಿನ್ನ ಎಂದಿನದ್ದೋ ಒಂದು ನಿಷ್ಕಲ್ಮಶ ಮುಗುಳ್ನಗೆಯ ನೆನಪೊಂದೆ ನನಗಾಸರೆ/ ಕಂಡಿದ್ದ ಸುಂದರ ಕನಸು ಬಾಳಲ್ಲಿ ಕಡೆಗೂ ಸುಂದರ ಕನಸಾಗಿಯೇ ಉಳಿದು ಹೋಯಿತಲ್ಲ... ನಾನೆಂತಾ ನತದೃಷ್ಟ, ಬಾನು ಭೂಮಿಯ ಗಾಢ ಸಂಬಂಧದ ನಡುವೆ ಮೂಡುವ ಬಿರುಕೆ ಮುಗಿಲಂಚಿನ ಮಿಂಚು// ಗಾಳಿಗೂ ಮೋಡಕೂ ಕಳೆದೆರಡು ದಿನಗಳಿಂದ ವಿರಸ ಅದಕ್ಕೇನೆ ಬಾನು ಬಿಡುತ್ತಿದೆ ಕಡು ತಂಪಿನ ಶ್ವಾಸ... ಮನಸ ಬರಡು ಮರಳುಗಾಡಲ್ಲೂ ಉಳಿದ ನೆನಪ ಜೋಡಿ ಹೆಜ್ಜೆಗಳು ನೆನ್ನೆಯ ನೆನಪನ್ನ ಅಚ್ಚಳಿಯದಂತೆ ಉಳಿಸಿವೆ, ಸಾವಿರ ಕನಸುಗಳ ಅಶ್ವವನ್ನೇರಿ ನಿಶ್ಚಿತ ಗುರಿಯನ್ನಷ್ಟೆ ಹೋಗಿ ಸೇರುವ ಸ್ವಪ್ನಗಳೆಲ್ಲ.... ಹಾದಿಯುದ್ದ ಹೆಜ್ಜೆಗುರುತುಗಳನ್ನ ಉಳಿಸುತ್ತಾ ಸಾಗಿವೆ/ ನನ್ನ ಕಣ್ಣಚಿಂದ ಜಾರಿದ ಕಿರು ಕನಸೊಂದು ನಿನ್ನ ನಗುವಲ್ಲಿ ಕರಗಿ ಕಣ್ಮರೆಯಾಗುವಾಗ ನಾನು ಪರಮ ಸುಖಿ.... ಮಳೆಗೆ ಮರುಳಾದ ಇಳೆ ಇರುಳಿಡಿ ತೊಯ್ದು ಮನದ ಒಳಗೆ ಹನಿ ಒಲವನ್ನೂ ಹಿಡಿದಿಟ್ಟುಕೊಳ್ಳುತ್ತಿದೆ// ಕದಡಿ ಹೋಗಿದ್ದ ಕನಸಿನ ಕೊಳದಲ್ಲಿ ಮೆಲ್ಲಗೆ ಮಳೆಹನಿಗಳು ತಾಕಿ...... ನೆಮ್ಮದಿಯ ಅಲೆಗಳು ಏಳಲಿಕ್ಕೆ ಹವೆಣಿಸುತ್ತಲಿವೆ, ಸರಿ ಹೋಗದ ಮನಸ್ಥಿತಿಯಲ್ಲಿ ಕಿರು ಬೆಳಕು/ ಕಹಿ ನೂರಿದ್ದರೂ ನೆತ್ತಿಯ ಮೇಲೆ ಸಂಕಟದ ಶಾಶ್ವತ ಸೂರಿದ್ದರೂ ನಾಮ ಜಪದ ಕ್ಷಣಿಕ ಸಂತಸವೂ ನನ್ನ ಸಂಗಡವಿದ್ದೇ ಇದೆ, ಕರಿ ಮೆತ್ತಿದ ಕನಸುಗಳಿಗೆ ಬೆಳಕಿನ ನಿರೀಕ್ಷೆಯಿಲ್ಲ..... ಬರಿ ಮತ್ತಿನ ಮಾತುಗಳಿಗೆ ಸಾಕಾರದ ಅಪೇಕ್ಷೆಯೂ ಇಲ್ಲವಲ್ಲ// ಕಿತ್ತು ತಿನ್ನುವ ಹತ್ತು ನೋವುಗಳ ಸಂಗಡ ನಿತ್ಯ ಏಗುವ ಮನ ಮುಗ್ಧ ಮೂಢ..... ಮರೆಮಾಚಿದ ಮಾತುಗಳೆಲ್ಲ ಮೌನದಲ್ಲಿ ಲೀನವಾಗಿ ಮನಸೊಳಗೆ ಕರಗಿ ಹೋದವು, ಕಡುಚಳಿಯ ಕತ್ತಲ ಹಾದಿ ಸವಿಸಲಿದೆ ಎದೆಯಲ್ಲಿ ನೀ ಹೊತ್ತಿಸಿ ಹೋಗಿರುವ ಸುಡುವ ನೋವಿನ ಉರಿ ಅಗ್ಗಿಷ್ಟಿಕೆ/ ಕಾರಣವಿಲ್ಲದೆ ತುಂಬಿಬರುವ ಕಂಗಳಿಗೆ ಹನಿಯಲು ನಿನ್ನ ಅಗಲಿಕೆಯ ಸಕಾರಣವಿದೆ, ನನ್ನ ಕಣ್ನುಗಳು ಗುತ್ತಿಗೆ ಹಿಡಿದ ನಿನ್ನ ಕನಸುಗಳಿಗೆ ನಿತ್ಯ ನಿನ್ನ ನೆನಪಲ್ಲಿಯೆ ನವೀಕರಣ//

ಸುರಿವ ಹನಿಮಳೆಯೂ .......



ಒಲವೂ, ವಿರಹವೂ, ಸಂತಸವೂ, ಸಂಕಟವೂ ನೋವೂ, ನಲಿವೂ ನೀನೆ ತಾನೆ ನನಗಿತ್ತ ಗೋಳು.... ಎಲ್ಲವೂ ನಿನ್ನ ಭಿಕ್ಷೆ, ಅತಿರೇಕದ ಅವಲಂಬನೆಗೆ ಮನಸು ತೆತ್ತ ದುಬಾರಿ ದಂಡ ಎಕಾಂತದ ದೀರ್ಘ ಬಾಳು... ಇದೊಂಥರಾ ಸ್ವಯಂ ಶಿಕ್ಷೆ./ ಬಲು ಬೇಸರದ ಸಂಜೆ ಅದೇಕೊ ಆವರಿಸಿ ಮೆಲ್ಲನೆ ಮನಸ ಹಿಂಡುತ್ತಿದೆ.... ಕಣ್ಣ ಮರೆಯ ಕಡು ನೋವಲ್ಲೂ ತುಟಿಯಂಚಲ್ಲಿ ನಸು ನಗು ಅರಳಿಸುವಲ್ಲಿ ಯಶಸ್ವಿಯಾದ ನಿನ್ನ ನೆನಪುಗಳಿಗೆ ಎಂದೂ ಬೆಲೆ ಕಟ್ಟಲಾಗದು, ನಗುವಿನ ಮೊಗವಾಡ ಹೊತ್ತು ನಿನಗೆ ಶುಭ ಹಾರೈಸುವ ನನ್ನೊಳಗೆ... ನೋವಿನ ಮಡು ತುಂಬಿ ನಿಂತಿದೆ// ಮುರಿದ ಮನದ ಮೂಲೆಯಲ್ಲೂ ನಿನ್ನ ನೆನಪುಗಳದೆ ಮಾರ್ದನಿ... ಮನಸ ಪುಸ್ತಕದ ನಡು ಪುಟದಲ್ಲಿ ಇಟ್ಟು ಮರೆತಿದ್ದ ಬಣ್ಣದ ನವಿಲುಗರಿ ನೀನು, ಒಲವಲ್ಲಿ ನಲಿವಿಲ್ಲ ಬರಿದೆ ನೋವಿನ ಸುಳಿಯೆ ಈ ಮಡುವಲ್ಲಿ ತುಂಬಿದೆಯಲ್ಲ! ಆದೇನೆ ಇದ್ದರೂ.... ಮಳ್ಳ ಮನಸಿಗೆ ಇದರಿಂದ ಪಾರಾಗುವ ಇರಾದೆಯೆ ಇಲ್ಲ?!/ ಗತ್ತಿನಿಂದ ಹೇಳುವ ನನ್ನ ನೆನಪುಗಳಲ್ಲೆಲ್ಲ ನೀನೆ ಬಹುಪಾಲು ಆವರಿಸಿರುತ್ತೀಯಲ್ಲ.... ಇದೆಂಥಾ ವಿಸ್ಮಯ, ಕಣ್ಣು ಕದ್ದು ಕಾಣುವ ಕನಸುಗಳಿಗೆ ಸುಂಕವಿಲ್ಲ ಒಂದು ವೇಳೆ ಇದ್ದಿದ್ದರೆ.... ನಾನಿವತ್ತು ಪೂರ್ತಿ ದಿವಾಳಿಯಾಗಿರುತ್ತಿದ್ದೆ// ಕೆಲವನ್ನು ಹೇಳದೆ ಕೆಲವನ್ನ ಕೇಳದೆ ಅರಿತುಕೊಳ್ಳ ಬೇಕಿತ್ತು ನೀನು ನಾನಿನ್ನನರಿತಂತೆ.... ಸಂಜೆ ಅಚಾನಕ್ಕಾಗಿ ಕವಿಯುವ ಮೋಡ ಹನಿಯಾಗಿ ಧರೆಯ ಸೋಕುವಾಗ ಮನಕ್ಕೀಯುವ ಮುದ ವರ್ಣನೆಗೆ ಹೊರತು, ಕಳೆದ ಕೆಲವು ಕ್ಷಣಗಳ ಕದದ ಮರೆಯಲ್ಲಿ ಕುತೂಹಲದ ಕಳ್ಳ ಕಣ್ಣುಗಳು ಕಾಯುತ್ತಿರುವುದು ನಿನ್ನನ್ನೆ/ ಕರೆಯದೆ ಬರುತ್ತಿದ್ದ ನೀನು ನಿನ್ನ ನೆನಪಿನಲ್ಲೂ ಪೂರಾ ಹಾಗೆಯೆ ಹೋಲುತ್ತೀಯ.... ನೆನಪುಗಳೂ ಹೇಳದೆ ಕೇಳದೆ ದಾಳಿಯಿಡುತ್ತಿವೆಯಲ್ಲ !, ಕಣ್ಣಾಡಿಸುತ್ತಾ ಕಾದಿರುವ ಹಾದಿಯಲ್ಲಿ ನಿನ್ನ ಹಳೆಯ ಹೆಜ್ಜೆಗುರುತುಗಳು ಮಾಸುವ ಮುನ್ನ.... ಹೊಸತನ್ನ ಮತ್ತೆ ಮೂಡಿಸಲು ನೀ ಬಂದರೆ ನನಗಷ್ಟೇ ಸಾಕು.// ನೀರಲ್ಲಿ ಕರಗದ ಗಾಳಿ ಅಪಹರಿಸಲಾಗದ ಬಾನಲ್ಲಿ ಲೀನವಾಗದ ನನ್ನ ಒಲವಿಗೆ.... ಅಪ್ಪಟ ಮಣ್ಣಿನ ವಾಸನೆಯಿದೆ, ಇದೆಂದೂ ಮುಗಿಯದ ಕಥೆ ನಿನ್ನ ನೆನಪು ಮಾಸುವ ಇರಾದೆ ಇಟ್ಟುಕೊಂಡಂತಿಲ್ಲ.... ನನ್ನದು ನಿರಂತರ ವ್ಯಥೆ/ ಕಳೆದು ಕೊಂಡ ನಷ್ಟ ನನಗೋ? ಪಡೆಯದೆ ಹೋದ ಪಾಪಿ ನೀನೋ.... ಒಂದಂತೂ ನಿಜ ಎಲ್ಲೋ ಎನೋ ತಾಳತಪ್ಪಿದೆ, ಸುರಿವ ಹನಿಮಳೆಯೂ ಇಷ್ಟೊಂದು ಭೀಕರ ಶೀತಲ ಅನುಭವ ತರುವಾಗ... ನಿನ್ನ ಬೆಚ್ಛನೆ ಅಪ್ಪುಗೆಯಿಲ್ಲದ ಮುಂದಿನ ದೀರ್ಘ ಬಾಳು ದುರ್ಭರವೆನ್ನಿಸುತ್ತದೆ?!//

Wednesday, November 7, 2012

ಬಾಣ ಹೋಯ್ತು, ಪಿಸ್ತೂಲ್ ಬಂತು ಡುಂ ಡುಂ ಡುಂ....!


" ಕೇಡುಗಾಲಕ್ಕೆ ಕುದುರೆ ಮೊಟ್ಟೆಯಿಟ್ಟಿತಂತೆ!" ಹಾಗಂತ ಅನ್ನಿಸಿದ್ದು "ಕನ್ನಡ"ದ ಹಡಾಲೆದ್ದು ಹೋದ "ಪ್ರಭೆ"ಯೊಂದರ, ಅಮಾಯಕರನ್ನು ಪತ್ರಿಕೋದ್ಯಮದ ಹೆಸರಿನಲ್ಲಿ ಹೆದರಿಸಿ ದೋಚಿ ಸಂಪಾದಿಸುವ ದಗಲ್ಬಾಜಿ "ಸಂಪಾದಕ"ನ ಸಾಮಾಜಿಕ ತಾಣಗಳಲ್ಲಿನ ಚಿಲ್ಲರೆ ಶೋಕಿಯನ್ನ ನೋಡುವಾಗ ನಗು ಒತ್ತರಿಸಿಕೊಂಡು ಬರುತ್ತಿದೆ. "ನೋಡಿ ನನ್ನ ರಿವಾಲ್ವರ್!" ಎಂದು ದೀಪಾವಳಿ ಪಿಸ್ತೂಲಿನಂತದೊಂದರ ಫೋಟೋ ಹಾಕಿಕೊಂಡು "ಹೆಂಗೆ" ಅನ್ನುವಂತೆ ಹಣಮಂತನ ಮೂತಿ ಮಾಡಿಕೊಂಡು ನಿಂತ ಇವರು ತನ್ನಲ್ಲಿ "ಬಾಣ" ಇಲ್ಲದಿದ್ದರೂ "ಬಿಲ್ವಿದ್ಯೆ"ಯಲ್ಲಿ ಅತಿ ನಿಪುಣರು! ಈ ಕಾರಣಕ್ಕಾಗಿಯೆ ದಿಗ್ವಿ"ವಿಜಯ"ಯಾತ್ರೆಯನ್ನ ಕರ್ನಾಟಕದಾದ್ಯಂತ ನಡೆಸುತ್ತಿದ್ದ ನಂಬರ್ ಒನ್ ಪತ್ರಿಕೆಯಿಂದ "ಹಚ್ಯಾ" ಅಂತ ಉಗಿದಟ್ಟಿಸಿ ಕೊಂಡಿದ್ದರು. ಇದಕ್ಕೆ ಪೂರಕವಾಗಿ ಅಲ್ಲಿಯೂ "ಸಂಪಾದಕ"(?)ರಾಗಿದ್ದ ಸನ್ಮಾನ್ಯರು ಲಿಂಬೆಹುಳಿಯಂತಹ "ಬೆಡ್ ಮೇಟ್"ನ ಜೊತೆ ಒಟ್ಟೊಟ್ಟಿಗೆ ರಾಜಧಾನಿಯಲ್ಲಿ "ರಾತ್ರಿ ಕಾರ್ಯಾಚರಣೆ"ಗೆ ಇಳೀದಿದ್ದೂ ಅಶ್ಯವಾಗಿ ಸುದ್ದಿಯಾದ್ದರಿಂದ "ಇಂಡಿಯಾ"ದ ದೊಡ್ಡ ಪತ್ರಿಕಾ ಸಮೂಹದವರು ಈ ಚೋರಗುರುವನ್ನ ಇವರ ಇನ್ನೆಲ್ಲ ಚಾಂಡಾಳ ಶಿಷ್ಯಂಡಿರೊಂದಿಗೆ ಸಕಲ ಗೌರವಾದಾರಗಳೊಂದಿಗೆ ಚಾಪೆ ಚೊಂಬು ಕೊಟ್ಟು ಬೀಳ್ಕೊಟ್ಟಿತ್ತು. ಆದರೆ "ಹುಟ್ಟು ಗುಣ ಸುಟ್ಟರೂ ಹೋಗದು" ಎಂಬಂತೆ ಅಂತರ್ಜಾಲ ತಾಣಗಳಲ್ಲಿ ತಮ್ಮ ನಾಲಿಗೆ ತೀಟೆಯನ್ನ ಹಳೆಯ ಅನ್ನದಾತ ಸಂಸ್ಥೆಯ ಮೇಲೆ ವ್ಯಥಾ ವಿಷ ಕಾರುವ ಮೂಲಕ ತೀರಿಸಿಕೊಂಡಿದ್ದರು. ಆಗಲೆ ನಡುವಯಸ್ಸಿನವರಾಗಿದ್ದ ಇವರು "ಅಮೇರಿಕೆಗೆ ಹೋಗುತ್ತೀನಿ" ಅಂತಲೂ, "ಅಲ್ಲಿ ಅದೆನನ್ನೋ ಓದಿ ಗುಡ್ಡೆ ಹಾಕುತ್ತೀನಿ" ಬಹಿರಂಗವಾಗಿ ಊಳಿಟ್ಟರಾದರೂ ಇವರ ಅಸಲಿಯತ್ತನ್ನ ಬಲ್ಲ ಬಲ್ಲಿದರು "ಬಹುಶಃ ರಾತ್ರಿ 'ಕೇಳ್ರಪ್ಪೋ ಕೇಳಿ' ನಡೆಸುವಾಗ ಹೇಗೆ ಸಿಕ್ಕಿಬೀಳದೆ ಬಚಾವಾಗೋದು?" ತರದ ಯಾವುದೊ "ಅಲ್ಪ" ಅವಧಿಯ ಕೋರ್ಸನ್ನ ಅಲ್ಲಿ ಅವರು ಮಾಡಿ "ಪದವಿಧರ"ರಾಗಬಹುದು ಅಂದುಕೊಂಡು ತುಟಿ ಅಂಚಿನಲ್ಲಿಯೆ ವ್ಯಂಗ್ಯದ ನಗೆ ನಕ್ಕು ಸುಮ್ಮನಾದರು.ಆದರೆ ಅಮೇರಿಕೆಯಿರಲಿ ಪಕ್ಕದ ಅಮ್ಮಸಂದ್ರಕ್ಕೂ ವಲಸೆ ಹೋಗದ ಇಲ್ಲದ "ಬಾಣ ಭಟ್ಟ"ರು ಕರುನಾಡ ಕಂಡಕಂಡ ಪತ್ರಿಕಾ ಸಮೂಹಗಳ ಬಾಗಿಲು ತಟ್ಟಿದರೂ ೈವರ "ಸಂಪಾದಕ" ನೈಪುಣ್ಯದ ಅರಿವಿದ್ದ ಎಲ್ಲರೂ ರಾಗವಾಗಿ "ಮುಂದೋಗಪ್ಪಾ....!" ಅಂತ ಸಾಗ ಹಾಕಿ ತೊಲಗಿತು ಶನಿ ಅಂತ ನಿಟ್ಟುಸಿರು ಬಿಟ್ಟರು. ಆದರೆ "ಕನ್ನಡ" ಪತ್ರಿಕೋದ್ಯಮದಲ್ಲಿ ತನ್ನ "ಪ್ರಭಾ"ವವನ್ನ ದಟ್ಟವಾಗಿ ಬೀರಲೆ ಬೇಕೆಂದು ಪಣ ತೊಟ್ಟಿದ್ದ ಈ ತೊಟ್ಟಿ ಗ್ಯಾಂಗ್ ಗಣಿ ಕಳ್ಳ ರೆಡ್ಡಿಯಿಟ್ಟ ಸ"ಗಣಿ" ತಿಂದು ತನ್ನ ಪತ್ರಿಕೆಯನ್ನ ಬಿಕರಿಗಿಟ್ಟು ಆಗಷ್ಟೆ ಹೊಸ ಗಿರಾಕಿಯನ್ನ ಹುಡುಕಿಕೊಂಡಿದ್ದ ಮನೋಜ ಮಾರ್ವಾಡಿಯೊಬ್ಬನಿಗೆ ಒಂದು ಕೋಟಿಯ ಕಕ್ಕ ತಿನ್ನಿಸಿ ಅಲ್ಲಿಗೆ ಪುನಃ "ಮೈತುಂಬ"(?!) ಸಂಪಾದಿಸಲು ತನ್ನ ಶನಿ ಶಿಷ್ಯಂದಿರೊಂದಿಗೆ ಅಮರಿಕೊಂಡು ಬಿಟ್ಟರು. ಅಲ್ಲಿಯವರೆಗೂ ಕೇಳಿದವರಿಗಿರಲಿ ಕೇಳದವರಿಗೂ ಕರೆಕರೆದು ಕರಕರೆಯಾಗುವ ಹಾಗೆ ಅಮೇರಿಕೆಯ ಕಥೆ ಹೇಳುತ್ತಿದ್ದ ಅಮ್ಮಸಂದ್ರದ ಈ ಅರ್ಜೆಂಟ್ ಗಿರಾಕಿ ಅಲ್ಲಿಗೆ ಬಂದದ್ದೆ ತಡ ಅಲ್ಲಿವರೆಗೂ ಆ ಪತ್ರಿಕೆಗೊಂದು ಕಳೆತಂದು ಕೊಟ್ಟಿದ್ದ ಉತ್ಸಾಹಿ ಸಂಪಾದಕರು "ಶಿವಾ" ಅಂತ ಇವನೊಂದಿಗೆ ಏಗಲಾರೆ ಅಂತ ಇವನ ಮುಖಕ್ಕೆ ರಾಜಿನಾಮೆ ರಾಚಿ ಧೀಮಂತಿಕೆಯಿಂದ ಎದ್ದು ಹೊರ ಬಂದರು. ಹೀಗೆ ಮೊದಲ ದಿನವೆ ಕ್ಯಾಕರಿಸಿ ಉಗಿಸಿ ಕೊಂಡರೂ ಅಭ್ಯಾಸ ಬಲದಿಂದ ಅದನ್ನ ಒರೆಸಿಕೊಂಡ ಈ "ಜಾಣ ಭಟ್ಟ"ರು ಮತ್ತೆ ಮೊದಲಿನ ಜೋಷಿನಿಂದಲೆ "ಎನೇನೆಲ್ಲ ಮಾಡ್ತೀವಿ ನೋಡ್ತಿರಿ!" ಅಂತ ಅಕ್ರಮ "ಸಂಪಾದನೆ"ಯ ಎರಡನೆ ಸುತ್ತಿನ ಕಾರ್ಯಾಚರಣೆಗೆ ಇಳಿದರು. ಈ ಸಾರಿ "ಇಪ್ಪತ್ನಾಲ್ಕು ಕ್ಯಾರೆಟ್" ರೋಲ್ಡ್'ಗೋಲ್ಡ್ ವಾರ್ತಾವಾಹಿನಿಯೊಂದು ಇವರ ಹಿಡಿತಕ್ಕೆ ಬಂದಿದ್ದರಿಂದ "ನಿತ್ಯ" "ಋಷಿ" ಮೂಲ ಹುಡುಕಿ ತಮ್ಮ ಅಕ್ರಮ ಗಳಿಕೆಯನ್ನ ಈ ಥರ್ಡ್'ರೇಟ್ ಸಂಪಾದಕ ದಿನ ದಿನಕ್ಕೂ ವೃದ್ಧಿಸಿಕೊಳ್ಳ ತೊಡಗಿದ. ತನ್ನ "ನೂರೆಂಟು ಗೂಟ"ಗಳನ್ನ ಹಲುಬಲು ಪತ್ರಿಕೆ, ಈ ಗೂಟದ ಸುಖದ ವ್ಯವಸ್ಥೆಗೆ ಛಾನಲ್! ಅಂದಿನಿಂದ "ಬಾಣ" ಬಿಟ್ಟಲ್ಲೆಲ್ಲ ಭಟ್ಟನ ಲಾಭದ ಒಸರು ಉಕ್ಕುಕ್ಕಿ ಹರಿಯುತ್ತಿದೆ. ಈ ನಡುವೆ "ದುಬಾರಿ ಕಾರು ಕೊಂಡೆ" ಅಂತ ಬೀಗಿದ ಇವ ವಾಸ್ತವವಾಗಿ ಅದನ್ನ ಕೋಟಾ ಜ್ಯೋತಿಷಿಯೊಬ್ಬನಿಂದ ನಯಾಪೈಸೆಯ ಖರ್ಚಿಲ್ಲದೆ ಕಿತ್ತು"ಕೊಂಡಿದ್ದ" ಅನ್ನೋದು ಎಲ್ಲರಿಗೂ ಗೊತ್ತಿತ್ತು. ತನ್ನ ಹೀನಚಾಳಿಗಳನ್ನ ಎಲ್ಲರಂತೆ ತಾವೂ ಹೇಳಿಕೊಂಡು ಕ್ಯಾಕರಿಸಿದರು ಎನ್ನುವ ಏಕೈಕ ಕಾರಣಕ್ಕಾಗಿ ಇನ್ನೊಂದು "ಪಟ್ಟಣ"ದಲ್ಲಿ ಶೆಟ್ಟರಾಗಿದ್ದ ತನ್ನ ವಿದ್ಯಾಗುರುಗಳನ್ನ ವ್ಯಥಾ ತನ್ನ "ನೂರೆಂಟು ಗೂಟ"ದಲ್ಲಿ ಅನ್ಗತ್ಯವಾಗಿ ಹೀನಾಯ ತಿವಿದು ನನ್ನ ಸುದ್ದಿಗೆ ಬಂದವರಿಗೆ ಇದೇ ಗತಿ ಎನ್ನುವ ಬಹಿರಂಗ ಬೆದರಿಕೆಯೊಡ್ಡಿದ. ಇಂತಹ ಪೊಳ್ಳೂ ಬೆದರಿಕೆಗಳಿಗೆ ನಯಾಪೈಸದ ಬೆಲೆ ಕೊಡದ ಪ್ರಜ್ಞಾವಂತರು "ಅದೇನು ಕಿತ್ಕೋಳ್ತೀಯೋ ಕಿತ್ಕೋ ಹೋಗೋಲೇಯ್" ಅಂತ ಇವನ ಊಳನ್ನ ಎಡಗಾಲಲ್ಲಿ ಒದ್ದರು. ಹಿಂಗಿರೊ ಈ ಕಮಂಗಿ ಮೊನ್ನೆಮೊನ್ನೆ "ಜ್ಞಾನಜ್ಯೋತಿ" ಸಭಾಂಗಣದಲ್ಲಿ ಬಸ್ಸುಗಟ್ಟಲೆ ಮಂದಿಯನ್ನ ವಿಶ್ವವಿದ್ಯಾಲಯದ ಹಾಸ್ಟೆಲ್'ಗಳಿಂದ ತುಂಬಿಕೊಂಡು ಬಂದ ಪಾರ್ಟ್'ಟೈಮ್ ರಾಜಕಾರಣಿ ಹಾಗೂ ಫುಲ್'ಟೈಮ್ ವಿಶ್ವವಿದ್ಯಾಲಯದ ಅಧಿಕಾರಿ ಚುನಾವಣೆಯಲ್ಲಿ ಡೆಪಾಜಿಟ್ ಜಪ್ತಾಗಿದ್ದ "ಮೈಲಾರಿ"ಯ ಜೊತೆ ಸೇರಿ ಮಾಡಿದ ಗಾಂಧಿ ಕುರಿತ ಕಾರ್ಯಕ್ರಮದ ಬಹಿರಂಗ ಶ್ರಾದ್ಧದ ಪ್ರತ್ಯಕ್ಷದರ್ಶಿಗಳಾಗಿದ್ದ ಹಿರಿಯ ಗಾಂಧಿವಾದಿಗಳೊಬ್ಬರು "ಗಾಂಧಿ ಕಾರ್ಯಕ್ರಮದ ವೇದಿಕೆಯಲ್ಲಿ ಈ ಗೂಂಡಾಗಳಿಗೇನು ಕೆಲಸ?" ಅಂತ ವಿಷಾದದಿಂದ ಲೊಚಗುಟ್ಟಿದರು. ಅಲ್ಲಿನ ವೇದಿಕೆಯಲ್ಲಿ "ನಾನು ಹದಿನೈದು ವರ್ಷದ ಹಿಂದೆ ಇಂಗ್ಲೆಂಡಿಗೆ ಹೋಗಿದ್ದಾಗ ಕನ್ನಡದಲ್ಲಿ ಈ ಮೈಲ್ ಹೊಂದಿದ ಮೊದಲ ಪತರಕರ್ತ ನಾನೆ!" ಅಂತ ತನ್ನ ಎಂದಿನ ಸ್ವಕುಚ ಮರ್ದನದ ಶೈಲಿಯಲ್ಲಿ ಈ ಕಪಿ ಆತ್ಮರತಿಗಿಳಿದಿದ್ದರೆ, ಮೈಲಾರಿಯ ಹಿಂ'ಬಾಲಕ"ರು ತಮ್ಮ ಕೊರಮ ಗುರುವಿನ ಹೆಸರು ಮೈಕಿನಲ್ಲಿ ಮೊಳಗಿದಾಗಲೆಲ್ಲ ಕೂಗಿ-ಕಿರುಚಿ, ಸಿಳ್ಳೆ ಹೊಡೆದು ಯಶಸ್ವಿಯಾಗಿ ಕಾರ್ಯಕ್ರಮದ ಆಶಯವನ್ನ ಹಳ್ಳ ಹಿಡಿಸಿಯೆಬಿಟ್ಟರು. ನಿಜವಾಗಿಯೂ ಕಾರ್ಯಕ್ರಮದ ಕುರಿತ ಆಸಕ್ತಿ ಹೊತ್ತು ಹೋದವರಿಗೆ ಅಂದು ಗತಿಯಾದದ್ದು ಕೇವಲ ನಿಟ್ಟುಸಿರು!. ಹಾಗೆ ನೋಡಿದರೆ ತನ್ನ ಪೂರ್ವಾಶ್ರಮದ ಪತ್ರಿಕೆಯಲ್ಲಿ "ಮೈಲಾರಿ"ಯ ಮಗ್ಗುಲು ಮುರಿಯುತ್ತಿದ್ದ ಈ ಬಾಣಭಟ್ಟ ಈಗ ಅದೆ ಮೈಲಾರಿಯನ್ನ ಅಪ್ಪಿ ಮುದ್ದಾಡುವಲ್ಲಿ ಕೈ ಬದಲಾಗಿರುವ ಮೈಲಿಗೆಯಾಗಿರುವ ಹಡಬೆ ಕಾಂಚಣದ ಝಣಝಣದ ಹಿರಿದಾದ ಪಾತ್ರ ಇರೋದು ಬಹಿರಂಗ ಗುಟ್ಟು. ಅದೆ ಕಾರ್ಯಕ್ರಮದಲ್ಲಿ ವಿಶ್ವವಿದ್ಯಾಲಯದ ಪ್ರಭಾರ ಕುಲಪತಿಗಳೆ ಹಾಜರಿದ್ದರೂ ಕುಲ ಸಚಿವರಿಗೆ ಮೊದಲ ಮಣೆ ಹಾಕಿದ ಅಪಸವ್ಯಗಳನ್ನೂ ಭಟ್ಟಂಗಿ ಬಾಣಭಟ್ಟ ನಡೆಸಿ ಧನ್ಯನಾದ. ಎಷ್ಟೆಂದರೂ ಬಾಚಿ ತಿಂದ ಕೊಳಕು ಕಾಸಿನ ಋಣ!. ಇವೆಲ್ಲವನ್ನೂ ಕಡೆಪಕ್ಷ ಇಷ್ಟು ದಿನ ತೆರೆಮರೆಯಲ್ಲಿ ಮಾಡಿ ಸಿಗ ಬೀಳುತ್ತಿದ್ದ ಈ "ಸಂಪಾದಕ" ಕೈಪಾರ್ಟಿಯ 'ವಿಗ್'ನೇಶ್ವರ ವಿದೇಶಾಂಗ ಖಾತೆಯಿಂದ ಮರಳಿ ಮಂಡ್ಯದ ಮಣ್ಣಿಗೆ ಮೊನ್ನೆಮೊನ್ನೆಯಷ್ಟೆ ಬಂದಾಗ "ಇನ್ನು ನನ್ನ ಪುಕ್ಸಟ್ಟೆ ವಿಮಾನದಲ್ಲಿ ಫಾರಿನ್ ಸುತ್ಸವ್ರ್ ಯಾರು?" ಅಂತ ಬಹಿರಂಗವಾಗಿ ರೋಧಿಸಿ ಎಲ್ಲರ ನಗೆಪಾಟಲಿಗೆ ಈಡಾದ. ಈ ಹಿಂದೆ "ಫಾರಿನ್ ಕೃಷ್ಣ" ಮಾಡಿಸಿದ್ದ ಬಿಟ್ಟಿ ಟ್ರಿಪ್ಪಿಗೆ ಮುಂದಿನ ದಿನಗಳಲ್ಲಿ "ಪ್ರ್ಭಭಾ"ವಶಾಲಿ ಭೋಪರಾಕನ್ನ ಕನ್ನಡದ ಕಣ್ಮಣಿಗಳು ಇನ್ನು ಮುಂದೆ ನಿರೀಕ್ಷಿಸಬಹುದು. ಜೊತೆಗೆ ಇಲ್ಲದ ಬಾಣದ ಜಾಗದಲ್ಲಿ ಹೊಸತಾಗಿ ಕೊಂಡುಕೊಂಡ "ದೀಪಾವಳಿ ಪಿಸ್ತೂಲು" ಬೇರೆ! ಈ ಖದೀಮರನ್ನ ಕ್ಯಾಕರಿಸಿ ದೂರವಿರಿಸಲು ಕನ್ನಡಿಗರಿಗೆ ಹೊಸತೊಂದು ಕಾರಣ ಸಿಕ್ಕಂತಾಯಿತು.

Friday, November 2, 2012

ಕೊಡಚಾದ್ರಿ





ಕೊಡಚಾದ್ರಿ ಬೆಟ್ಟ ಸಾಲುಗಳು ಕರ್ನಾಟಕ ರಾಜ್ಯದ ಪಶ್ಚಿಮ ಘಟ್ಟಗಳ ಸಾಲಿನಲ್ಲಿ ಶಿವಮೊಗ್ಗ ಜಿಲ್ಲೆಯಲ್ಲಿ ಇವೆ. ಇದರಲ್ಲಿ ಕೊಡಚಾದ್ರಿ ಬೆಟ್ಟದ ಎತ್ತರ ಸಮುದ್ರ ಮಟ್ಟದಿಂದ ಸುಮಾರು ೧೩೪೩ ಮೀ. ಕೊಡಚಾದ್ರಿ ಬೆಟ್ಟವು ಪ್ರಸಿದ್ದ ಯಾತ್ರಾ ಸ್ಥಳವಾದ ಕೊಲ್ಲೂರುಮೂಕಾಂಬಿಕ ದೇವಸ್ಥಾನದ ಹಿನ್ನೆಲೆಯಲ್ಲಿ ಇದ್ದು ಪ್ರಕೃತಿ ಪ್ರಿಯರಿಗೆ ಹಾಗು ಚಾರಣಿಗರಿಗೆ ಹೇಳಿ ಮಾಡಿಸಿದ ಜಾಗ. ಕೊಡಚಾದ್ರಿ ಬೆಟ್ಟ ಸಾಲುಗಳು ಮೂಕಾಂಬಿಕ ವನ್ಯ ಜೀವಿ ಅಭಯಾರಣ್ಯದ ವ್ಯಾಪ್ತಿಯಲ್ಲಿ ಬರುತ್ತದೆ. ಕೊಡಚಾದ್ರಿ ಬೆಟ್ಟದ ಮೇಲೆ ಸರ್ವಜ್ಞ ಪೀಠವೆಂಬ ಒಂದು ಸಣ್ಣ ದೇವಾಲಯವಿದೆ. ಈ ಜಾಗದಲ್ಲಿ ಭಗವಾನ್ ಶ್ರೀ ಶಂಕರಾಚಾರ್ಯರು ತಪಸ್ಸು ಮಾಡಿದ್ದರು ಎಂದು ಪ್ರತೀತಿ. ಸರ್ವಜ್ಞ ಪೀಠಕ್ಕಿಂತ ೨ ಕಿ.ಮೀ ಮೊದಲು ಮೂಲ ಮೂಕಾಂಬಿಕ ದೇವಸ್ಥಾನವಿದೆ. ಸರ್ವಜ್ಞ ಪೀಠದಿಂದ ಮುಂದಕ್ಕೆ ಕಡಿದಾದ ಬೆಟ್ಟವನ್ನು ಇಳಿದರೆ ಚಿತ್ರಮೂಲ ಎಂಬ ಸ್ಥಳ ತಲುಪಬಹುದು. ಇದು ಸೌಪರ್ಣಿಕ ನದಿಯ ಉಗಮ ಸ್ಥಾನ. ಈ ಜಾಗವು ಹಲವಾರು ಜಾತಿಯ ಸಸ್ಯಗಳಿಗೆ ಹೆಸರುವಾಸಿಯಾಗಿದೆ. ಕೊಡಚಾದ್ರಿ ಬೆಟ್ಟವು ದಟ್ಟವಾದ ಅರಣ್ಯ ಹಾಗು ಶೋಲ ಕಾಡುಗಳಿಂದ ಆವೃತವಾಗಿದೆ.ಇಪ್ಪತ್ತನೆಯ ಶತಮಾನದಲ್ಲಿ ಪಶ್ಚಿಮ ಘಟ್ಟಗಳಲ್ಲಿ ವ್ಯಾಪಕವಾಗಿ ಸುತ್ತಾಡಿದ ಲೇಖಕ ಮತ್ತು ಪರಿಸರ ಪ್ರೇಮಿ ಡಾ.ಶಿವರಾಮ ಕಾರಂತರು ಒಂದೆಡೆ ಇದನ್ನು ದಾಖಲಿಸಿದ್ದಾರೆ. ಸಹ್ಯಾದ್ರಿಯ ಈ ಭಾಗದಲ್ಲಿ ಮೇಲೆದ್ದಿರುವ ಮೂರು ಪರ್ವತ ಶಿಖರಗಳನ್ನು ಕಾಲ್ನಡಿಗೆಯಲ್ಲಿ ಏರಿದ ಡಾ|ಕಾರಂತರ ಪ್ರಕಾರ ಕುದುರೆಮುಖ ಶಿಖರವು ಅತ್ಯಂತ ದೂರದ ಚಾರಣ, ಕುಮಾರ ಪರ್ವತವು ತುಂಬಾ ಕಠಿಣವೆನಿಸುವ ದಾರಿ; ಮತ್ತು ಕೊಡಚಾದ್ರಿಯು ಇವೆಲ್ಲ ಕ್ಕಿಂತಲೂ ಚಂದದ ತಾಣ.


Krupe _ http://kn.wikipedia.org

ಪೋಸ್ಟರ್ - by Hariprasad Holla ( Face book)


ಸುದ್ದಿ - - By Arun Javgal


ಬೆಂಗಳೂರಿನ ವಿಮಾನ ನಿಲ್ದಾಣದಲ್ಲಿ ಕನ್ಮಡ ಪುಸ್ತಕ ಪ್ರಾದಿಕಾರದವರು ಮುಂದಿನ 10 ದಿನಗಳವರೆಗೆ ಕನ್ನಡ ಹೊತ್ತಗೆಯ 

ಅಂಗಡಿಯನ್ನು ಹಾಕಿದ್ದಾರೆ. ನೀವೆನಾದ್ರು ವಿಮಾನ ನಿಲ್ದಾಣಕ್ಕೆ ಹೋದರೆ ಈ ಅಂಗಡಿಯಿಂದ ಕನ್ನಡದ ಹೊತ್ತಿಗೆಯನ್ನು 

ಕೊಳ್ಳುವುದನ್ನು ಮರೆಯದಿರಿ. ಈ ವಿಶಯವನ್ನು ವಿಮಾನ ನಿಲ್ದಾಣಕ್ಕೆ ಹೋಗೊ ನಿಮ್ಮ ಸ್ನೇಹಿತರು/ಸಂಬಂದಿಕರಿಗೂ ತಿಳಿಸಿ.

ಸುದ್ದಿ - 

ಡಾ ಎಚ್ ಎಸ್ ವೆಂಕಟೇಶ ಮೂರ್ತಿ (೨೩.೦೬.೧೯೪೪-೩೦.೦೫.೨೦೨೫) - ಒಂದು ನೆನಪು - ಸಿ ಬಿ ಶೈಲಾ ಜಯಕುಮಾರ್. ಚಿತ್ರದುರ್ಗ.

  "ಪ್ರೀತಿ ಕೊಟ್ಟ ರಾಧೆಗೆ...ಮಾತು ಕೊಟ್ಟ ಮಾಧವ..." "ಅಮ್ಮ ನಾನು ದೇವರಾಣೆ ಬೆಣ್ಣೆ ಕದ್ದಿಲ್ಲಮ್ಮ..." "ಲೋಕದ ಕಣ್ಣಿಗೆ ರಾಧೆಯೂ ಕೂಡ ......