Friday, December 9, 2011

ಅಖಿಲ ಭಾರತ ಕನ್ನಡ ಸಾಹಿತ್ಯ ಸಮ್ಮೇಳನ - ಸಮ್ಮೇಳನಾಧ್ಯಕ್ಷರುಗಳ ಪಟ್ಟಿ


ಕ್ರ.ಸಂ.
ಸಮ್ಮೇಳನದ ಸ್ಥಳ
ನಡೆದ ವರ್ಷ
ಸಮ್ಮೇಳನಾಧ್ಯಕ್ಷರು
1
ಬೆಂಗಳೂರು
1915
ಎಚ್.ವಿ.ನಂಜುಂಡಯ್ಯ
2
ಬೆಂಗಳೂರು
1916
ಎಚ್.ವಿ.ನಂಜುಂಡಯ್ಯ
3
ಮೈಸೂರು
1917
ಎಚ್.ವಿ.ನಂಜುಂಡಯ್ಯ
4
ಧಾರವಾಡ
1918
ಆರ್. ನರಸಿಂಹಾಚಾರ್
5
ಹಾಸನ
1919
ಕರ್ಪೂರ ಶ್ರೀನಿವಾಸರಾವ್
6
ಹೊಸಪೇಟೆ
1920
ರೊದ್ದ ಶ್ರೀನಿವಾಸರಾವ್
7
ಚಿಕ್ಕಮಗಳೂರು
1921
ಕೆ.ಪಿ.ಪಟ್ಟಣಶೆಟ್ಟಿ
8
ದಾವಣಗೆರೆ
1922
ಎಂ.ವೆಂಕಟಕೃಷ್ಣಯ್ಯ
9
ಬಿಜಾಪುರ
1923
ಸಿದ್ದಾಂತಿ ಶಿವಶಂಕರಶಾಸ್ತ್ರಿ
10
ಕೋಲಾರ
1924
ಹೊಸಕೋಟೆ ಕೃಷ್ಣಶಾಸ್ತ್ರೀ
11
ಬೆಳಗಾವಿ
1925
ಬೆನಗಲ್ ರಾಮರಾವ್
12
ಬಳ್ಳಾರಿ
1926
ಫ.ಗು.ಹಳಿಕಟ್ಟಿ
13
ಮಂಗಳೂರು
1927
ಆರ್. ತಾತಾ
14
ಗುಲ್ಬರ್ಗಾ
1928
ಬಿ.ಎಂ.ಶ್ರೀಕಂಠಯ್ಯ
15
ಬೆಳಗಾವಿ
1929
ಮಾಸ್ತಿ ವೆಂಕಟೇಶ ಅಯ್ಯಂಗಾರ್
16
ಮೈಸೂರು
1930
ಆಲೂರು ವೆಂಕಟರಾವ್
17
ಕಾರವಾರ
1931
ಮಳಲಿ ತಿಮ್ಮಪ್ಪಯ್ಯ
18
ಮಡಿಕೇರಿ
1932
ಡಿ.ವಿ.ಗುಂಡಪ್ಪ
19
ಹುಬ್ಬಳ್ಳಿ
1933
ವೈ.ನಾಗೇಶಶಾಸ್ತ್ರೀ
20
ರಾಯಚೂರು
1934
ಪಂಜೆ ಮಂಗೇಶರಾಯ
21
ಮುಂಬಯಿ
1935
ಎನ್.ಎಸ್.ಸುಬ್ಬರಾವ್
22
ಜಮಖಂಡಿ
1937
ಬೆಳ್ಳಾವೆ ವೆಂಕಟನಾರಣಪ್ಪ
23
ಬಳ್ಳಾರಿ
1938
ರಂ.ರಾ.ದಿವಾಕರ್
24
ಬೆಳಗಾವಿ
1939
ಮುದವೀಡು ಕೃಷ್ಣರಾವ್
25
ಧಾರವಾಡ
1940
ವೈ.ಚಂದ್ರಶೇಖರ ಶಾಸ್ತ್ರೀ
26
ಹೈದ್ರಾಬಾದ್
1941
ಎ.ಆರ್. ಕೃಷ್ಣಶಾಸ್ತ್ರೀ
27
ಶಿವಮೊಗ್ಗ
1943
ದ.ರಾ.ಬೇಂದ್ರೆ
28
ರಬಕವಿ
1944
ಎಸ್.ಎಸ್. ಬಸವನಾಳ
29
ಮದರಾಸು
1945
ಟಿ.ಪಿ.ಕೈಲಾಸಂ
30
ಹರಪನಹಳ್ಳಿ
1947
ಸಿ.ಕೆ. ವೆಂಕಟರಾಮಯ್ಯ
31
ಕಾಸರಗೋಡು
1948
ತಿರುಮಲೆ ತಾತಾಚಾರ್ಯ ಶರ್ಮಾ
32
ಗುಲ್ಬರ್ಗಾ
1949
ಉತ್ತಂಗಿ ಚೆನ್ನಪ್ಪ
33
ಸೊಲ್ಲಾಪುರ
1950
ಎಂ.ಆರ್.ಶ್ರೀನಿವಾಸಮೂರ್ತಿ
34
ಮುಂಬಯಿ
1951
ಎಂ.ಗೋವಿಂದಪೈ
35
ಬೇಲೂರು
1952
ಎಸ್.ಸಿ.ನಂದಿಮಠ
36
ಕುಮಟ
1954
ವಿ.ಸೀತಾರಾಮಯ್ಯ
37
ಮೈಸೂರು
1955
ಶಿವರಾಮಕಾರಂತ್
38
ರಾಯಚೂರು
1955
ಆದ್ಯರಂಗಾಚಾರ್ಯ
39
ಧಾರವಾಡ
1957
ಕೆ.ವಿ.ಪುಟ್ಟಪ್ಪ
40
ಬಳ್ಳಾರಿ
1958
ವಿ.ಕೃ.ಗೋಕಾಕ್
41
ಬೀದರ್
1960
ಡಿ.ಎಲ್.ನರಸಿಂಹಾಚಾರ್
42
ಮಣಿಪಾಲ
1960
ಅ.ನ.ಕೃಷ್ಣರಾವ್
43
ಗದಗ
1961
ಕೆ.ಜಿ.ಕುಂದಣಗಾರ
44
ಸಿದ್ಧಗಂಗಾ
1963
ರಂ.ಶ್ರೀ.ಮುಗಳಿ
45
ಕಾರವಾರ
1965
ಕಡೆಂಗೋಡ್ಲು ಶಂಕರಭಟ್ಟ
46
ಶ್ರವಣಬೆಳಗೊಳ
1967
ಅ.ನೇ.ಉಪಾಧ್ಯೆ
47
ಬೆಂಗಳೂರು
1970
ದೇ.ಜವರೇಗೌಡ
48
ಮಂಡ್ಯ
1974
ಜಯದೇವಿ ತಾಯಿ ಲಿಗಾಡೆ
49
ಶಿವಮೊಗ್ಗ
1976
ಎಸ್.ವಿ.ರಂಗಣ್ಣ
50
ನವದೆಹಲಿ
1978
ಜಿ.ಪಿ.ರಾಜರತ್ನಂ
51
ಧರ್ಮಸ್ಥಳ
1979
ಎಂ.ಗೋಪಾಲಕೃಷ್ಣ ಅಡಿಗ
52
ಬೆಳಗಾವಿ
1980
ಬಸವರಾಜ ಕಟ್ಟಿಮನೀ
53
ಚಿಕ್ಕಮಗಳೂರು
1981
ಪು.ತಿ.ನರಸಿಂಹಾಚಾರ್
54
ಮಡಿಕೇರಿ
1981
ಶಂಬಾ ಜೋಶಿ
55
ಶಿರಸಿ
1982
ಗೊರೂರು ರಾಮಸ್ವಾಮಿ ಅಯ್ಯಂಗಾರ್
56
ಕೈವಾರ
1984
ಎ.ಎನ್. ಮೂರ್ತಿರಾವ್
57
ಬೀದರ್
1985
ಹಾ.ಮಾ.ನಾಯಕ್
58
ಕಲಬುರ್ಗಿ
1987
ಸಿದ್ದಯ್ಯ ಪುರಾಣಿಕ್
59
ಹುಬ್ಬಳ್ಳಿ
1990
ಆರ್.ಸಿ. ಹಿರೇಮಠ್
60
ಮೈಸೂರು
1990
ಕೆ.ಎಸ್. ನರಸಿಂಹಸ್ವಾಮಿ
61
ದಾವಣಗೆರೆ
1992
ಜಿ.ಎಸ್. ಶಿವರುದ್ರಪ್ಪ
62
ಕೊಪ್ಪಳ
1992
ಸಿಂಪಿ ಲಿಂಗಣ್ಣ
63
ಮಂಡ್ಯ
1994
ಚದುರಂಗ
64
ಮುಧೋಳ
1995
ಎಚ್.ಎಲ್. ನಾಗೇಗೌಡ
65
ಹಾಸನ
1996
ಚನ್ನವೀರಕಣವಿ
66
ಮಂಗಳೂರು
1997
ಕಯ್ಯಾರ ಕಿಞಣ್ಣ ರೈ
67
ಕನಕಪುರ
1999
ಡಾ.ಎಸ್.ಎಲ್. ಬೈರಪ್ಪ
68
ಬಾಗಲಕೋಟೆ
2000
ಶಾಂತಾದೇವಿ ಮಾಳವಾಡ
69
ತುಮಕೂರು
2002
ಯು.ಆರ್. ಅನಂತಮೂರ್ತಿ
70
ಬೆಳಗಾವಿ
2003
ಡಾ.ಪಾಟೀಲ ಪುಟ್ಟಪ್ಪ
71
ಮೂಡಬಿದಿರೆ
2004
ಡಾ.ಕಮಲಾ ಹಂಪನಾ
72
ಬೀದರ್
2006
ಶಾಂತರಸ ಹೆಂಬೇರಾಳು
73
ಶಿವಮೊಗ್ಗ
2006
ಪ್ರೊ.ಕೆ.ಎಸ್.ನಿಸಾರ್ ಅಹ್ಮದ್
74
 ಉಡುಪಿ
2007
 ಎಲ್.ಎಸ್.ಶೇಷಗಿರಿರಾವ್
75
ಚಿತ್ರದುರ್ಗ
2009
ಡಾ.ಎಲ್.ಬಸವರಾಜು

76
ಗದಗ
2010
77
ಬೆಂಗಳೂರು
2011
ಪ್ರೊ. ಜಿ. ವೆಂಕಟಸುಬ್ಬಯ್ಯ
78
    ಗಂಗಾವತಿ
2012
                             ಸಿ.ಪಿ.ಕೆ


Sunday, October 23, 2011

'' ಹೊರಗೆ ಹನಿ ಹನಿ ತುಂತುರು ಮಳೆ,..... ''

ಹೊರಗೆ ಹನಿ ಹನಿ ತುಂತುರು ಮಳೆ,ಆಳುವ ಮಂದಿಯ ಕೃಪೆಯಿಂದ ಊರೆಲ್ಲ ಇಳಿಸಂಜೆಯಲ್ಲಿ ನನ್ನಂತೆಯೆ ವಿಷಾದಕ್ಕೆ ಜಾರಿದ ಹಾಗೆ ಕತ್ತಲಲ್ಲಿ ಮುದುಡಿ ಮುಳುಗಿದೆ...ನಿನ್ನ ನೆನಪಿನ ತುಂತುರಲ್ಲಿ ಒಳಗೂ-ಹೊರಗೂ ನೆನೆಯುತ್ತ ಈ ಕತ್ತಲ ಹಾದಿಯನ್ನ ಸವೆಸುತಿದ್ದೇನೆ.ನಿನ್ನನ್ನೆ ಕ್ಷಣಕ್ಷಣಕ್ಕೂ ಮೌನದಲ್ಲೇ ಜಪಿಸುತ್ತಿದ್ದೇನೆ.ಎಷ್ತೋದು ಒಂಟಿಯಾದೆನಲ್ಲ ನಾನು,ಹೋಗಹೋಗ್ತಾ, ನೀನು ಹಾಗೆಯೆ ಹೋಗಲಿಲ್ಲ ;ನನ್ನ ನೆಮ್ಮದಿ,ಖುಷಿ,ಗೆಲುವನ್ನೆಲ್ಲ ಜೊತೆಗೆ ಗಂಟು ಕಟ್ಟಿಕೊಂಡು ದೂರ ಸರಿದೆ.ಮತ್ತೆ ನನ್ನ ಬಾಳಿನ ಬುಟ್ಟಿಯ ತುಂಬಾ ಸಂಕಟದ ಮುಳ್ಳುಗಳನ್ನೆ ಸುರಿದೆ.

ಹುಟ್ಟಿನಿಂದಲೂ ನನಗೇನೆ ದೊಡ್ಡ ಪ್ರಶ್ನೆಯಾಗಿದ್ದ ನನ್ನೊಳಗಿನ ಕೀಳರಿಮೆಯಿಂದ ಕುಗ್ಗಿ ಹೋಗಿದ್ದ ನನಗೂ ಬಾಳಿನ ಸಂಭ್ರಮದ ಅಸಲು ಪರಿಚಯ ಆದದ್ದು ನಿನ್ನಿಂದ.ಕಾರಣವೆ ಇಲ್ಲದ ನಮ್ಮ ಸುತ್ತಾಟಗಳು-ಜಂಟಿ ಪ್ರವಾಸಗಳು-ಕಲಾಕ್ಹೇತ್ರದ ತೀರ್ಥಯಾತ್ರೆಗಳು-ಟೌನ್'ಹಾಲಿನ ಉದ್ದನುದ್ದ ಮೆಟ್ಟಲುಗಳ ಮೇಲೆ ಕೂತು ನಾವು ಹೆಣೆದಿದ್ದ ಕನಸುಗಳ ಜಾತ್ರೆಗಳು-ಇಂಡೋ ಜರ್ಮನ್ ಸಿನಿಮಾ,ಬೆಂಗಳೂರು ಹಬ್ಬ ಅಂತೆಲ್ಲ ನಡೆಸಿದ್ದ ಹುಚ್ಚುಹುಚ್ಚು ಓಡಾಟಗಳು,ಗಾಂಧಿನಗರದ ಸಂದುಗೊಂದುಗಳ ಶ್ರದ್ಧಾಪೂರ್ವಕ ಅನ್ವೇಷಣೆಗಳು...ಓಹ್, ಬಾಳು ಎಷ್ಟೊಂದು ಸೋಗಸಾಗಿತ್ತಲ್ಲ ಆಗೆಲ್ಲ!

ಹೀಗೆ ಅರಿವಿಲ್ಲದೆ ಹೊಸತೊಂದು ಸಂತಸದ ಹಾಡನ್ನ ನಾನು ಹೆಚ್ಚುಹೆಚ್ಚು ಗುನುಗೋಕೆ ಕಾರಣವಾಗಿದ್ದುದು ಕೇವಲ ನೀನು.ನಿನ್ನ ಒಡನಾಟ.ನನ್ನ ಪಾಲಿಗೆ ಆತ್ಮದ ಬಂಧುವೆ ಆಗಿರುವ ನಿನ್ನೊಟ್ಟಿಗೆ ಹಂಚಿಕೊಂಡಿದ್ದ ಬಂಧಕ್ಕೆ ಯಾವುದೊ ಸಂಬಂಧದ ಚೌಕಟ್ಟನ್ನ ತೊಡಿಸಿ 'ಇದಿಷ್ಟೇ' ಅಂತ ವಿವರಿಸೋಕೆ ನನಗಂತೂ ಸಾಧ್ಯವೇ ಇಲ್ಲ.ಬರಡಾಗಿದ್ದ ನನ್ನ ಬಾಳಿನ ಅಂಗಳದಲ್ಲೂ ಸುಗಂಧದ ಹೂಗಳನ್ನರಳಿಸಿದ್ದ ನೀನು ನನ್ನ ಪಾಲಿಗೆ ಆಗಲು ಸಾಧ್ಯವಾದ ಎಲ್ಲವೂ ಆಗಿದ್ದೆ.

ಮೊದಲಿನಿಂದಲೂ ಒಂಟಿತನದಿಂದ ಒಳಗೊಳಗೆ ಮುದುಡಿದ್ದ ನನ್ನ ಮನಸನ್ನೂ ನೀ ಹೊರಜಗತ್ತಿಗೆ ತೆರೆದೆ ನೋಡು.ಎಲ್ಲವೂ ಹೊಸತಾಗಿಯೆ ಕಾನಿಸಿದಂತಾಗಿ.ಅನವಶ್ಯಕವೆಂದೆನಿಸುವ ಮಟ್ಟಿಗಿನ ನಿನ್ನೊಂದಿಗಿನ ಹರಟೆಗಳೂ ಇಷ್ಟವಾಗೊದಕ್ಕೆ ಶುರುವಾಯ್ತು.ಅದಕ್ಕೆ ತಕ್ಕಂತೆ ನನ್ನಷ್ಟೆ ತಿಕ್ಕಲುತಿಕ್ಕಲಾಗಿ ಹೊತ್ತುಗೊತ್ತಿಲ್ಲದೆ ನಾ ಕರೆದಲ್ಲಿಗೆ ನೀನೂ ಸಹ ದೂಸರ ಮಾತಿಲ್ಲದೆ ಹೊರಡುತ್ತಿದ್ದೆ.ಯಾರೂ ಇಲ್ಲ ನನಗಾಗಿ ಅನ್ನುವ ಕತ್ತಲಲ್ಲಿ ನಾನಿದ್ದೀನಿ ಅನ್ನೋ ಬೆಳಕಾಗಿ ನೀ ಗೋಚರಿಸಿದ ಮೇಲೆ ಇನ್ನೇನಿತ್ತು ಹೇಳು? ಆವರೆಗೂ ಶಾಪಗೃಸ್ಥ ಅಶ್ವತ್ಥಾಮನಂತೆ ಮನಸ್ಸು ಪೂರ್ತಿ ತೊನ್ನು ಹಿಡಿಸಿಕೊಂಡ ಅತೃಪ್ತ ಆತ್ಮವಾಗಿ ದಿಕ್ಕುದೆಸೆಯಿಲ್ಲದೆ ಅಲಿಯುತ್ತಿದ್ದ ನಾನು ಅಷ್ಟೂ ವರ್ಷಗಳ ಅಸಲು-ಬಡ್ಡಿ ಸಮೇತ ಮರೀಚಿಕೆಯಾಗಿದ್ದ ಸಣ್ಣಸಣ್ಣ ಖುಷಿಗಳನ್ನೆಲ್ಲ ಬಿಂದಾಸ್ ಲೂಟಿ ಹೊಡೆಯುವ ಉಮೇದಿಗೆ ಏರಿದ್ದೆ.ನನ್ನದೆ ಆದ ಅಹಂಕಾರಗಳು-ನಿನ್ನ ಪುಟ್ಟಪುಟ್ಟ ಈಗೋಗಳು ಇಬ್ಬರಲ್ಲೂ ಸಾವಿರವಿದ್ದರೂ ಅವೆಂದೂ ನಮ್ಮ ಸಾಮಿಪ್ಯಕ್ಕೆ ಅಡ್ಡಿಯಾಗಲಿಲ್ಲ.ಆದರೆ ಒಮ್ಮೆಲೆ ಅದೇನಾಯಿತೊ ನನಗಂತೂ ಒಗಟು .ನಿನ್ನ ಆದ್ಯತೆಗಳು ಬದಲಾದವು ಡಾಲರ್ ಮೋಹವೂ ನಿನ್ನನ್ನ ಅಕಾಲದಲ್ಲಿ ಆವರಿಸಿ ನೀನು ವಿಭಿನ್ನವಾಗಿ ನನಗೆ ಗೋಚರಿಸತೊಡಗಿದ ಮೇಲೆ ಮತ್ತೆ ಮೊದಲಿನ ನಲಿವೆಲ್ಲ ನಿಧಾನವಾಗಿ ಮರೆಸೆರಿದವು.ನೀನು ಅದೆಲ್ಲೊ ಅಮೇರಿಕಾದ ಗಲ್ಲಿಗಳಲ್ಲಿ ಡಾಲರ್'ಹೊಳಪನ್ನ ಕಣ್ಣಲ್ಲಿ ತುಂಬಿಸಿಕೊಳ್ಳುತ್ತಾ ಅದರಲ್ಲೆ ಸಂತಸವ ಹುಡುಕುತ್ತಿದ್ದೀಯ.ನಾನಿನ್ನೂ ನಿನ್ನ ಧಡೀರ್ ಪರಿವರ್ತನೆಯಿಂದ ಇನ್ನೂ ಚೇತರಿಸಿಕೊಳ್ಳಲಾಗದೆ ಇಲ್ಲಿ ನಿನ್ನ ಬಿಂಬವನ್ನೆ ನನ್ನ ಕಂಗಳ ಸ್ಕ್ರೀನ್'ಸೇವರ್ ಮಾಡಿಕೊಂಡು ಅಬ್ಬೇಪಾರಿಯಂತೆ ಅಲಿಯುತ್ತಿದ್ದೇನೆ.ನೀನಗೀಗ ನನ್ನ ಮೇಲೆ ಇರಬೇಕಾದಷ್ಟು ಪ್ರೀತಿ ಇಲ್ಲದಿದ್ದರೂ ಇರಬಾರದಷ್ಟು ಕೋಪ ಮಾತ್ರ ತುಂಬಿದೆ.

ಅದೆಲ್ಲೊ ಅಡಗಿದ್ದ ಮನಸ್ಸಿನ ತೊನ್ನು ಮತ್ತೆ ಮೇಲೆದ್ದು ಬಂದಿವೆ,ಅತೃಪ್ತತೆ ತುಂಬಿ ತುಳುಕಾಡುತ್ತಿದೆ.ಹೊರಪ್ರಪಂಚದ ಮಂದಿಗೆ ಹೊರನೋಟಕ್ಕೆ ವಿಭಿನ್ನವಾಗಿ ಗೋಚರಿಸುವ ನಾನು ಒಳಗೊಳಗೆ ಪ್ರತಿ ನಿಮಿಷವೂ ಸೋಲುತ್ತಿರೋದು ಯಾರಿಗೂ ಗೊತ್ತಾಗದಂತೆ ಇರುತ್ತದೆ ನನ್ನ ಬಾಹ್ಯ ವರ್ತನೆ.ಹೋಲಿಸಿ ನೋಡಿದರೆ ಮೇಲೆ ಕಾಣುವ ನನಗೂ-ಕಳವಳದಲ್ಲಿ ತೇಲುವ ನನ್ನೊಳಗಿನ ನನಗೂ ಚೂರೂ ತಾಳೆಯಾಗದೆ ನನ್ನೊಳಗಿನ ಈ ತಾಕಲಾಟ ಕಂಡವರು 'ಖಂಡಿತ ಇವನಿಗೆ ಹನ್ನೆರಡಾಣೆ ಕಮ್ಮಿಯಾಗಿದೆ' ಎಂದುಕೊಳ್ಳುವುದರಲ್ಲಿಯೂ ಸಂಶಯ ನನಗಿಲ್ಲ.ಆದರೊಂದು ನಿಜ ಹೇಳಲಾ.ನಿನ್ನ ಹೊರತು ನಾನು ಜೀವಂತ ಓಡಾಡಿಕೊಂಡಿರುವ ಹೆಣ ಮಾತ್ರ.ಉಸಿರಾಡುತ್ತಾ ಓಡಾಡುವ ಅದಾಗಲೆ ಸತ್ತ ನನಗೆ ನಿನ್ನ ಹೆಗಲಿನಾಸರೆಯಲ್ಲಷ್ಟೆ ಮುಕ್ತಿ ಪ್ರಾಪ್ತಿಯಾದೀತು.ಈ ಬದುಕೆಂಬ ಕೃತಕ ವೆಂಟಿಲೇಶನ್'ನ ನರಕದಿಂದ ನಾನು ಪಾರಾಗುವ ಮೊದಲಾದರು ನಿನ್ನ ಬೆಚ್ಚಗಿನ ಅಂಗೈಯಲ್ಲಿ ಮತ್ತೆ ನನ್ನ ಕೈ ಸೇರಿಸುವುದೊಂದೆ ನನಗಿರುವ ಆಸೆ.ಆದರೆ ಈ ಆಸೆಯೂ ಇನ್ನುಳಿದ ಎಲ್ಲಾ ಅಸೆಗಳಂತೆ ಬರಿಯ ಆಸೆಯಾಗಿಯೆ ಈಡೇರದೆ ಉಳಿದು ಬಿಡುವ ಖಚಿತತೆ ಇದ್ದರೂ ನಾನು ಕನಸಿಸೋದನ್ನ ಬಿಡಲಾರೆ...ನಿತ್ಯ ನಿನ್ನ ನೆನೆಯೋದನ್ನ ಬಯಸಿದರೂ ನನಗೆ ಬಿಡಲಾಗದಂತೆ ಇದೂನು ಜನ್ಮಕ್ಕಂಟಿದ ಗೀಳಾಗಿಯೆ ಉಳಿದಿರುತ್ತದೆ.ಹಿಂದಿನಂತೆ ನನ್ನೆದೆಯ ಕದತಟ್ಟಿ ಅದನ್ನ ಕೇಳಿಸಿಕೊಳ್ಳೋಕೆ ನೀನಲ್ಲಿರೋಲ್ಲ ಅಷ್ಟೆ.

ಖಾಸಗಿ ಕನವರಿಕೆಗಳನ್ನ ಹೀಗೆ ಜಾಹೀರು ಮಾಡುವಲ್ಲಿಯೂ ನನ್ನದೊಂದು ದೂರದ ಆಸೆಯಿದೆ.ನನ್ನ ಯಾವ ಮಾತಿಗೂ ನಿನ್ನ ಪ್ರತಿಕ್ರಿಯೆಯ ನಿರೀಕ್ಷೆಯಿಲ್ಲ,ಆದರೂ ಮರಳಿ ಬಾರದಂತೆ ನೀನು ನನ್ನ ಪರಿಧಿಯಿಂದ ದೂರ ಸರಿದಿದ್ದರೂ ಕೂಡ ಎಲ್ಲೋ ಒಂದೆಡೆ ಈ ನನ್ನ ಹಪಾಹಪಿ ನಿನ್ನ ಗಮನಕ್ಕೆ ಬರಲಿ.ನಿನ್ನ ಹೊರತು ನಾನು ಪಡುತ್ತಿರುವ ಯಾತನೆ.

Thursday, September 1, 2011

ಇರಲಾರದ ಭೂತ


ಗಂಡ-ಹೆಂಡತಿ ತುಂಬ ಅನ್ಯೋನ್ಯವಾಗಿದ್ದರು. ಮದುವೆಯಾಗಿ ಐದು ವರ್ಷವಾಗಿದ್ದರೂ ನವವಿವಾಹಿತರಂತೆಯೇ ಇದ್ದರು. ಇದ್ದಕ್ಕಿದ್ದಂತೆ ಹೆಂಡತಿಗೆ ಏನೋ ಕಾಯಿಲೆ ಬಂದಿತು. ಆಕೆಗೆ ತಾನು ಸತ್ತು ಹೋಗುತ್ತೇನೆ ಎಂಬ ಭಯ ಬಂದಿತು. ಗಟ್ಟಿಯಾಗಿ ಗಂಡನ ಕೈಹಿಡಿದು ಹೇಳಿದಳು,  `ರೀ, ಅಕಸ್ಮಾತ್ ನಾನು ಸತ್ತು ಹೋದರೆ ನೀವು ಮತ್ತೆ ಯಾರನ್ನೂ ಮದುವೆಯಾಗಬಾರದು, ಯಾರನ್ನೂ ಪ್ರೀತಿಸಬಾರದು. ನನ್ನ ನೆನಪಿನಲ್ಲೇ ಉಳಿದುಬಿಡಬೇಕು. ಒಂದು ವೇಳೆ ನೀವು ಬೇರೆ ಮದುವೆಯಾದರೆ, ಮತ್ತೆ ಯಾವ ಹುಡುಗಿಯನ್ನು ಪ್ರೀತಿಸಿದರೆ ನಾನು ದೆವ್ವವಾಗಿ ನಿಮ್ಮನ್ನು ಕಾಡುತ್ತೇನೆ.` ಇದು ಕೋರಿಕೆಯೋ ಬೆದರಿಕೆಯೋ ತಿಳಿಯದೇ ಗಂಡ ತಲೆ ಅಲ್ಲಾಡಿಸಿ ಮಾತುಕೊಟ್ಟ.
ಪಾಪ! ಹೆಂಡತಿ ಕೆಲವೇ ದಿನಗಳಲ್ಲಿ ಸತ್ತು ಹೋದಳು. ಗಂಡನಿಗೆ ತುಂಬ ದುಃಖವಾಯಿತು. ಅವಳು ಹೇಳಿದಂತೆ ಅವಳ ನೆನಪಿನಲ್ಲೇ ಕೆಲಕಾಲ ಕಳೆದ. ಬೇರೆ ಯಾವ ಯುವತಿಯತ್ತ ನೋಡಲೇ ಇಲ್ಲ. ನಂತರ ಒಂದು ವಿಶೇಷ ಗಳಿಗೆಯಲ್ಲಿ ಸುಂದರಿಯೊಬ್ಬಳ ಪರಿಚಯವಾಯಿತು. ಆಕೆ ತುಂಬ ಆಕರ್ಷಕವಾಗಿದ್ದಾಳೆ ಹಾಗೂ ಬುದ್ಧಿವಂತೆಯಾಗಿದ್ದಾಳೆ ಎನ್ನಿಸಿತು ಆತನಿಗೆ. ಇವನೂ ಬುದ್ಧಿವಂತ ಹಾಗೂ ತಿಳುವಳಿಕೆಯುಳ್ಳವನು ಎನ್ನಿಸಿತು ಆಕೆಗೆ. ಪರಿಚಯ ಪ್ರೇಮವಾಗಿ ಬದಲಾಯಿತು. ಇಬ್ಬರೂ ವಿವಾಹವಾಗಲು ತೀರ್ಮಾನ ಮಾಡಿದರು.
ಮದುವೆಯ ನಿಶ್ಚಿತಾರ್ಥ ನಡೆಯಿತು. ಅಂದೇ ರಾತ್ರಿ ಮೊದಲಿನ ಹೆಂಡತಿಯ ದೆವ್ವ ಬಂದು ಇವನನ್ನು ಮಾತನಾಡಿಸಿತು, ಇವನನ್ನು ಕೆಣಕಿತು. ಅದರದೊಂದು ವಿಶೇಷ ಸ್ವಭಾವವೆಂದರೆ ತನ್ನ ಗಂಡ ಮತ್ತು ಹೊಸ ಹುಡುಗಿಯ ನಡುವೆ ಏನು ನಡೆದರೂ ಅದಕ್ಕೆ ತಿಳಿದು ಅದನ್ನು ವಿಸ್ತಾರವಾಗಿ ತನ್ನ ಗಂಡನಿಗೆ ವರದಿ ಒಪ್ಪಿಸುತ್ತಿತ್ತು. ತನ್ನ ಗಂಡ ಆ ಹುಡುಗಿಯ ಹತ್ತಿರ ಮಾತನಾಡಿದ ಪ್ರತಿಯೊಂದು ಪಿಸುಮಾತನ್ನು ಕೂಡ ನೆನಪಿನಲ್ಲಿಟ್ಟುಕೊಂಡು ಅವನಿಗೆ ಹೇಳುತ್ತಿತ್ತು. ನೀನು ಹೀಗೆ ಮಾಡಿದೆಯಲ್ಲವೇ? ಈ ಮಾತು ಹೇಳಿದೆಯಲ್ಲವೇ? ಆ ಉಡುಗೊರೆ ಕೊಟ್ಟೆಯಲ್ಲವೇ? ಎಂದು ಕೆದಕಿ ಕೆದಕಿ ಕೇಳುತ್ತಿತ್ತು. ದೆವ್ವ ಹೇಗೆ ಎಲ್ಲವನ್ನೂ ಮರೆಯದೇ ನೆನಪಿನಲ್ಲಿಟ್ಟುಕೊಳ್ಳುತ್ತದೆ ಎಂದು ಇವನಿಗೆ ಆಶ್ಚರ್ಯ, ಆತಂಕವಾಗುತ್ತಿತ್ತು. `ನನಗೆ ಕೊಟ್ಟ ಮಾತನ್ನು ಮರೆತೇ ಬಿಟ್ಟೆಯಾ? ಸರಿ, ನಿನಗೆ ತಕ್ಕ ಶಾಸ್ತಿ ಮಾಡುತ್ತೇನೆ ಇರು` ಎಂದಾಗ ಅವನಿಗೆ ಭಯವಾಗುತ್ತಿತ್ತು.
ಆತಂಕಗೊಂಡ ಅವನನ್ನು ಯಾರೋ ಒಬ್ಬ ಗುರುಗಳ ಕಡೆಗೆ ಕರೆದುಕೊಂಡು ಹೋದರು. ಅವರು ಇವನಿಂದ ವಿವರಗಳನ್ನೆಲ್ಲ ವಿಸ್ತಾರವಾಗಿ ಪಡೆದುಕೊಂಡ ನಂತರ ಹೇಳಿದರು,  ಬಹುಶಃ ಇದೊಂದು ಅತ್ಯಂತ ಬುದ್ಧಿವಂತ ದೆವ್ವವಿರಬೇಕು. ಅದಕ್ಕೇ ನಿಮ್ಮಿಬ್ಬರ ನಡುವೆ ನಡೆದ ಪ್ರತಿಯೊಂದು ವಿಷಯವನ್ನೂ, ಮಾತನ್ನೂ ನೆನಪಿನಲ್ಲಿಟ್ಟುಕೊಂಡಿದೆ. ಇದಕ್ಕೆ ಒಂದು ಉಪಾಯವಿದೆ. ದೆವ್ವ ನಿನ್ನ ಮುಂದೆ ಬಂದೊಡನೆ ಅದಕ್ಕೆ ಹೀಗೆ ಹೇಳು, `ನಾನು ನಿನಗೊಂದು ಪ್ರಶ್ನೆ ಕೇಳುತ್ತೇನೆ. ಅದಕ್ಕೆ ಸರಿಯಾದ ಉತ್ತರ ಕೊಟ್ಟರೆ ನಾನು ಈ ಹುಡುಗಿಯನ್ನು ಮದುವೆಯಾಗದೇ ನಿನ್ನ ನೆನಪಿನಲ್ಲೇ ಉಳಿದುಬಿಡುತ್ತೇನೆ.`
`ಆಗಲಿ ಗುರುಗಳೇ, ಯಾವ ಪ್ರಶ್ನೆಯನ್ನು ಅದಕ್ಕೆ ಕೇಳಲಿ?`  ಎಂದು ಕೇಳಿದ ಗಂಡ.  `ದೆವ್ವ ಬಂದಾಗ ನಿನ್ನ ಕೈಯಲ್ಲಿ ಒಂದು ಮುಷ್ಟಿ ಅಕ್ಕಿ ಹಿಡಿದುಕೋ. ಈ ಮುಷ್ಟಿಯಲ್ಲಿ ಎಷ್ಟು ಅಕ್ಕಿಕಾಳು ಇವೆ ಹೇಳು. ಸರಿಯಾಗಿ ಹೇಳಿದರೆ ನೀನು ಹೇಳಿದಂತೆಯೇ ಬಾಳುತ್ತೇನೆ ಎನ್ನು. ದೆವ್ವ ಉತ್ತರ ಸರಿಯಾಗಿ ಕೊಡದಿದ್ದರೆ ನಿನಗಿದ್ದದ್ದು ಕೇವಲ ದೆವ್ವದ ಭ್ರಮೆ. ಅದನ್ನು ಮರೆತುಬಿಡು` ಎಂದರು ಗುರುಗಳು.
ಅದೇ ರಾತ್ರಿ ದೆವ್ವ ಬಂದಿತು. ಅಷ್ಟೇ ಅಲ್ಲ ತನ್ನ ಗಂಡ ಗುರುಗಳನ್ನು ಕಂಡದ್ದನ್ನು, ಅವರು ಹೇಳಿದ್ದನ್ನು ಎಲ್ಲವನ್ನೂ ಹೇಳಿತು. ಗಂಡ ಧೈರ್ಯ ತಂದುಕೊಂಡು ಮುಷ್ಟಿಯಲ್ಲಿ ಅಕ್ಕಿ ಹಿಡಿದು  ಕಾಳುಗಳ ಸಂಖ್ಯೆಯನ್ನು ಹೇಳು ಎಂದು ಕೇಳಿದ. ಪ್ರಶ್ನೆಗೆ ದೆವ್ವ ಉತ್ತರ ಕೊಡಲಿಲ್ಲ. ಕೊಡಲು ಅದು ಇರಲೇ ಇಲ್ಲ. ನಮ್ಮ ಅಂತಃಸಾಕ್ಷಿಯೇ ನಮ್ಮ ದೆವ್ವ ಹಾಗೂ ದೇವರು. ನಾವು ಬೇರೆಯವರ ಮುಂದೆ ಯಾವ ಮುಖವಾಡ ಹಾಕಿಕೊಂಡರೂ ಮನಸ್ಸಾಕ್ಷಿಯನ್ನು ವಂಚಿಸಲಾರೆವು. ಅದು ನಮ್ಮನ್ನು ಭೂತದಂತೆ ಬೆನ್ನಟ್ಟಿ ಕಾಡಿ ಪ್ರಜ್ಞೆಯನ್ನು ಕೆಣಕುತ್ತದೆ, ಅಣಕಿಸುತ್ತದೆ.

ಡಾ ಎಚ್ ಎಸ್ ವೆಂಕಟೇಶ ಮೂರ್ತಿ (೨೩.೦೬.೧೯೪೪-೩೦.೦೫.೨೦೨೫) - ಒಂದು ನೆನಪು - ಸಿ ಬಿ ಶೈಲಾ ಜಯಕುಮಾರ್. ಚಿತ್ರದುರ್ಗ.

  "ಪ್ರೀತಿ ಕೊಟ್ಟ ರಾಧೆಗೆ...ಮಾತು ಕೊಟ್ಟ ಮಾಧವ..." "ಅಮ್ಮ ನಾನು ದೇವರಾಣೆ ಬೆಣ್ಣೆ ಕದ್ದಿಲ್ಲಮ್ಮ..." "ಲೋಕದ ಕಣ್ಣಿಗೆ ರಾಧೆಯೂ ಕೂಡ ......