ನಮ್ಮನು ಮತ್ತು ಬ್ಲಾಗಿನ ಓರೆ ಕೋರೆಯನು ತಿದ್ದಲು, ಬ್ಲಾಗಿಗೆನಲ್ಲಿ ಬರೆಯಲು.. ನಿಮ್ಮ ಸಂಗ್ರಹವನು ಪ್ರಕಟಿಸಲು ನಮ್ಮನ್ನು ತಲುಪಲು - ಇ ಮೇಲ್ ಕಳುಹಿಸಿ - kannada.info@gmail.com |.

Monday, December 11, 2023

ಆನೆಗಳ ಸಭೆಯ ತೀರ್ಮಾನದಂತೆ ಮುಖ್ಯಮಂತ್ರಿಗಳಿಗೆ ಬರೆದ ಪತ್ರ. - ಗುರುಮೂರ್ತಿ ಜೋಗಿಬೈಲು.

ಗೆ,

ಮಾನ್ಯ  ಮುಖ್ಯಮಂತ್ರಿಗಳು

ಕರ್ನಾಟಕ   ಸರ್ಕಾರ.

 ಮಾನ್ಯ   ಅರಣ್ಯ  ಸಚಿವರು

ಕರ್ನಾಟಕ  ಸರ್ಕಾರ .

ಮತ್ತು

ಹಿರಿಯ ಅರಣ್ಯ   ಅಧಿಕಾರಿಗಳು.

ಕರ್ನಾಟಕ   ಸರ್ಕಾರ .

 

ಯಿಂದಾ,

ಕಾಡಿನ   ಆನೆಗಳು.

 

ಮಾನ್ಯರೆ,

ಇತ್ತೀಚೆಗೆ   ನಮ್ಮ   ಗುಂಪಿನ  ಆನೆಯೊಂದನ್ನು   ಸೆರೆ  ಹಿಡಿಯುವ   ಕಾರ್ಯಾಚರಣೆಯಲ್ಲಿ  ಆನೆ  ಮರಣಿಸಿರುವುದು   ತಮ್ಮ  ಗಮನಕ್ಕೆ  ಬಂದಿದೆ   ಎಂದು  ಭಾವಿಸುತ್ತೇವೆ.   ಅಂತಹುದೇ   ಕಾರ್ಯಾಚರಣೆಯಲ್ಲಿ  ಮನುಷ್ಯರು   ಸೆರೆ  ಹಿಡಿದು   ಹಿಂಸಿಸಿ   ಸಾಕಿಕೊಂಡು  "ಅರ್ಜುನ"   ಎಂದು ಹೆಸರಿಟ್ಟುಕೊಂಡಿದ್ದ  ಆನೆಯೂ  ಮರಣಿಸಿದೆಯಷ್ಟೆ.

ಅದಕ್ಕಾಗಿ   ತಾವು ಸಂತಾಪ  ವ್ಯಕ್ತಪಡಿಸಿರುವ   ಸಂಗತಿ ತಿಳಿಯಿತು.  ತಮ್ಮ  ಸೂಕ್ಷ್ಮತೆಗೆ  ಅಭಾರಿಗಳಾಗಿದ್ದೇವೆ.

 ಮನುಷ್ಯ  ಲೋಕದ ತಾರತಮ್ಯದ ರೂಡಿಯಂತೆ  ಎರಡೂ  ಆನೆಗಳ   ಸಾವಿನ  ಬಗ್ಗೆಯೂ  ತಾರತಮ್ಯ ದಿಂದ  ಪ್ರತಿಕ್ರಿಯಿಸಿರುವುದು   ವಿಷಾದನೀಯ.

 ಕಾಡಿನ  ಆನೆಗಳಾದ   ನಮ್ಮ  ಬದುಕು   ಇಂದು   ಅತ್ಯಂತ  ಸಂಕಷ್ಟದಲ್ಲಿದೆ.   ನಾವು  ಒಡಾಡಿಕೊಂಡಿದ್ದ  ಬಹಳಷ್ಟು   ಪ್ರದೇಶಗಳು   ಕೃಷಿಗಾಗಿ,   ರಸ್ತೆಗಳ   ನಿರ್ಮಾಣಕ್ಕಾಗಿ,   ವಿವಿಧ   ಅಭಿವೃದ್ಧಿ  ಹೆಸರಿನ  ಯೋಜನೆಗಳಿಗಾಗಿ  ಬಳಸಲ್ಪಟ್ಟಿವೆ.   ನಾವು  ಓಡಾಡುತ್ತಿದ್ದ

ದಾರಿಗಳಲ್ಲಿ   ಬೇಲಿಗಳು   ನಿರ್ಮಾಣವಾಗಿವೆ.  ನಮ್ಮ  ಕಾಡಿನ  ಪ್ರದೇಶವು   ನಿರಂತರವಾಗಿ  ಕಡಿಮೆಯಾಗುತ್ತಿರುವುದರಿಂದ    ನಮ್ಮ   ಗುಂಪುಗಳು   ಅನಿವಾರ್ಯವಾಗಿ   ಆಹಾರ ಹುಡುಕುತ್ತಾ   ಕೃಷಿ  ಪ್ರದೇಶಗಳಿಗೆ  ಬರುವಂತಾಗುತ್ತಿದೆ.   ಇದು   ಅಲ್ಲಿ ವಾಸಮಾಡುತ್ತಿರುವ  ಮನುಷ್ಯರು   ಮತ್ತು  ನಮ್ಮ  ನಡುವಿನ ಸಂಘರ್ಷಕ್ಕೆ   ಕಾರಣವಾಗುತ್ತಿದೆ.  ಇದು  ನಮ್ಮವರ  ಮತ್ತು   ಮನುಷ್ಯರ  ಜೀವನಷ್ಟಕ್ಕೆ   ಕಾರಣವಾಗುತ್ತಿದೆ.

 

ಮನುಷ್ಯರಂತೆಯೇನಾವು  ಆನೆಗಳೂ  ಮತ್ತು   ಎಲ್ಲಾ  ಜೀವಿಗಳಿಗೂ  ಕೂಡ    ಭೂಮಿಯ ಮೇಲೆ ಬದುಕುವ  ಹಕ್ಕು   ಇದೆ ಎಂಬುದನ್ನು  ತಾವುಗಳು   ಒಪ್ಪುತ್ತೀರಿ    ಎಂದು   ಭಾವಿಸುತ್ತೇವೆ.

ಅಂತೆಯೇ   ಕಾಡಿನಲ್ಲಿ  ಸ್ವಾತಂತ್ರ್ಯವಾಗಿ  ಬದುಕಿರುವ   ನಮ್ಮನ್ನು  ಬಲಾತ್ಕಾರವಾಗಿ  ಬಂಧಿಸಿ    ಹಿಂಸಿಸಿ   ಪಳಗಿಸಿಕೊಂಡು  ನಿಮ್ಮ   ಕೆಲಸಗಳಿಗಾಗಿ  ಆಡಂಬರದ  ಮೆರವಣಿಗೆಗಳಿಗಾಗಿ   ಬಳಸಿಕೊಳ್ಳುವುದು   ನಮ್ಮ   ಬದುಕುವ   ಹಕ್ಕಿನ  ಸ್ಪಷ್ಟ   ಉಲ್ಲಂಗನೆಯಾಗಿದೆ.

 

  ಎಲ್ಲಾ   ಸಮಸ್ಯೆಗಳಿಗೂ   ಶಾಶ್ವತ   ಪರಿಹಾರ   ರೂಪಿಸಬೇಕೆಂದು  ಮೂಲಕ   ವಿನಂತಿಸುತ್ತಿದ್ದೇವೆ.

 

ನಮ್ಮ   ಹಕ್ಕೊತ್ತಾಯಗಳು. 

*  ಕಾಡಿನಲ್ಲಿ   ನಾವು ವಾಸಿಸುತ್ತಿರುವ   ಪ್ರದೇಶಗಳನ್ನು  ನಮಗಾಗಿ  ಮತ್ತು ಇತರ   ಕಾಡಿನ ಜೀವಿಗಳಿಗಾಗಿ  ಬಿಟ್ಟುಕೊಡಬೇಕು. 

*ನಾವು  ವಾಸಿಸುವ   ಮತ್ತು  ಆಹಾರಕ್ಕಾಗಿ  ಓಡಾಡುವ    ದಾರಿಗಳನ್ನು   ಗುರುತಿಸಿ,      ಪ್ರದೇಶದಲ್ಲಿ   ಕೃಷಿ   ಮಾಡಿಕೊಂಡು   ಬದುಕುತ್ತಿರುವ  ರೈತ    ಜಮೀನುಗಳನ್ನು    ಸೂಕ್ತ   ಬೆಲೆ  ನೀಡಿ   ಕೊಂಡುಕೊಂಡು  ಕಾಡಿಗೆ  ಸೇರಿಸಬೇಕು.

 *ನಾವು   ವಾಸಿಸುತ್ತಿರುವ   ಪ್ರದೇಶದಲ್ಲಿ   ಯಾವುದೇ  ಅಭಿವೃದ್ಧಿ  ಯೋಜನೆಗಳನ್ನು   ಕೈಗೊಳ್ಳುವುದನ್ನು   ನಿಲ್ಲಿಸಬೇಕು.

 *   ನಾವು  ವಾಸಿಸುವ   ಆಸುಪಾಸಿನಲ್ಲಿ  ಇರುವ   ಜನರಿಗೂ   ನಮಗೂ  ಸಂಘರ್ಷ ವಾಗದಂತೆ  ಸೂಕ್ತ   ಮುನ್ನೆಚ್ಚರಿಕೆ   ಕ್ರಮಗಳನ್ನು  ಕೈಗೊಳ್ಳಬೇಕು

*  ನಮ್ಮನ್ನು  ಸೆರೆಹಿಡಿದು   ಹಿಂಸಿಸಿ   ಪಳಗಿಸುವ  ಪರಿಪಾಟವನ್ನು  ಸೂಕ್ತ  ಕಾನೂನು   ರೂಪಿಸುವ   ಮೂಲಕ  ತಡೆಗಟ್ಟಿ    ನಮ್ಮ   ಬದುಕುವ   ಹಕ್ಕನ್ನು   ಖಾತರಿಗೊಳಿಸಬೇಕು

*ನಮ್ಮನ್ನು   ಕೆಲಸಕ್ಕಾಗಿ,   ಮೆರವಣಿಗೆಗಳಿಗಾಗಿ   ಮತ್ತು   ಮನರಂಜನೆಗಾಗಿ   ಬಳಸುವುದನ್ನು   ನಿಷೇಧಿಸಬೇಕು.

 ಪರಿಸರ  ಪ್ರವಾಸೋದ್ಯಮದ  ಹೆಸರಲ್ಲಿ  ನಮ್ಮ   ಪ್ರದೇಶಕ್ಕೆ  ಬಂದು   ತೊಂದರೆ ನೀಡುವುದನ್ನು  ನಿಲ್ಲಿಸಬೇಕು.   ನಮಗೂ  ಸ್ವತಂತ್ರ್ಯ ವಾಗಿ   ಬದುಕುವ  ಹಕ್ಕು   ಇದೆ   ಎಂಬುದನ್ನ   ಗೌರವಿಸಬೇಕು

  ನಮ್ಮ      ಎಲ್ಲಾ   ಹಕ್ಕೊತ್ತಾಯಗಳನ್ನು    ಪರಿಗಣಿಸಿ    ಸೂಕ್ತ   ಕ್ರಮ  ಕೈಗೊಳ್ಳಬೇಕೆಂದು      ಮೂಲಕ  ಒತ್ತಾಯಿಸುತ್ತಿದ್ದೇವೆ.

 

ಇಂತಿ   ತಮ್ಮ  ಸಹಜೀವಿಗಳಾದ

ಕಾಡಿನ  ಆನೆಗಳು.

 

(   ನಮ್ಮ   ಮನವಿಯನ್ನು  ಸರ್ಕಾರಕ್ಕೂ   ಮತ್ತು   ನಮ್ಮ   ಪರವಾಗಿ ಚಿಂತಿಸುವವರ  ಗಮನಕ್ಕೂ  ತರಬೇಕಾಗಿ  ವಿನಂತಿ.

  ಬೆರಳಚ್ಚಿಸಿದವರು.  - ಗುರುಮೂರ್ತಿ  ಜೋಗಿಬೈಲು. )


No comments:

Post a Comment