Tuesday, July 22, 2014

ಸಂದರ್ಶನ - ತಾರಾ ಶೈಲೇಂದ್ರ

ತಾರಾ ಶೈಲೇಂದ್ರ ಅವರು ನಡೆಸಿದ ಜಯಂತ ಕಾಯ್ಕಿಣಿ ಅವರ ಸಂದರ್ಶನದ ಒಂದು ಆಯ್ದ ಭಾಗ. ಪೂರ್ತಿ ಓದಿಗೆ ಈ ಲಿಂಕ್ ಕ್ಲಿಕ್ಕಿಸಿ...
http://taraantaranga.blogspot.in/2014/06/blog-post.html

ಪ್ರಶ್ನೆ : ತಾವು ಮೂಲತಃ Biochemist ಆಗಿದ್ದು , ಸಾಹಿತ್ಯ ಕೃಷಿಯನ್ನು ಮುಂದುವರೆಸಿದ್ದು ಹೇಗೆ ?
ಉತ್ತರ : ವಿಜ್ಞಾನ ಹಾಗೂ ಸಾಹಿತ್ಯ ಬೇರೆ ಎಂಬ ಕಲ್ಪನೆ ತಪ್ಪು .
ಕುವೆಂಪು ಅವರು QUANTUM PHYSICS ಓದಿದವರು .
ಬೇಂದ್ರೆಯವರ ಗ್ರಂಥಾಲಯದ ೧೩,೦೦೦ ಪುಸ್ತಕಗಳಲ್ಲಿ ೧೦,೦೦೦ ವಿಜ್ಞಾನಕ್ಕೆ ಸಂಬಂಧಿಸಿದವು .
ಯಶವಂತ್ ಚಿತ್ತಾಲರು ಒಬ್ಬ Polymer Chemist.
ಪೂರ್ಣಚಂದ್ರ ತೇಜಸ್ವಿಯವರು ಒಬ್ಬ ಸಸ್ಯಶಾಸ್ತ್ರಜ್ಞರು
ಕಾರಂತರು ನಡೆದಾಡುವ ವಿಜ್ಞಾನ ವಿಶ್ವಕೋಶ ಎನಿಸಿಕೊಂಡವರು
ನಿಸಾರ್ ಅಹ್ಮದ್ ಅವರು Geologist ಆಗಿದ್ದವರು .
ನಾವು ಮಕ್ಕಳಲ್ಲಿ ವಿಜ್ಞಾನ ಓದಿದವ ಬುದ್ಧಿವಂತ , ಕಲೆ ಓದಿದವ ದಡ್ಡ ಎಂಬ ತಪ್ಪು ಅಭಿಪ್ರಾಯ ಬೆಳೆಸಿ, ದಾರಿ ತಪ್ಪಿಸಿದ್ದೇವೆ. ವಿಜ್ಞಾನ ಮತ್ತು ಕಲೆ ಎರಡೂ ಒಂದಕ್ಕೊಂದು ಪೂರಕವಾಗಿರಬೇಕು.

Wednesday, July 16, 2014

ಅಮ್ಮ- ಸ್ಮತಿ ಶ್ರೀ


ಸುದ್ದಿಗುದ್ದುbyPHD‬ - P Harish Dixit Marathe,

ಮಹಿಳೆಯರ ಹಿತ ಕಾಯಲು ಸರ್ಕಾರ ವಿಫಲ - ಶಾಸಕ ಆರ್.ಅಶೋಕ್.
.
ಸರ್ಕಾರ ವಿಫಲವಾದರೇನು, ದೇವರಿಲ್ಲವೇ?
ರಾಜ್ಯದ ಕರೆಂಟನ್ನು ತೆಗೆದ ದೇವರಿಗೆ ಅತ್ಯಾಚಾರ ಮಾಡುವ ಗಂಡಸರ ಫ್ಯೂಸ್ ತೆಗೆಯುವುದು ಗೊತ್ತಿಲ್ಲವೇ? 

ಸುದ್ದಿಗುದ್ದುbyPHD‬ - P Harish Dixit Marathe,

ಕೂಡಗಿ ಸ್ಥಾವರವನ್ನು ಇನ್ನಷ್ಟು ಪರಿಸರ ಸ್ನೇಹಿ ಆಗಿಸಲು ''ಅಲ್ಟ್ರಾ ಮಾಡರ್ನ್ ಸೂಪರ್ ಕ್ರಿಟಿಕಲ್ ತಂತ್ರಜ್ಞಾನ'' ಅಳವಡಿಸಿಕೊಳ್ಳಲು ಸಾಧ್ಯವೇ ಎಂಬುದರ ಕುರಿತು ಪರಿಶೀಲಿಸಲಾಗುವುದು. ''ಜನ ಭಯಪಡುವ ಅಗತ್ಯವಿಲ್ಲ.'' - ಎಂ.ಬಿ. ಪಾಟೀಲ. - ಪತ್ರಿಕಾ ವರದಿ
.
ಅಲ್ಟ್ರಾ ಮಾಡರ್ನ್ ಸೂಪರ್ ಕ್ರಿಮಿನಲ್ ಏಥೂ  ಕ್ರಿಟಿಕಲ್ ...... ಈ ಪದಪುಂಜವೇ ಭಯ ಹುಟ್ಟಿಸುವಂತಿದೆಯಲ್ಲ ಸಿವಾ 

ಸುದ್ದಿಗುದ್ದುbyPHD‬ - P Harish Dixit Marathe

ಸರ್ಕಾರದ 'ಭಾಗ್ಯಲಕ್ಷ್ಮಿ' ಯೋಜನೆಯ ಫಲಾನುಭವಿಗಳಲ್ಲಿ 7814 ಮಕ್ಕಳು ಎಲ್ಲಿದ್ದಾರೆ ಎಂಬುದು
ಮಹಿಳಾ ಮತ್ತು ಮಕ್ಕಳ ಕಲ್ಯಾಣ ಇಲಾಖೆಗೇ ಗೊತ್ತಿಲ್ಲ ! -  ಪತ್ರಿಕಾ ವರದಿ
.
ರಸ್ತೆ ಬದಿಯಲ್ಲಿ ಒಬ್ಬ ಊದ್ದಕ್ಕೆ ಗುಂಡಿ ತೋಡ್ತಾ ಹೋಗ್ತಿದ್ನಂತೆ. ಮತ್ತೊಬ್ಬ ಮುಚ್ತಾ (ಮುಂಡಾ ಮೋಚ್ತಾ  ) ಬರ್ತಿದ್ನಂತೆ.
ಏನ್ರೋ ಇದು ಅಂತ ಕೇಳಿದ್ರೆ, ನಮ್ಮಿಬ್ರ ಮಧ್ಯ ಇನ್ನೊಬ್ಬ ಗಿಡ ನೆಡೋನು ಇರ್ಬೇಕಾಗಿತ್ತು ಸಾ, ಆದ್ರೆ ಅವ್ನಿವತ್ತು ಬಂದಿಲ್ಲ, ರಜಾ, ನಮ್ ಕೆಲ್ಸ ನಾವ್ ಮಾಡ್ತಾ ಇದೀವಿ ಸಾ ಅಂದ್ರಂತೆ ಇಬ್ರೂ.
ಹಾಗೇ, ಭಾಗ್ಯ ಕೊಟ್ಟೋರು ಭಾಗ್ಯ ತಗಂಡೋರು ಇಬ್ರೂ ಇದ್ದು ಲಕ್ಷ್ಮಿನೇ ಹುಟ್ಟಿಲ್ದಿದ್ರೆ ಈಗೇನ್ ಮಾಡೋಕಾಗತ್ತೆ! 

Thursday, July 10, 2014


ಭಾರತದ ಪ್ರಥಮ “72 ಜೀನಾಲಯ”

72 ಜೀನಾಲಯದ ಹೊರ ಆವರಣದ ಒಂದು ನೋಟ


ರಾಜಸ್ಥಾನ ರಾಜ್ಯದ  ಜಾಲೋರ ಜಿಲ್ಲೆ ಬೀನಮಾಲ್ ಬ್ಲಾಕನಲ್ಲಿ  (ತಾಲ್ಲೂಕು) ಲಕ್ಷ್ಮೀ ವಲ್ಲಭ 72 ಜೀನಾಲಯ ಇರುವುದು. ಇದು ಭಾರತ ದೇಶದ ಪ್ರಥಮ 72 ಜೀನಾಲಯವಾಗಿರುವುದು. ಬ್ಲಾಕನ ಕೇಂದ್ರ ಸ್ಥಳದಲ್ಲಿಯೇ ಈ ಮಂದಿರ ಇರುವದು. ಲುಕಡ ಪರಿವಾರದವರು ಕಟ್ಟಿಸಿರುವ ಈ ಜೀನಾಲಯದಲ್ಲಿ ಜೈನ ಧರ್ಮದ 72 ತೀರ್ಥಂಕರರ ವಿಗ್ರಹಗಳು ಇರುವುದು
72  ಜೀನಾಲಯದ ಇದರ
 ಸಂಪೂರ್ಣ ನೋಟ
ವಿಶೇಷವಾಗಿದೆ. ಜೈನ ಧರ್ಮದ ಅನುಯಾಯಿಗಳಿಗೆ ತಮ್ಮ ಎಲ್ಲಾ ತೀರ್ಥಂಕರರನ್ನು ಒಂದೇ ಮಂದಿರದಲ್ಲಿ ನೋಡುವ ಸೌಭಾಗ್ಯವನ್ನು ಈ ಜೀನಾಲಯ ಒದಗಿಸಿರುವುದು. ತನ್ನದೇ ಆದ ವಿಶಿಷ್ಠ ಅತ್ಯಂತ ಸುಂದರವಾದ ಶಿಲ್ಪ ಕಲೆಗಳಿಂದ ನಿಮೀ೯ತವಾದ ಈ ಜೈನ ದೇವಾಲಯ ಆಧುನಿಕ ಶಿಲ್ಪಕಲೆಯ ಪ್ರತಿಬಿಂಬವಾಗಿರುವುದು. ಬಿಳಿಯಾದ ಮಾರ್ಬಲಗಳಿಂದ ರಚಿತವಾದ ಈ ಮಂದಿರ ರಾಜಸ್ಥಾನದ ಒಂದು ಹೆಮ್ಮೆಯಾಗಿರುವುದು.  ಜಾಲೋರ-ಬೀನಮಾಲ ಮುಖ್ಯ ರಸ್ತೆಯ ಬದಿಯಲ್ಲಿಯೇ ಇರುವ ಇದು ದಾರಿಯಲ್ಲಿ ಸಾಗುವ ಎಲ್ಲರನ್ನು ಕೈ ಬೀಸಿ ಕರೆಯುತ್ತಿರುವುದು.
ವಿಶಾಲವಾದ ದೇವಾಲಯದ ಹೊರಗಿನ ಆವರಣ, ಜೀನಾಲಯದಲ್ಲಿ ಇರುವ ಪಾರಿವಾಳಗಳು, ಹಸಿರು ಹುಲ್ಲುಗಳು, ಸುಂದರ ಹೂವುಗಳು ಬೇವಿನ ಮರದ ಕೆಳಗಿನ ತಂಪಾದ ಗಾಳಿ ರಾಜಸ್ಥಾನದ ಊರಿ ಬಿಸಿಲಿನಲ್ಲಿಯೂ ನಾವು ಬೇರೆ ಯಾವುದೋ ಲೋಕದಲ್ಲಿರುವ ಅನುಭವವನ್ನು ನೀಡುವುದು.
ಸುಮಾರು 140 ಕೊಠಡಿಗಳ ಧರ್ಮಶಾಲೆ, ಭೋಜನಶಾಲೆ ಈ ಎಲ್ಲವೂ ಮಂದಿರದ ಆವರಣದಲ್ಲಿಯೇ ಇದ್ದು ಬರುವ ಪ್ರವಾಸಿಗರಿಗೆ ಸೇವೆಯನ್ನು ಒದಗಿಸುತ್ತಿರುವುದು.
ರಾಜಸ್ಥಾನದ ಪ್ರವಾಸಕ್ಕೆಂದು ನೀವು ಬಂದರೆ  ತಪ್ಪದೇ ಈ ದೇವಾಲಯದ ಸೌಂದರ್ಯವನ್ನು ಸವಿದೇ ಹೋಗಿರಿ. 72 ತೀರ್ಥಂಕರರನ್ನು ತಾವು ಸಹಾ ದರ್ಶನ ಮಾಡಿರಿ.


72 ಜೀನಾಲಯದ ಮುಖ್ಯ ದ್ವಾರದ 
ಒಂದು ನೋಟ

72 ಜೀನಾಲಯದ ಎರಡು 
ಬದಿಯ ನೋಟ
72 ಜೀನಾಲಯದ ಹೊರ 
ಆವರಣದ ಒಂದು ನೋಟ


- ಮುಖ್ಯ ದ್ವಾರದ ಸೌಂದರ್ಯ ಹೆಚ್ಚಿಸಿರುವ ಪಾರಿವಾಳಗಳು


                 72  ಜೀನಾಲಯದ ಇದರ ಸಂಪೂರ್ಣ ನೋಟ



ವರದಿ , ವಿವೇಕ ಬೆಟ್ಕುಳಿ,

ಡಾ ಎಚ್ ಎಸ್ ವೆಂಕಟೇಶ ಮೂರ್ತಿ (೨೩.೦೬.೧೯೪೪-೩೦.೦೫.೨೦೨೫) - ಒಂದು ನೆನಪು - ಸಿ ಬಿ ಶೈಲಾ ಜಯಕುಮಾರ್. ಚಿತ್ರದುರ್ಗ.

  "ಪ್ರೀತಿ ಕೊಟ್ಟ ರಾಧೆಗೆ...ಮಾತು ಕೊಟ್ಟ ಮಾಧವ..." "ಅಮ್ಮ ನಾನು ದೇವರಾಣೆ ಬೆಣ್ಣೆ ಕದ್ದಿಲ್ಲಮ್ಮ..." "ಲೋಕದ ಕಣ್ಣಿಗೆ ರಾಧೆಯೂ ಕೂಡ ......