Wednesday, January 8, 2014

ಕಾವ್ಯ ಕಮ್ಮಟ





ವತ್ತಿನ ಹೊಸ ತಲೆಮಾರಿನ ಯುವಸಮುದಾಯ ತನ್ನೆಲ್ಲ ತುಡಿತಗಳನ್ನು ಕಾವ್ಯದ ಮೂಲಕ ಹೊರಹಾಕಲು ಯತ್ನಿಸುತ್ತಿದೆ.. ತನ್ಮೂಲಕ ವರ್ತಮಾನದ ತಲ್ಲಣಗಳಿಗೆ ಸ್ಪಂದಿಸುತ್ತಾ ಸಾಹಿತ್ಯ-ಕಾವ್ಯವನ್ನು ಕಟ್ಟುವ ಕೆಲಸ ಮಾಡುತ್ತಿದೆ. ಇದೇ ಸಮಯದಲ್ಲಿ ಈ ರೀತಿಯ ಹೊಸಪೀಳಿಗೆಯ ಕಾವ್ಯದ ಕಲಿಕೆಯಲ್ಲಿ ಆಸಕ್ತರಾದ ನಾವು ಕೆಲವರು ಸೇರಿಕೊಂಡು 'ಕಾವ್ಯ ಕಮ್ಮಟ' ಒಂದನ್ನು ಕುಪ್ಪಳಿ ಕವಿಮನೆ ಬಳಿಯ 'ಶತಮಾನೋತ್ಸವ ಭವನ'ದಲ್ಲಿ ಏರ್ಪಡಿಸಿದ್ದೇವೆ. ಜನವರಿ 31, ಪೆಬ್ರವರಿ 1 & 2 ರವರೆಗೆ 3 ದಿನಗಳ ಕಾಲ ನಡೆಯುವ ಈ ಶಿಬಿರದಲ್ಲಿ ಭಾಷಣಗಳ ಬದಲು ಹಿರಿಯ-ಸಮಕಾಲೀನ ಕವಿ-ಕವಯಿತ್ರಿಯರೊಂದಿಗೆ ಸಂವಾದಗಳ ಮೂಲಕ ಕಾವ್ಯದ ಕುರಿತಾದ ಚರ್ಚೆ, ಪರಿಚಯಗಳನ್ನು ಸಾದರಪಡಿಸುವ ಆಶಯ ಇಟ್ಟುಕೊಂಡಿದ್ದೇವೆ.


ಆಸಕ್ತರ ಗಮನಕ್ಕೆ:

* 50 ಮಂದಿ ಹೊಸ ಪೀಳಿಗೆಯ ಬರಹಗಾರರಿಗೆ ಮೊದಲ ಆದ್ಯತೆ
* ಕಾವ್ಯಾಸಕ್ತ ಇತರರಿಗೂ ಸೀಮಿತ ಅವಕಾಶ
* ಸರಳ ಊಟ & ವಸತಿ ವ್ಯವಸ್ಥೆ ಕಲ್ಪಿಸಲಾಗುವುದು
* ಪ್ರವೇಶ ದರ ರೂ. 500/-
* ಜನವರಿ 10 ರೊಳಗೆ ನೊಂದಾಯಿಸಿಕೊಳ್ಳಬೇಕು.

ವಿವರಗಳಿಗೆ:


ಸತೀಶ್ 
Ph 9035611068 

E mail: info.kaajana@gmail.com

ಆಯೋಜನೆ: ಕಾಜಾಣ ಬಳಗ

No comments:

Post a Comment

ಡಾ ಎಚ್ ಎಸ್ ವೆಂಕಟೇಶ ಮೂರ್ತಿ (೨೩.೦೬.೧೯೪೪-೩೦.೦೫.೨೦೨೫) - ಒಂದು ನೆನಪು - ಸಿ ಬಿ ಶೈಲಾ ಜಯಕುಮಾರ್. ಚಿತ್ರದುರ್ಗ.

  "ಪ್ರೀತಿ ಕೊಟ್ಟ ರಾಧೆಗೆ...ಮಾತು ಕೊಟ್ಟ ಮಾಧವ..." "ಅಮ್ಮ ನಾನು ದೇವರಾಣೆ ಬೆಣ್ಣೆ ಕದ್ದಿಲ್ಲಮ್ಮ..." "ಲೋಕದ ಕಣ್ಣಿಗೆ ರಾಧೆಯೂ ಕೂಡ ......