tag:blogger.com,1999:blog-8060232796599552066.post5497168230665529945..comments2024-03-26T18:03:07.606+05:30Comments on ಕನ್ನಡ ಕನ್ನಡಿಗ ಕರ್ನಾಟಕ: "ಅಮೂಲ್ಯ" ಜೀವ ಇನ್ನಿಲ್ಲ.... Betkulihttp://www.blogger.com/profile/18152899449275597064noreply@blogger.comBlogger2125tag:blogger.com,1999:blog-8060232796599552066.post-794360846093841742012-09-10T17:20:06.368+05:302012-09-10T17:20:06.368+05:30ವರ್ಗೀಸ್ ಕುರಿಯನ್ನರ ಕುರಿತು ನಾನು ಬರೆದಿದ್ದರಲ್ಲಿ ಒಂದು ದ...ವರ್ಗೀಸ್ ಕುರಿಯನ್ನರ ಕುರಿತು ನಾನು ಬರೆದಿದ್ದರಲ್ಲಿ ಒಂದು ದೊಡ್ಡ ಪ್ರಮಾದ ನುಸುಳಿದೆ. ಅವರಿಗೆ ಸಂದಿದ್ದ್ದ ಉನ್ನತ ಭಾರತೀಯ ನಾಗರೀಕ ಗೌರವ "ಪದ್ಮವಿಭೂಷಣ"ವೆ ಹೊರತು "ಭಾರತ ರತ್ನ"ವಲ್ಲ. ನನ್ನ ಅರೆ ಗ್ರಹಿಕೆಯನ್ನ ಇದನ್ನ ಅಂತರ್ಜಾಲದಲ್ಲೆಲ್ಲೂ ಓದಿದ್ದ ಯಾವೊಬ್ಬ ಓದುಗರೂ ತಿದ್ದದಿದ್ದುದು ಬೇಸರ ಹುಟ್ಟಿಸಿದೆ! ಯಾರಾದರೂ ಇದನ್ನ ಎತ್ತಿ ತೋರಲಿ ಅಂತ ನನಗೆ ತಪ್ಪು ಅರಿವಾದ ಮುಂಜಾನೆಯಿಂದ ಸಂಜೆವರೆಗೂ ಕಾದೆ, ಪ್ರಯೋಜನವಾಗಲಿಲ್ಲ. ಹೀಗಾಗಿ ಅನಿವಾರ್ಯವಾಗಿ ನಾನೆ ಬರೆದುಕೊಳ್ಳುತ್ತಿದ್ದೇನೆ. <br /><br />ಇದರಲಿ ಇನ್ನೊಂದು ಮುಖ್ಯ ಸಂಗತಿ ಹೇಳಲು ಮರೆತೆಬಿಟ್ಟಿದ್ದೆ. ಒಂದು ಬ್ರಾಂಡನ್ನು ಕಟ್ಟಿ ಬೆಳೆಸುವುದೆಂದರೆ ಹಣದ ಇಡಿಗಂಟಿನ ಮೇಲೆ ವಿರಾಜಮಾನರಾಗೋದು ಎಂದರ್ಥ. ಉದಾಹಾರಣೆಗೆ ಕುರಿಯನ್ನರ ತಲೆಮಾರಿನವರೆ ಆದ ಧೀರೂಭಾಯಿ ಅಂಬಾನಿಯವರನ್ನೇ ತೆಗೆದುಕೊಳ್ಳೋಣ. ಸರಿಸುಮಾರು ಕುರಿಯನ್ನರು ವೃತ್ತಿ ಬದುಕನ್ನ ಆರಂಭಿಸುವಾಗಲೆ ಧೀರೂಭಾಯಿಯವರ ವ್ಯಾಪಾರಿ ಬದುಕು ಆರಂಭಗೊಂಡದ್ದು. ಮನಸ್ಸು ಮಾಡಿದ್ದರೆ ತಮಗೆ ಮೇಲೇರಲು ಸಿಕ್ಕ ಏಣಿಗಳನ್ನೆಲ್ಲ ಮುಲಾಜಿಲ್ಲದೆ ಒದ್ದು ಕುರಿಯನ್ನರೂ ಡೈರಿ ಉದ್ದಿಮೆಯ ಅನಭಿಶಕ್ತ ದೊರೆಯಾಗಿ ಮೆರೆಯಬಹುದಾಗಿತ್ತು. ಷೇರುದಾರರಿಂದ ಹಣ ಹೊಂದಿಸುವುದೇನೂ ಕಷ್ಟವಾಗ್ತಿರಲಿಲ್ಲ., ಆದರೆ ಅವರು ರೈತರನ್ನೆ ಷೇರುದಾರರನ್ನಾಗಿ ಹೊಂದಿದ್ದ ಸಹಕಾರಿ ಉದ್ದಿಮೆ ಕಟ್ಟುವ ಕನಸು ಕಂಡು ಅದನ್ನೆ ಸಾಕಾರಗೊಳಿಸಿದರು. ಅವರ ಶ್ರಮ ಹುಸಿ ಹೋಗಲಿಲ್ಲ. ವೃತ್ತಿ ಬದುಕಿನುದ್ದಕ್ಕೂ ( ನಿವೃತ್ತ ಜೀವನ ಅವರಿಗೆ ಕಡೆಗೂ ಲಭ್ಯವಾಗಲೆ ಇಲ್ಲ!) ಖಾಸಗಿ ಬಂಡವಾಳದಾರ ಭಾರಿ ಮೊತ್ತದ ಆಮಿಷಗಳನ್ನ ಆಗಾಗ ಅವರು ಎದುರುಗೊಂಡರೂ ಯಾವುದೆ ಖಾಸಗಿ ಡೈರಿ ಉದ್ದಿಮೆಗೆ ಅವರ ಮೇಧಾಶಕ್ತಿಯ ಧಾರೆಯೆರೆಯಲು ಅವರೊಪ್ಪಲೇ ಇಲ್ಲ. ಇನ್ನೂ ಸ್ಪಷ್ಟವಾಗಿ ಹೇಳುವುದಾದರೆ ಕ್ಷುಲ್ಲಕ ಹಣದ ಹಿಂದೆ ಬಿದ್ದು "ಪಕ್ಷಾಂತರ"ವನ್ನವರು ಮಾಡಿಕೊಳ್ಳಲಿಲ್ಲ. ಹಿರಿಯರಾದ ತ್ರಿಭುವನದಾಸ್ ಪಟೇಲ್-ಓರಗೆಯ ಮೊರಾರ್ಜಿ ದೇಸಾಯಿ-ಹಿರಿಯಕ್ಕನಂತಹ ಮಣಿಬೆನ್ ಇವರೆಲ್ಲರಿಂದ ಅವರು ಪಡೆದುಕೊಂಡದ್ದು ರೈತರ ಹಿತಕ್ಕೆ ಸಾಲುವಷ್ಟನ್ನು ಮಾತ್ರ. ವಿದೇಶಿ ಬ್ಯಾಂಕುಗಳಲ್ಲಿ ಕಪ್ಪಾಗಿಸಿ ಕೂಡಿಡುವಷ್ಟಲ್ಲ. ಇವರಿಗೆ "ಬಾರತ ರತ್ನ"ವನ್ನು ಪ್ರತ್ಯೇಕವಾಗಿ ಕೊಡ ಬೇಕಾ? ಆ ಲೋಹದ ಪದಕ "ಆ" ಕುಟುಂಬದಲ್ಲಿ ಹುಟ್ಟಿದ ಸಾಧನೆ ಮಾಡಿದ ಆಳುವ ವಂಶದಲ್ಲಿ ಹುಟ್ಟಿದ ರಾಜಕಾರಣಿಗಳಿಗೆ ಇರಲಿ ಬಿಡಿ?!Anagha Kirana ಅನಘ ಕಿರಣhttps://www.blogger.com/profile/09587762117139340360noreply@blogger.comtag:blogger.com,1999:blog-8060232796599552066.post-67507138338091448642012-09-10T17:19:22.553+05:302012-09-10T17:19:22.553+05:30ಸಿದ್ಧಾರ್ಥನಿಗೆ ಅವನಜ್ಜ ಬರೆದ ಪತ್ರದಲ್ಲಿ ಇದೊಂದು ಪಂಕ್ತಿ ...ಸಿದ್ಧಾರ್ಥನಿಗೆ ಅವನಜ್ಜ ಬರೆದ ಪತ್ರದಲ್ಲಿ ಇದೊಂದು ಪಂಕ್ತಿ ಬಿಟ್ಟು ಹೋಗಿತ್ತು ಕ್ಷಮಿಸಿ...<br /><br /><br />ನಾನು ಅರಿತಂತೆ ಒಂದು ದಿನ ಖಂಡಿತ ನೀನೂ ಜೀವನ ಎಂಬುದೊಂದು ಸುಯೋಗ ಇದನ್ನು ಹಾಳು ಮಾಡುವುದು ತಪ್ಪು ಎಂಬುದನ್ನೂ ಅರಿಯುವೆ. ಬಾಳು ಎಂಬ ಭಾಗ್ಯದಲ್ಲಿ ನಿನ್ನ ಜವಾಬ್ದಾರಿಯನ್ನು ನೀನು ಒಪ್ಪಿ ಅರಿತುಕೊಳ್ಳಬೇಕು. ನಿನ್ನ ಕೌಶಲ್ಯ ಹಾಗು ಸಾಮರ್ಥ್ಯವನ್ನು ಶ್ರೀಸಾಮಾನ್ಯನ ಒಳಿತಿಗಾಗಿ ಯಾವುದಾದರೂ ಒಂದು ರೀತಿಯಲ್ಲಿ ತೊಡಗಿಸಿಕೊಳ್ಳಬೇಕು. ಪ್ರತೀದಿನ ಈ ಅಗತ್ಯಗಳು ನಿನ್ನ ಮುಂದೆ ಬಂದೆ ಬರುತ್ತವೆ.ಹಾಗೆಯೇ ನೀನು ಸುತ್ತ ದೃಷ್ಟಿ ಹಾಯಿಸಿದರೆ ನಿನಗಾಗಿ ಕಾಯುತ್ತಿರುವ ಅವುಗಳನ್ನು ಕಾಣಬಹುದು. ನಿನ್ನ ಗೆಳೆಯನಿಗೆ ಸಹಾಯ ಬೇಕಿರಬಹುದು,ನಿನ್ನ ಉಪಾಧ್ಯಾಯರಿಗೆ ಸ್ವಯಂಸೇವಕ ಬೇಕಾಗಿರಬಹುದು ಅಥವಾ ನೀನು ಜೀವಿಸುತ್ತಿರುವ ಸಮುದಾಯಕ್ಕೆ ನಿನ್ನ ಕೊಡುಗೆಯ ಅಗತ್ಯ ಇರಲೂಬಹುದು. ಜಯದ ಪರಿವೆ ಇಲ್ಲದೆ, ಸೋಲಿನ ಹತಾಶೆಗೂ ಕುಗ್ಗದೆ ನಿನ್ನ ಉಪಯುಕ್ತ ಕೊಡುಗೆಗಳನ್ನು ನೀನು ಶ್ರಮವಹಿಸಿ ನೀಡಬಹುದು.<br /><br />Anagha Kirana ಅನಘ ಕಿರಣhttps://www.blogger.com/profile/09587762117139340360noreply@blogger.com